ಆ್ಯಪ್ನಗರ

ಸಂಗಮೇಶ ಶತಕೋಟಿ ಒಡೆಯ

ಬಾಗಲಕೋಟ: ಜಿಲ್ಲೆಯ ಜಮಖಂಡಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಂಗಮೇಶ ನಿರಾಣಿ ದಶಕೋಟಿ ಒಡೆಯರಾಗಿದ್ದಾರೆ!

Vijaya Karnataka 21 Apr 2018, 5:00 am
ಬಾಗಲಕೋಟ: ಜಿಲ್ಲೆಯ ಜಮಖಂಡಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಂಗಮೇಶ ನಿರಾಣಿ ದಶಕೋಟಿ ಒಡೆಯರಾಗಿದ್ದಾರೆ!
Vijaya Karnataka Web
ಸಂಗಮೇಶ ಶತಕೋಟಿ ಒಡೆಯ


ಬಿಜೆಪಿಯಿಂದ ಸಿಡಿದು ಹೊರಬಂದಿರುವ ಸಂಗಮೇಶ ಅವರು ಶುಕ್ರವಾರ ನಾಮಪತ್ರದೊಂದಿಗೆ ಆಸ್ತಿ ಮಾಹಿತಿ ನೀಡಿದ್ದಾರೆ. ಸಂಗಮೇಶ ಅವರ ಚರಾಸ್ತಿ 14 ಕೋಟಿ 61ಲಕ್ಷ 16,994 ರೂ.ನಷ್ಟಿದೆ. ನಿರಾಣಿ ಶುಗರ್ಸ್‌ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅವರು ಉದ್ಯಮಿಯಾಗಿ ಹೆಸರುವಾಸಿಯಾಗಿದ್ದಾರೆ. ಸಂಗಮೇಶ ಬಳಿ 4ಲಕ್ಷ ರೂ. ಇದೆ, 40 ಗ್ರಾಂ ಚಿನ್ನ, 50ಸಾವಿರ ಮೌಲ್ಯದ ಬೆಳ್ಳಿ, 20 ಸಾವಿರ ರೂ.ಫರ್ನಿಚರ್‌ ಇದೆ. 3ಕೋಟಿ 97ಲಕ್ಷ ರೂ.ಆಸ್ತಿಯಿದೆ. ನಾನಾ ಬ್ಯಾಂಕ್‌ಗಳಿಂದ 5ಕೋಟಿ 80ಲಕ್ಷ ರೂ.ಸಾಲ ಪಡೆದಿದ್ದಾರೆ. ಪತ್ನಿ ದಾಕ್ಷಾಯಿಣಿ ಅವರ ಹೆಸರಿನಲ್ಲೂ 5ಕೋಟಿ 47ಲಕ್ಷ ರೂ.ಸಾಲವಿದೆ. ನಾನಾ ಉದ್ಯಮಗಳಲ್ಲಿ 8ಕೋಟಿ 81ಲಕ್ಷ 90ಸಾವಿರ ರೂ.ಹೂಡಿಕೆ ಮಾಡಿದ್ದಾರೆ. ಒಟ್ಟು 34 ಎಕರೆ ಕೃಷಿ ಜಮೀನು ಹೊಂದಿದ್ದಾರೆ. 3ಕೋಟಿ 97 ಲಕ್ಷ, 10 ಸಾವಿರ ರೂ.ಜಮೀನಿನ ಮೌಲ್ಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ