ಆ್ಯಪ್ನಗರ

ಇದು ಮರಣದ ಹೊಂಡ...!

ಬೇವೂರ : ಕನಿಷ್ಠ ಒಂದಾದರೂ ಬಲಿ ಪಡೆಯಬೇಕೆಂದು ಆ ಹೊಂಡ ಕಾಯುತ್ತಿರುವಂತಿದೆ. ಅದಕ್ಕೆ ಬೆಂಬಲ ನೀಡಲು ಗ್ರಾಮ ಪಂಚಾಯಿತಿಯವರು ತಮ್ಮ ದಿವ್ಯ ನಿರ್ಲಕ್ಷ ್ಯವನ್ನು ಮುಂದುವರಿಸಿದ್ದಾರೆ.

Vijaya Karnataka 8 Jul 2018, 5:00 am
ಬೇವೂರ : ಕನಿಷ್ಠ ಒಂದಾದರೂ ಬಲಿ ಪಡೆಯಬೇಕೆಂದು ಆ ಹೊಂಡ ಕಾಯುತ್ತಿರುವಂತಿದೆ. ಅದಕ್ಕೆ ಬೆಂಬಲ ನೀಡಲು ಗ್ರಾಮ ಪಂಚಾಯಿತಿಯವರು ತಮ್ಮ ದಿವ್ಯ ನಿರ್ಲಕ್ಷ ್ಯವನ್ನು ಮುಂದುವರಿಸಿದ್ದಾರೆ.
Vijaya Karnataka Web
ಇದು ಮರಣದ ಹೊಂಡ...!


ಹೌದು..! ಇದು ಇರುವುದು ಸಮೀಪದ ಹಳೆ ರಾಂಪುರ ಗ್ರಾಮದ ಒಳರಸ್ತೆಯಲ್ಲಿ ಪ್ರಮುಖ ಹೆದ್ದಾರಿಯಿಂದ ದಾಟಿ ಸ್ವಲ್ಪ ಕ್ರಮಿಸುವಷ್ಟರಲ್ಲೇ ಇದೆ. ನಿತ್ಯ ಅಸಂಖ್ಯ ಬೈಕ್‌ಗಳು, ಪಾದಚಾರಿಗಳು ಸಂಚರಿಸುವ ರಸ್ತೆ ಇದು.

ಗ್ರಾಪಂಗಳು ಸಾರ್ವಜನಿಕರಿಗಾಗಿ ಇರುವ, ಸಾರ್ವಜನಿಕರ ದುಡ್ಡಿನಲ್ಲೇ ನಡೆಯುವ ಸಂಸ್ಥೆಗಳು, ಹೀಗಾಗಿ ಸ್ಥಳೀಯ ಗ್ರಾಪಂ, ಜನರ ವಿಶ್ವಾಸ ಕಳೆದುಕೊಳ್ಳುವುದರಲ್ಲಿ ಪೈಪೋಟಿಗೆ ಬಿದ್ದಂತಿವೆ.

ಹಗಲಲ್ಲಿ ಈ ಬಲಿ ಹೊಂಡಕಾಣಬಹುದು, ಆದರೆ ರಾತ್ರಿಯಾದರೆ ಸರಿಯಾಗಿ ಜನರ ಗಮನಕ್ಕೆ ಬರುವುದಿಲ್ಲ, ಇನ್ನೂ ಮಳೆಯಾದರೆ ರಸ್ತೆ ಚರಂಡಿಯೆಲ್ಲ ಸಮಾನವಾಗಿ ಜಲಾವೃತಗೊಳ್ಳುತ್ತವೆ. ಹೀಗಾದರೆ ಜನಸಾಮಾನ್ಯರ ಗತಿಯೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಜನ ಬೀದಿಗಿಳಿದು ಪ್ರತಿಭಟಿಸಿದರೆ ಮಾತ್ರ ಮೈಮುರಿದು ಖುರ್ಚಿ ಬಿಟ್ಟು ಎದ್ದು ಬರುತ್ತೇವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಪ್ರತಿಜ್ಞೆ ಮಾಡಿಕೊಂಡಿರಬಹುದೇ ಎಂದು ಜನರ ಕೇಳುತ್ತಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ