ಬಾಗಲಕೋಟ: ಕಾಂಗ್ರೆಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ ಶನಿವಾರ ಬಾದಾಮಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಮತ ಯಾಚಿಸಿದರು.
ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿಯವರೊಂದಿಗೆ ಬೂದಿಹಾಳ ಎಸ್.ಎಚ್, ಜಕನೂರ, ಮುಂಬರಡ್ಡಿಕೊಪ್ಪ, ಹೆಬ್ಬಳ್ಳಿ, ಸುಳ್ಳ, ಕಿತ್ತಲಿ, ಕಳಸ ಹಾಗೂ ಗೋವಿನಕೊಪ್ಪ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಲಾಯಿತು. ‘‘ಕೇಂದ್ರದ ಯುಪಿಎ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಗಳ ಸಾಧನೆ ಪರಿಗಣಿಸಿ ಮತ ನೀಡಬೇಕು’’ ಎಂದು ಸರನಾಯಕ ಜನರಲ್ಲಿ ಮನವಿ ಮಾಡಿಕೊಂಡರು.
ಜಿಪಂ ಸದಸ್ಯ ಎಫ್.ಆರ್.ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದನಗೌಡ ಪಾಟೀಲ, ಮುಖಂಡರಾದ ಎಸ್.ಡಿ.ಜೋಗಿನ, ಎಂ.ಡಿ.ಯಲಿಗಾರ, ಎಂ.ಎಚ್.ಚಲವಾದಿ, ಮುತ್ತಣ್ಣ ಯರಗೊಪ್ಪ, ಬಸವರಾಜ ಮೇಗಲಮನಿ, ರಾಜು ಅಂಬಿಗೇರ, ಬಸವರಾಜ ಪಟ್ಟದಕಲ್ಲ, ಮಹೇಶ ಹೊಸಗೌಡರ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿಯವರೊಂದಿಗೆ ಬೂದಿಹಾಳ ಎಸ್.ಎಚ್, ಜಕನೂರ, ಮುಂಬರಡ್ಡಿಕೊಪ್ಪ, ಹೆಬ್ಬಳ್ಳಿ, ಸುಳ್ಳ, ಕಿತ್ತಲಿ, ಕಳಸ ಹಾಗೂ ಗೋವಿನಕೊಪ್ಪ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಲಾಯಿತು. ‘‘ಕೇಂದ್ರದ ಯುಪಿಎ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಗಳ ಸಾಧನೆ ಪರಿಗಣಿಸಿ ಮತ ನೀಡಬೇಕು’’ ಎಂದು ಸರನಾಯಕ ಜನರಲ್ಲಿ ಮನವಿ ಮಾಡಿಕೊಂಡರು.
ಜಿಪಂ ಸದಸ್ಯ ಎಫ್.ಆರ್.ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದನಗೌಡ ಪಾಟೀಲ, ಮುಖಂಡರಾದ ಎಸ್.ಡಿ.ಜೋಗಿನ, ಎಂ.ಡಿ.ಯಲಿಗಾರ, ಎಂ.ಎಚ್.ಚಲವಾದಿ, ಮುತ್ತಣ್ಣ ಯರಗೊಪ್ಪ, ಬಸವರಾಜ ಮೇಗಲಮನಿ, ರಾಜು ಅಂಬಿಗೇರ, ಬಸವರಾಜ ಪಟ್ಟದಕಲ್ಲ, ಮಹೇಶ ಹೊಸಗೌಡರ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.