ಆ್ಯಪ್ನಗರ

ನಟಸಾರ್ವಭೌಮ ಶೂಟಿಂಗ್‌ಗೆ ವಿರೋಧ

ಬಾಗಲಕೋಟ: ಪ್ರವಾಸಿ ತಾಣದ ಅಂದ ಕೆಡಿಸಲಾಗಿದೆ ಎಂದು ಆರೋಪಿಸಿ ಜಿಲ್ಲೆಯ ಪ್ರವಾಸಿ ತಾಣ ಮಹಾಕೂಟದಲ್ಲಿ ಶನಿವಾರ ನಟಸಾರ್ವಭೌಮ ಸಿನಿಮಾ ಚಿತ್ರೀಕರಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.

Vijaya Karnataka 15 Jul 2018, 5:00 am
ಬಾಗಲಕೋಟ: ಪ್ರವಾಸಿ ತಾಣದ ಅಂದ ಕೆಡಿಸಲಾಗಿದೆ ಎಂದು ಆರೋಪಿಸಿ ಜಿಲ್ಲೆಯ ಪ್ರವಾಸಿ ತಾಣ ಮಹಾಕೂಟದಲ್ಲಿ ಶನಿವಾರ ನಟಸಾರ್ವಭೌಮ ಸಿನಿಮಾ ಚಿತ್ರೀಕರಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.
Vijaya Karnataka Web
ನಟಸಾರ್ವಭೌಮ ಶೂಟಿಂಗ್‌ಗೆ ವಿರೋಧ

ಜಿಲ್ಲೆಯ ಪ್ರವಾಸಿ ಹಾಗೂ ಧಾರ್ಮಿಕ ತಾಣ ಮಹಾಕೂಟದಲ್ಲಿ ಪುನೀತ್‌ ರಾಜಕುಮಾರ್‌ ಅಭಿನಯದ ನಟಸಾರ್ವಭೌಮ ಸಿನಿಮಾದ ಶೂಟಿಂಗ್‌ಗಾಗಿ ಸೆಟ್‌ ಅಳವಡಿಸಲಾಗಿತ್ತು. ಸೆಟ್‌ ಹಾಕುವ ಮೂಲಕ ತಾಣದ ಅಂದ ಕೆಡಿಸಲಾಗುತ್ತದೆ ಎಂದು ಬಾದಾಮಿಯ ಕೆಲವರು ವಿರೋಧ ವ್ಯಕ್ತಪಡಿಸಿದರು. ಈ ಕುರಿತು ಸಿನಿಮಾದ ನಿರ್ದೇಶಕ ಪವನ್‌ ಒಡೆಯರ್‌ ಸ್ಪಷ್ಟೀಕರಣ ನೀಡಿದರು. ನಂತರ ಪೊಲೀಸ್‌ ಭದ್ರತೆಯಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ ಆರಂಭಗೊಂಡಿತು. ಮಹಾಕೂಟದಲ್ಲಿ ಚಿತ್ರೀಕರಣ ನಡೆಸಲು ಸಿನಿಮಾ ತಂಡ ಮೊದಲೇ ಅನುಮತಿ ಪಡೆದಿತ್ತು. ಆದರೆ ಪುಷ್ಕರಣಿಯಲ್ಲಿ ಚಿತ್ರೀಕರಣಕ್ಕಾಗಿ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲವರು 'ಪುಷ್ಕರಣಿಯಲ್ಲಿ ಸೆಟ್‌ ಅಳವಡಿಸಲು ನೀರು ಖಾಲಿ ಮಾಡಿಸಲಾಗಿದೆ. ಸೆಟ್‌ ಹಾಕಿದ ನಂತರ ನೀರು ತುಂಬಿಸಲಾಗಿದೆ. ಸೆಟ್‌ ಹಾಕಿ ಪ್ರಾಕೃತಿಕ ಸೌಂದರ್ಯ ಹಾಳು ಮಾಡುವುದರಿಂದ ಅಂತರ್ಜಲ ಕುಸಿಯುತ್ತದೆ. ನೈಸರ್ಗಿಕ ಬುಗ್ಗೆಯ ಮೂಲ ನಾಶವಾಗುತ್ತದೆ. ತಕ್ಷಣ ಶೂಟಿಂಗ್‌ ರದ್ದುಗೊಳಿಸಬೇಕು'ಎಂದು ಕೆಲವರು ಒತ್ತಾಯಿಸಿದರು. ಬಾದಾಮಿಯ ನಿಸರ್ಗ ಬಳಗದ ಅಧ್ಯಕ್ಷ ಎಸ್‌.ಎಚ್‌.ವಾಸನ ಕೂಡ ಮಹಾಕೂಟದ ನೈಸರ್ಗಿಕ ಸೌಂದರ್ಯ ಹಾಳು ಮಾಡಬಾರದು ಎಂದು ಆಗ್ರಹಿಸಿದರು.
ಈ ಕುರಿತು ನಿರ್ದೇಶಕ ಪವನ್‌ ಒಡೆಯರ್‌ 'ನಾವು ಕೃತಕವಾಗಿ ನೀರು ಖಾಲಿ ಮಾಡಿಸಿಲ್ಲ. ಸಹಜವಾಗಿ ಮೂರು ದಿನಗಳಿಗೊಮ್ಮೆ ಹೊಂಡ ಖಾಲಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸೆಟ್‌ ಹಾಕಿದ್ದೇವೆ. ಪುಷ್ಕರಣಿಗೆ ಯಾವುದೇ ಹಾನಿ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದರು. ನಟಸಾರ್ವಭೌಮ ಚಿತ್ರೀಕರಣಕ್ಕಾಗಿ ಪುನೀತ್‌ ಮಹಾಕೂಟಕ್ಕೆ ಬಂದಿದ್ದಾರೆ. ಪುನೀತ್‌ ಹಾಗೂ ರವಿಶಂಕರ್‌ ಅಭಿನಯದ ಕ್ಲೈಮ್ಯಾಕ್ಸ್‌ ದೃಶ್ಯಗಳನ್ನು ಚಿತ್ರೀಕರಿಸಲು ಮಹಾಕೂಟದ ಪುಷ್ಕರಣಿಯಲ್ಲಿ ಸೆಟ್‌ ಅಳವಡಿಸಲಾಗಿದೆ. ಜು.14ರಿಂದ ಆರಂಭಗೊಂಡಿರುವ ಚಿತ್ರೀಕರಣ ಜು.22ವರೆಗೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ