ಆ್ಯಪ್ನಗರ

ಸಿಎಂಗೆ ಅನಂತಕುಮಾರ ಸವಾಲ್‌

ಬಾಗಲಕೋಟ : 'ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಜತೆಗಿರುವ ಫೋಟೊವನ್ನು 24 ಗಂಟೆಯೊಳಗಾಗಿ ಬಹಿರಂಗಪಡಿಸಬೇಕು' ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ ಸವಾಲು ಹಾಕಿದರು.

Vijaya Karnataka Web 3 May 2018, 5:00 am
ಬಾಗಲಕೋಟ : 'ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಜತೆಗಿರುವ ಫೋಟೊವನ್ನು 24 ಗಂಟೆಯೊಳಗಾಗಿ ಬಹಿರಂಗಪಡಿಸಬೇಕು' ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ ಸವಾಲು ಹಾಕಿದರು.
Vijaya Karnataka Web
ಸಿಎಂಗೆ ಅನಂತಕುಮಾರ ಸವಾಲ್‌


ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಸಿಎಂ ಸಿದ್ದರಾಮಯ್ಯ ಅವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಶಾ, ಕುಮಾರಸ್ವಾಮಿ ಜತೆಗಿರುವ ಫೋಟೊವನ್ನು 24 ಗಂಟೆಯೊಳಗಾಗಿ ಬಹಿರಂಗಪಡಿಸಲಿ. ಇಲ್ಲವಾದರೆ ಚಾಮುಂಡೇಶ್ವರಿ, ಬಾದಾಮಿ ಮತಕ್ಷೇತ್ರದಿಂದ ಕಣದಿಂದ ನಿವೃತ್ತರಾಗಬೇಕು. ರಾಜ್ಯದ ಜನರ ಮುಂದೆ ತಾವು ಹೇಳಿದ್ದು ಸುಳ್ಳು ಎಂದು ಒಪ್ಪಿಕೊಂಡು ಸಿಎಂ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು' ಎಂದು ಒತ್ತಾಯಿಸಿದರು.

'ಸುಳ್ಳಿಗೆ ಯಾವುದೇ ಸಾಕ್ಷಿ ಇರುವುದಿಲ್ಲ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಧ್ಯೆ ಒಳ ಒಪ್ಪಂದವಾಗಿದೆ. ಸಿಎಂಗೆ ನೈತಿಕತೆಯಿದ್ದರೆ ಬಿಬಿಎಂಪಿಯಲ್ಲಿರುವ ಮೈತ್ರಿ ಆಡಳಿತದಿಂದ ಹೊರಬರಬೇಕು. ಒಳ ಒಪ್ಪಂದ, ಹೊರ ಒಪ್ಪಂದ ಇರುವುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಮಾತ್ರ, ಬಿಜೆಪಿ ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ. ಸಿಎಂ ಸಿದ್ದರಾಮಯ್ಯ 70 ಲಕ್ಷ ರೂ. ಮೌಲ್ಯದ ಹುಬ್ಲೋ ವಾಚ್‌ ಧರಿಸಿ ಓಡಾಡುತ್ತಿದ್ದಾರೆ. ಈ ಬಗ್ಗೆ ಚುನಾವಣೆ ಅಫಿಡೆವಿಟ್‌ನಲ್ಲಿ ಉಲ್ಲೇಖಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಇದೊಂದು ನಿಗೂಢವಾಗಿದ್ದು, ಅವರು ವಾಚ್‌ ವಿಷಯ ಬಹಿರಂಗಪಡಿಸದಿದ್ದರೆ ನಾಮಪತ್ರ ಪ್ರಶ್ನಾರ್ಥಕ ಚಿಹ್ನೆಯಾಗುತ್ತದೆ' ಎಂದು ಟೀಕಿಸಿದರು. 'ಬಾಗಲಕೋಟ ಶಾಸಕ ಮೇಟಿ ಕರ್ನಾಟಕಕ್ಕೆ ದುಸ್ವಪ್ನವಾಗಿದ್ದಾರೆ. ಇಂತಹ ರಾಜಕಾರಣಿ ಬಾಗಲಕೋಟ ಜನರಿಗೆ ಬೇಕಾಗಿಲ್ಲ. ಈ ಬಾರಿ ಚರಂತಿಮಠ ಗೆಲುವು ನಿಶ್ಚಿತ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ