ಆ್ಯಪ್ನಗರ

ಮಲ್ಲಯ್ಯನ ಪ್ರಿಯ ನುಚ್ಚು ಯಾತ್ರಿಗಳಿಗೆ

ಪಟ್ಟಣದ ಹೃದಯ ಭಾಗದಲ್ಲಿನ ಬನಶಂಕರಿ ದೇವಸ್ಥಾನದಲ್ಲಿ ಶ್ರೀಶೈಲ ಪಾದಯಾತ್ರಿಗಳಿಗೆ ಸಕಲ ಸೇವೆ ನೀಡಲು ಅಮೀನಗಡ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ವಾರ ಕಾಲ ಸೇವೆ ಮಾಡಲು ಸನ್ನದ್ಧರಾಗಿದ್ದಾರೆ.

ವಿಕ ಸುದ್ದಿಲೋಕ 25 Mar 2016, 8:23 pm
ಅಮೀನಗಡ : ಪಟ್ಟಣದ ಹೃದಯ ಭಾಗದಲ್ಲಿನ ಬನಶಂಕರಿ ದೇವಸ್ಥಾನದಲ್ಲಿ ಶ್ರೀಶೈಲ ಪಾದಯಾತ್ರಿಗಳಿಗೆ ಸಕಲ ಸೇವೆ ನೀಡಲು ಅಮೀನಗಡ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ವಾರ ಕಾಲ ಸೇವೆ ಮಾಡಲು ಸನ್ನದ್ಧರಾಗಿದ್ದಾರೆ.
Vijaya Karnataka Web
ಮಲ್ಲಯ್ಯನ ಪ್ರಿಯ ನುಚ್ಚು ಯಾತ್ರಿಗಳಿಗೆ


ಪಟ್ಟಣದ ಮೂಲಕ ಶ್ರೀಶೈಲಕ್ಕೆ ತೆರಳುವ ಯಾತ್ರಿಗಳಿಗೆ ಪ್ರತಿ ವರ್ಷವೂ ಹಗಲು ರಾತ್ರಿ ನಿರಂತರ ಸೇವೆ ನಡೆಯಲಿದ್ದು, ಮುಖ್ಯವಾಗಿ ಮಲ್ಲಯ್ಯನಿಗೆ ಪ್ರಮುಖ ಖಾದ್ಯ ಎನಿಸಿದ ಜೋಳದ ನುಚ್ಚು ಪಾದಯಾತ್ರಿಗಳಿಗೆ ರುಚಿ ಎನಿಸಿದೆ. ಜತೆಗೆ ದೇವಸ್ಥಾನದ ಮುಂಭಾಗ ಹಾಕಲಾದ ಬಹತ್ ಶಾಮಿಯಾನ ಪಾದಯಾತ್ರಿಗಳಿಗೆ ನೆರಳು ಒದಗಿಸಿ ದಣಿವು ನೀಗಿಸಲಿದೆ.

ಬೆಳಗ್ಗೆ ಉಪಹಾರ, ಮಧ್ಯಾಹ್ನ ಜೋಳದ ನುಚ್ಚು, ಸಾರು, ಜತೆಗೆ ಬಿಳಿಜೋಳದ ಕಡಕ್ ರೊಟ್ಟಿ ಸೇರಿದಂತೆ ಉಚಿತ ಆರೋಗ್ಯ ಸೇವೆ, ಸ್ನಾನದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಕೇವಲ ದೇವಸ್ಥಾನದಲ್ಲಿ ಮಾತ್ರವಲ್ಲದೇ ನಾನಾ ಕಡೆಗಳಲ್ಲಿ ಭಕ್ತರು ಚಹಾ, ಮಜ್ಜಿಗೆ, ಪಾನಕ, ಕಬ್ಬಿನ ಹಾಲು, ಕಲ್ಲಂಗಡಿ ವಿತರಿಸಲು ಮುಂದಾಗಿದ್ದಾರೆ. ಅಮೀನಗಡ, ಸೂಳೇಭಾವಿ, ಹುಲಗಿನಾಳ, ಕಲ್ಲಗೋನಾಳ, ಕುಣಿಬೆಂಚಿ ಗ್ರಾಮಸ್ಥರು ಈ ಸೇವೆಯಲ್ಲಿ ತೊಡಗಿದ್ದಾರೆ. ಹುಲಗಿನಾಳ ಗ್ರಾಮಸ್ಥರು 1 ಟ್ರ್ಯಾಕ್ಟರ್ ಖಡಕ್ ರೊಟ್ಟಿ ನೀಡಿರುವುದು ವಿಶೇಷವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ