ಆ್ಯಪ್ನಗರ

ಡೈಲಿ ಯೋಗ: ಪ್ರಾಣಾಯಾಮಕ್ಕೆ ಮನಸ್ಸು ಸ್ಥಿರವಾಗಿರಲಿ

ಪ್ರಾಣಾಯಾಮಕ್ಕೆ ಕುಳಿತಾಗ ಮನಸ್ಸಿನ ಏಕಾಗ್ರತೆ ಕೂಡ ಬಹಳ ಮುಖ್ಯವಾಗಿರುತ್ತದೆ...

Vijaya Karnataka 28 Jun 2018, 5:00 am
ಪ್ರಾಣಾಯಾಮಕ್ಕೆ ಕುಳಿತಾಗ ಮನಸ್ಸಿನ ಏಕಾಗ್ರತೆ ಕೂಡ ಬಹಳ ಮುಖ್ಯವಾಗಿರುತ್ತದೆ. ಅನೇಕ ಬಾರಿ ಮನಸ್ಸಿನ ಚಂಚಲತೆ ಕಾರಣದಿಂದಾಗಿ ಪ್ರಾಣಾಯಾಮಕ್ಕೆ ಕುಳಿತ ನಂತರ ಪದೇ ಪದೆ ಎದ್ದು ಓಡಾಡುವುದು, ಮಾತನಾಡುವುದು ಮಾಡುತ್ತಿರುತ್ತೇವೆ. ಇದು ಸೂಕ್ತವಲ್ಲ. ಪ್ರಾಣಾಯಾಮಕ್ಕೆ ಕುಳಿತ ನಂತರ ಮುಗಿಯುವವರೆಗೆ ಶರೀರ ಮತ್ತು ಮನಸ್ಸಿನ ಸ್ಥಿರತೆ ಅತ್ಯಂತ ಮುಖ್ಯವಾಗಿರುತ್ತದೆ.
Vijaya Karnataka Web daily yoga pranayama benefits
ಡೈಲಿ ಯೋಗ: ಪ್ರಾಣಾಯಾಮಕ್ಕೆ ಮನಸ್ಸು ಸ್ಥಿರವಾಗಿರಲಿ


ತತ್ರೈಕಾಗ್ರಂ ಮನಃ ಕೃತ್ವಾಯತ ಚಿತ್ತೇಂದ್ರಿಯ ಕ್ರಯಃ |

ಉಪವಿಶ್ವಾಸನೇ ಯುಂಜ್ಯೌದ್ಯೋಗಮಾತ್ಮ ವಿಶುದ್ಧಮೇಃ |

ಭಗವದ್ಗೀತೆ

ಅರ್ಥ: ಆಸನದಲ್ಲಿ ಕುಳಿತುಕೊಂಡ ನಂತರ ಮನಸ್ಸು ಮತ್ತು ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡು ಮನಸ್ಸನ್ನು ಏಕಾಗ್ರಗೊಳಿಸಿ ಅಂತಃಕರಣದ ಶುದ್ಧಿಗಾಗಿ ಯೋಗದ ಅಭ್ಯಾಸ ಮಾಡಬೇಕು.

ಪ್ರಾಣಾಯಾಮಾದಲ್ಲಿ ಮನಸ್ಸನ್ನು ಸ್ಥಿರಗೊಳಿಸುವುದು ಅವಶ್ಯಕವಾಗಿದ್ದರೂ ಅದು ಅಷ್ಟು ಸುಲಭದ ಕೆಲಸವಲ್ಲ. ಹಾಗಾಗಿ ಮೊದಲು ಮನಸ್ಸನ್ನು ಸಹಜವಾದ ಉಸಿರಾಟಕ್ರಿಯೆ ಮೇಲೆ ಕೇಂದ್ರೀಕರಿಸಿ. ನಿರಂತರವಾದ ಉಸಿರಾಟಕ್ರಿಯೆಯನ್ನು ಗಮನಿಸಿ. ಪ್ರತಿ ಉಸಿರನ್ನು ತೆಗೆದುಕೊಳ್ಳುವಾಗ ಮತ್ತು ಹೊರ ಹಾಕುವಾಗ ಆಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ. ಈಗ ಮನಸ್ಸು ನಿಧಾನವಾಗಿ ಸ್ಥಿರತೆ ಕಡೆಗೆ ಬರುತ್ತದೆ. ಈಗ ಪ್ರಾಣಾಯಾಮದ ಕ್ರಿಯೆಗಳಲ್ಲಿ ತೊಡಗಿದಾಗ ಪ್ರಾಣಾಯಾಮದ ಸಂಪೂರ್ಣ ಲಾಭ ದೊರೆಯುವುದು.

ವಾಯುರೋಧನಾತ್‌ ರೀಯತೇ ಮನಃ !

ಜಾಲಪಕ್ಷವತ್‌ ರೋಧನೌಧನವಮ್‌ ||

ಉಪದೇಶ ಸಾರ

ಅರ್ಥ: ಬೇಡನು ಬಹಳಷ್ಟು ಎಚ್ಚರದಿಂದ ಹಕ್ಕಿಯನ್ನು ತನ್ನ ಬಲೆಯಲ್ಲಿ ಹಿಡಿಯುವಂತೆ ಪ್ರಾಣಾಯಾಮದ ಮೂಲಕ ಮನಸ್ಸನ್ನು ಹಿಡಿದು ಲಯಗೊಳಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ