ಆ್ಯಪ್ನಗರ

ಧ್ಯಾನ ಮಾಡುವವರ ಮನಸ್ಥಿತಿ ಹೀಗಿರುತ್ತೆ ನೋಡಿ

ಧ್ಯಾನವನ್ನು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಮಾಡಬಹುದು. ಆಫೀಸ್‌ ಕುರ್ಚಿಯಲ್ಲೇ ಕೂತು ಮಾಡಬಹುದು, ಟ್ರಾವೆಲ್‌ ಮಾಡುವಾಗ ಮಾಡಬಹುದು, ನೆಲದಲ್ಲಿ ಒಂದು ಚಾಪೆ ಅಥವಾ ಮ್ಯಾಟ್‌ ಹಾಕಿ ಕುಳಿತು ಮಾಡಬಹುದು.

Vijaya Karnataka Web 20 Jun 2019, 2:36 pm
ಬೆಳಗ್ಗೆ ಎದ್ದ ಕ್ಷಣದಿಂದ ಮಲಗುವವರೆಗೆ ಒತ್ತಡದಲ್ಲೇ ಆ ದಿನವನ್ನು ಕಳೆಯುತ್ತೇವೆ. ಮನೆ-ಮಕ್ಕಳ ಜವಾಬ್ದಾರಿ, ಟ್ರಾವೆಲ್‌ ಮಾಡುವಾಗ ಟ್ರಾಫಿಕ್‌ ಸಮಸ್ಯೆ, ಆಫೀಸ್‌ಗೆ ಬಂದರೆ ಗೋಲ್‌, ಟಾರ್ಗೆಟ್‌ ಹೀಗೆ ಇಡೀ ದಿನ ಒಂದೆಲ್ಲಾ ಒಂದು ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗುತ್ತೇವೆ.
Vijaya Karnataka Web modi meditation


ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದಂತೆ ಒಂದೊಂದೇ ಕಾಯಿಲೆಗಳು ನಮ್ಮ ದೇಹದಲ್ಲಿ ಬಂದು ಮನೆ ಮಾಡುತ್ತವೆ. ಒತ್ತಡವನ್ನು ಹೊರಹಾಕಿ ದೇಹ ಹಾಗೂ ಮನಸ್ಸನ್ನು ಆರೋಗ್ಯವಾಗಿಡಲು ಇರುವ ಮಾರ್ಗವೆಂದರೆ ಧ್ಯಾನ.

ಧ್ಯಾನ ಮಾಡಲು ಪದ್ಮಾಸನ/ವಜ್ರಾಸನ/ಸುಖಸಾನ ಇವುಗಳಲ್ಲಿ ನಿಮಗೆ ಕಂಫರ್ಟ್ ಅನಿಸುವ ರೀತಿಯಲ್ಲಿ ಕುಳಿತುಕೊಂಡು, ಕೈಗಳನ್ನು ಜ್ಞಾನ ಮುದ್ರೆಯಲ್ಲಿ ಅಥವಾ ಒಂದು ಕೈ ಮೇಲೆ ಕೈ ಹಿಡಿದು, ಕಣ್ಣನ್ನು ಮುಚ್ಚಿ ನಿಧಾನಕ್ಕೆ ಉಸಿರು ಎಳೆದು, ನಿಧಾನಕ್ಕೆ ಬಿಡಬೇಕು. ಈ ರೀತಿ 5 ನಿಮಿಷ ಮಾಡಿ ನಂತರ ಎರಡು ಕೈಗಳನ್ನು ಉಜ್ಜಿ ಕಣ್ಣಿಗೆ ಒತ್ತಿ ನಿಧಾನಕ್ಕೆ ಕಣ್ಣು ತೆಗೆಯಿರಿ.


ಧ್ಯಾನದ ಪ್ರಯೋಜನಗಳು
* ಈ ರೀತಿ ಮಾಡುವುದರಿಂದ ಮನಸ್ಸಿಗೆ ಆಹ್ಲಾದಕರ ಅನುಭವ ಉಂಟಾಗುವುದು.
* ಮಾನಸಿಕ ಒತ್ತಡ ದೂರವಾಗುವುದು.
* ಏಕಾಗ್ರತೆ ಹೆಚ್ಚಿಸುವುದು, ನಮ್ಮ ನಡವಳಿಕೆ ಮೇಲೂ ಪ್ರಭಾವ ಬೀರುವುದು.
* ಮನಸ್ಸಿನಲ್ಲಿರುವ ನಕಾರಾತ್ಮಕ ಭಾವನೆಗಳನ್ನು ಹೊರ ಹಾಕುತ್ತದೆ.
* ಕೋಪ, ಖಿನ್ನತೆ ದೂರವಾಗುವುದು.
* ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಯಾವುದೇ ವಿಷಯದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
* ಧನಾತ್ಮಕ ಚಿಂತನೆ ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ.
* ಧ್ಯಾನದಿಂದ ಜೀವನದ ಗುಣಮಟ್ಟ ಹೆಚ್ಚುವುದು.
ಪ್ರತಿದಿನ ಧ್ಯಾನ ಮಾಡಿ ನಿಮ್ಮ ಬದುಕಿನಲ್ಲಾದ ವ್ಯತ್ಯಾಸ ಗಮನಿಸಿ.

ಧ್ಯಾನ ಯಾರು ಬೇಕಾದರೂ ಮಾಡಬಹುದಾಗಿದ್ದು, ಕ್ರಮಬದ್ಧವಾಗಿ ಅಭ್ಯಾಸ ಮಾಡುವುದು ಹೇಗೆ ಎಂದು ಯೋಗ ಟೀಚರ್‌ ಬಳಿ ಕೇಳಿ ತಿಳಿದುಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ