ಆ್ಯಪ್ನಗರ

ಜಿಲ್ಲೆಯಲ್ಲಿ ಬೆಂಬಿಡದ ಮಳೆ

ಬಾಗಲಕೋಟ: ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಹಲವು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.

Vijaya Karnataka 14 Jul 2018, 5:00 am
ಬಾಗಲಕೋಟ: ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಹಲವು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.
Vijaya Karnataka Web
ಜಿಲ್ಲೆಯಲ್ಲಿ ಬೆಂಬಿಡದ ಮಳೆ

ಮಳೆಗೆ ಕಾಯುತ್ತ ಕುಳಿತ ರೈತಾಪಿ ವರ್ಗದಲ್ಲಿ ಸುರಿಯುತ್ತಿರುವ ಮಳೆ ಸಂತಸ ಮೂಡಿಸಿದೆ. ಕಳೆದ ಬುಧವಾರದಿಂದ ಜಿಲ್ಲೆಯ ಹಲವೆಡೆ ಮಳೆ ಸುರಿಯುತ್ತಿದ್ದು ಹೀಗೆ ನಿರಂತರ ಸುರಿಯುತ್ತಿರುವ ಮಳೆಗೆ ಭೂಮಿ ತಂಪಾಗುತ್ತಿದ್ದು ಜಮೀನುಗಳಲ್ಲಿ ನೀರು ನಿಂತಿದೆ.
ಹಳೆ ಬಾಗಲಕೋಟ, ವಿದ್ಯಾಗಿರಿ, ನವನಗರ ಸೇರಿದಂತೆ ಜಿಲ್ಲೆಯ ಮುಧೋಳ, ಮಹಾಲಿಂಗಪುರ, ಹುನಗುಂದ, ಅಮೀನಗಡ, ಕಮತಗಿ, ಇಳಕಲ್‌, ಬಾದಾಮಿ, ಜಮಖಂಡಿ ಸೇರಿದಂತೆ ಎಲ್ಲೆಡೆ ಮಳೆ ಆಗುತ್ತಿದೆ. ಗುರುವಾರ ಅಮೀನಗಡ, ಹುನಗುಂದ ಸುತ್ತಲಿನ ಭಾಗದಲ್ಲಿ ರಾತ್ರಿಯಿಡೀ ಜಿಟಿಜಿಟಿ ಮಳೆ ಮುಂದುವರೆದಿತ್ತು. ಶುಕ್ರವಾರವೂ ಮಳೆ ಮುಂದುವರೆದಿದ್ದು ಆಗಾಗ ಬಿಸಿಲು ಕಾಣಿಸಿಕೊಂಡರೂ ಜಿಲ್ಲೆಯ ಕೆಲ ಭಾಗದಲ್ಲಿ ಮಳೆ ಸುರಿದಿದ್ದು ಎಲ್ಲೆಡೆ ಸಂಪೂರ್ಣ ಮೋಡ ಕವಿದ ವಾತಾವರಣ ಮುಂದುವರೆದಿದೆ.
ಶುಕ್ರವಾರ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮಕ್ಕೆ ಮಳೆ ಸಾಕ್ಷಿಯಾಯಿತು. ರೈತರು ಒಂದೆಡೆ ಮಣ್ಣಿನ ಎತ್ತುಗಳ ಪೂಜೆ ಸಂಭ್ರಮದಲ್ಲಿದ್ದರು. ಅದಕ್ಕೆ ತಾನೂ ಸಹ ಸಾಥ್‌ ನೀಡುವಂತೆ ಮಳೆ ಸಿಂಚನವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ