ಆ್ಯಪ್ನಗರ

ಸುಕ್ಷೇತ್ರಕ್ಕೆ ಹರಿದು ಬಂದ ಕೃಷ್ಣೆ

ಆಲಮಟ್ಟಿ ಜಲಾಶಯದಿಂದ ರಾಯಚೂರ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಸೋಮವಾರದವರೆಗೆ 1.5 ಟಿಎಂಸಿ ನೀರು ಬಿಟ್ಟ ಪರಿಣಾಮ ನಾರಾಯಣಪುರ ಜಲಾಶಯದ ಹಿನ್ನೀರು ಸಂಗ್ರಹಗೊಂಡಿದೆ.

ವಿಕ ಸುದ್ದಿಲೋಕ 27 Apr 2016, 9:00 am

ಕೂಡಲಸಂಗಮ: ಆಲಮಟ್ಟಿ ಜಲಾಶಯದಿಂದ ರಾಯಚೂರ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಸೋಮವಾರದವರೆಗೆ 1.5 ಟಿಎಂಸಿ ನೀರು ಬಿಟ್ಟ ಪರಿಣಾಮ ನಾರಾಯಣಪುರ ಜಲಾಶಯದ ಹಿನ್ನೀರು ಸಂಗ್ರಹಗೊಂಡಿದೆ.

ಆಲಮಟ್ಟಿ ಜಲಾಶಯದಿಂದ ಭಾನುವಾರ, ಸೋಮವಾರ ನೀರು ಹರಿಸಿದ ಪರಿಣಾಮ ಮಂಗಳವಾರ ಬೆಳಗ್ಗೆ ಸುಕ್ಷೇತ್ರ ಕೂಡಲಸಂಗಮದ ಸಂಗಮೇಶ್ವರ ದೇವಾಲಯದ ಮುಂಭಾಗದಲ್ಲಿ ನೀರು ತುಂಬಿಕೊಂಡಿದ್ದರಿಂದ ಸುಕ್ಷೇತ್ರಕ್ಕೆ ಬಂದ ಭಕ್ತರು ಮಂಗಳವಾರ ನದಿಯಲ್ಲಿ ಸ್ನಾನ ಮಾಡುವ ಮೂಲಕ ಪಾವನರಾದರು.

ಸುಕ್ಷೇತ್ರದ ಕ್ಷೇತ್ರಾಧಿಪತಿ ಸಂಗಮನಾಥನ ಜಾತ್ರೆ ಬುಧವಾರ ಇರುವುದರಿಂದ ಸುಕ್ಷೇತ್ರಕ್ಕೆ ಬಂದ ಭಕ್ತರಿಗೆ ನೀರು ಬಿಟ್ಟಿರುವುದು ತುಂಬಾ ಅನುಕೂಲವಾಗುವುದು ನದಿ ತೀರದ ಗ್ರಾಮಸ್ಥರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ