ರಬಕವಿ/ಬನಹಟ್ಟಿ: ತೇರದಾಳ ವಲಯದ ವಿಶೇಷ ತಹಸೀಲ್ದಾರ್ ಎಸ್.ಬಿ.ಕಾಂಬಳೆ ಬುಧವಾರ ನಗರದ ಕಂದಾಯ ಕಚೇರಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.
ತೇರದಾಳ ವಲಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ತ್ವರಿತ ವಿಲೇವಾರಿಗೆ ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆ ನಿಟ್ಟಿನಲ್ಲಿ ಕಡತಗಳ ಪರಿಶೀಲನೆ ನಡೆಸಿರುವುದಾಗಿ ಅವರು ತಿಳಿಸಿದರು. ಅರ್ಹ ಪಿಂಚಣಿದಾರರಿಗೂ ಪಿಂಚಣಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪಿಂಚಣಿದಾರರಿಗೆ ಪಿಂಚಣಿ ಪತ್ರ ವಿತರಿಸಿದರು. ಕಂದಾಯ ನಿರೀಕ್ಷಕ ಎಸ್.ಬಿ.ಕಾಗಿಯವರ, ಸ್ಥಳೀಯ ಕಂದಾಯ ಅಧಿಕಾರಿ ಎಂ.ಜಿ.ಪಠಾಣ, ಎಸ್.ಎಸ್.ಷಣ್ಮುಖ ಇದ್ದರು.
ತೇರದಾಳ ವಲಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ತ್ವರಿತ ವಿಲೇವಾರಿಗೆ ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆ ನಿಟ್ಟಿನಲ್ಲಿ ಕಡತಗಳ ಪರಿಶೀಲನೆ ನಡೆಸಿರುವುದಾಗಿ ಅವರು ತಿಳಿಸಿದರು. ಅರ್ಹ ಪಿಂಚಣಿದಾರರಿಗೂ ಪಿಂಚಣಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪಿಂಚಣಿದಾರರಿಗೆ ಪಿಂಚಣಿ ಪತ್ರ ವಿತರಿಸಿದರು. ಕಂದಾಯ ನಿರೀಕ್ಷಕ ಎಸ್.ಬಿ.ಕಾಗಿಯವರ, ಸ್ಥಳೀಯ ಕಂದಾಯ ಅಧಿಕಾರಿ ಎಂ.ಜಿ.ಪಠಾಣ, ಎಸ್.ಎಸ್.ಷಣ್ಮುಖ ಇದ್ದರು.