ಬಾಗಲಕೋಟ: ಕುಡಿವ ನೀರು ಖಾಸಗೀಕರಣ ವಿರೋಧಿಸಿ ನಾನಾ ಮಹಿಳಾ ಸಂಘಟನೆಗಳು ಶುಕ್ರವಾರ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದವು.
ನಗರದ 200 ಕ್ಕೂ ಅಧಿಕ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಮಹಿಳಾ ಸಮಖ್ಯ ಜಿಲ್ಲಾ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿ ನೀರಿನ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಶಿರಸಗಿ ನಾಗಪ್ಪ ಅವರಿಗೆ ಮನವಿ ಸಲ್ಲಿಸಿದರು.
ನೀರು ಪ್ರಾಕೃತಿಕ ಸಂಪನ್ಮೂಲ,ಸರ್ವರಿಗೂ ಸೇರಿದ ನೀರನ್ನು ಮಾರಾಟ ಮಾಡಿ ಬರಿದು ಮಾಡಲು ಹೊರಟ ರಾಷ್ಟ್ರೀಯ ನೀತಿ ಅವೈಜ್ಞಾನಿಕವಾಗಿದ್ದು, ಕೂಡಲೇ ಈ ನೀತಿಯನ್ನು ಕೈಬಿಡಬೇಕು. ಈಗಾಗಲೇ ಕೆರೆ, ನದಿ, ಜಲಾಶಯಗಳ ನಿರ್ವಹಣೆ ಹಾಗೂ ಅದನ್ನು ಅಭಿವೃದ್ಧಿಗೊಳಿಸುವ ನೆಪದಲ್ಲಿ ರಾಜ್ಯದ ನೀರಿನ ಮೂಲಗಳನ್ನು ಖಾಸಗಿ ಕಂಪನಿಗಳ ಕೈಗೆ ಒಪ್ಪಿಸುತ್ತಿರುವುದನ್ನು ನಿಲ್ಲಿಸಬೇಕು. ರಾಜ್ಯ ಸರಕಾರ ರಾಷ್ಟ್ರೀಯ ನೀರಿನ ನೀತಿ 2012 ನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಮಹಿಳಾ ಸಮಖ್ಯ, ನವಚೇತನ ಮಹಿಳಾ ಒಕ್ಕೂಟ, ಪ್ರಗತಿ ಮಹಿಳಾ ಒಕ್ಕೂಟ, ಸ್ಫೂರ್ತಿ ಮಹಿಳಾ ಒಕ್ಕೂಟ, ಜ್ಞಾನಜ್ಯೋತಿ ಮಹಿಳಾ ಒಕ್ಕೂಟ, ಕಾಮಧೇನು ಮಹಿಳಾ ಒಕ್ಕೂಟದ ಸಹಯೋಗದಲ್ಲಿ ನಡೆದ ಮೆರವಣಿಗೆಯಲ್ಲಿ ಪಾರ್ವತಿ ಹಿರೇಮಠ, ಇಂದ್ರವ್ವ ಚಲವಾದಿ, ಮೀನಾಕ್ಷಿ ಗೌಡರ, ಉದ್ದವ್ವ ಗೌಡರ, ಪುಷ್ಪಾ ಪಾಟೀಲ ಮತ್ತಿತರರು ಇದ್ದರು.
ನಗರದ 200 ಕ್ಕೂ ಅಧಿಕ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಮಹಿಳಾ ಸಮಖ್ಯ ಜಿಲ್ಲಾ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿ ನೀರಿನ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಶಿರಸಗಿ ನಾಗಪ್ಪ ಅವರಿಗೆ ಮನವಿ ಸಲ್ಲಿಸಿದರು.
ನೀರು ಪ್ರಾಕೃತಿಕ ಸಂಪನ್ಮೂಲ,ಸರ್ವರಿಗೂ ಸೇರಿದ ನೀರನ್ನು ಮಾರಾಟ ಮಾಡಿ ಬರಿದು ಮಾಡಲು ಹೊರಟ ರಾಷ್ಟ್ರೀಯ ನೀತಿ ಅವೈಜ್ಞಾನಿಕವಾಗಿದ್ದು, ಕೂಡಲೇ ಈ ನೀತಿಯನ್ನು ಕೈಬಿಡಬೇಕು. ಈಗಾಗಲೇ ಕೆರೆ, ನದಿ, ಜಲಾಶಯಗಳ ನಿರ್ವಹಣೆ ಹಾಗೂ ಅದನ್ನು ಅಭಿವೃದ್ಧಿಗೊಳಿಸುವ ನೆಪದಲ್ಲಿ ರಾಜ್ಯದ ನೀರಿನ ಮೂಲಗಳನ್ನು ಖಾಸಗಿ ಕಂಪನಿಗಳ ಕೈಗೆ ಒಪ್ಪಿಸುತ್ತಿರುವುದನ್ನು ನಿಲ್ಲಿಸಬೇಕು. ರಾಜ್ಯ ಸರಕಾರ ರಾಷ್ಟ್ರೀಯ ನೀರಿನ ನೀತಿ 2012 ನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಮಹಿಳಾ ಸಮಖ್ಯ, ನವಚೇತನ ಮಹಿಳಾ ಒಕ್ಕೂಟ, ಪ್ರಗತಿ ಮಹಿಳಾ ಒಕ್ಕೂಟ, ಸ್ಫೂರ್ತಿ ಮಹಿಳಾ ಒಕ್ಕೂಟ, ಜ್ಞಾನಜ್ಯೋತಿ ಮಹಿಳಾ ಒಕ್ಕೂಟ, ಕಾಮಧೇನು ಮಹಿಳಾ ಒಕ್ಕೂಟದ ಸಹಯೋಗದಲ್ಲಿ ನಡೆದ ಮೆರವಣಿಗೆಯಲ್ಲಿ ಪಾರ್ವತಿ ಹಿರೇಮಠ, ಇಂದ್ರವ್ವ ಚಲವಾದಿ, ಮೀನಾಕ್ಷಿ ಗೌಡರ, ಉದ್ದವ್ವ ಗೌಡರ, ಪುಷ್ಪಾ ಪಾಟೀಲ ಮತ್ತಿತರರು ಇದ್ದರು.