ರಬಕವಿ/ಬನಹಟ್ಟಿ : ಚಿಮ್ಮಡ -ಹೊಸೂರ ರಸ್ತೆ ಕಾಮಗಾರಿಯನ್ನು ಸರ್ವೆ ಮಾಡಿದ ರೀತಿಯಲ್ಲಿ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚಿಮ್ಮಡ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ರಸ್ತೆ ಒತ್ತುವರಿ ಮಾಡಿದ್ದಾರೆ. ಅದನ್ನು ತೆರವುಗೊಳಿಸಿ ಈ ಯೋಜನೆ ಅಡಿ ನೇರ ರಸ್ತೆ ನಿರ್ಮಿಸಲು ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಕಾಮಗಾರಿ ನಡೆಸಿದಂತೆ ಬಂದ್ ಮಾಡಲಾಗಿದೆ.
2012ರಲ್ಲಿ ಹಿಂದಿನ ತಹಸೀಲ್ದಾರ್ ಸರ್ವೇ ಕೈಗೊಂಡ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡವರಿಗೆ ತೆರವುಗೊಳಿಸಲು ಆದೇಶ ನೀಡಿದ್ದರು. ಆದರೆ ಈ ವರೆಗೆ ಆ ಕೆಲಸ ಆಗಿಲ್ಲ. ಈಗ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಸರ್ವೇ ಆದ ಗ್ರಾಮ ನಕ್ಷೆಯಲ್ಲಿರುವಂತೆ ನಿರ್ಮಿಸಬೇಕು ಎಂದು ಅಯೂಬಖಾನ ಹೊರಟ್ಟಿ, ನಂದೆಪ್ಪ ಮಿಳ್ಳಿ, ಮಲ್ಲಪ್ಪ ಜಗದಾಳ, ಪ್ರಕಾಶ ಪೂಜಾರಿ, ಶ್ರೀಶೈಲ ಬೆಂಡವಾಡ, ಸದಾಶಿವ ಪತ್ತಾರ, ಶಿವಲಿಂಗಪ್ಪ ಪೂಜಾರಿ, ಬಾಳಪ್ಪ ಭಜಂತ್ರಿ ಇತರರು ಆಗ್ರಹಿಸಿದ್ದಾರೆ.
ಚಿಮ್ಮಡ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ರಸ್ತೆ ಒತ್ತುವರಿ ಮಾಡಿದ್ದಾರೆ. ಅದನ್ನು ತೆರವುಗೊಳಿಸಿ ಈ ಯೋಜನೆ ಅಡಿ ನೇರ ರಸ್ತೆ ನಿರ್ಮಿಸಲು ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಕಾಮಗಾರಿ ನಡೆಸಿದಂತೆ ಬಂದ್ ಮಾಡಲಾಗಿದೆ.
2012ರಲ್ಲಿ ಹಿಂದಿನ ತಹಸೀಲ್ದಾರ್ ಸರ್ವೇ ಕೈಗೊಂಡ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡವರಿಗೆ ತೆರವುಗೊಳಿಸಲು ಆದೇಶ ನೀಡಿದ್ದರು. ಆದರೆ ಈ ವರೆಗೆ ಆ ಕೆಲಸ ಆಗಿಲ್ಲ. ಈಗ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಸರ್ವೇ ಆದ ಗ್ರಾಮ ನಕ್ಷೆಯಲ್ಲಿರುವಂತೆ ನಿರ್ಮಿಸಬೇಕು ಎಂದು ಅಯೂಬಖಾನ ಹೊರಟ್ಟಿ, ನಂದೆಪ್ಪ ಮಿಳ್ಳಿ, ಮಲ್ಲಪ್ಪ ಜಗದಾಳ, ಪ್ರಕಾಶ ಪೂಜಾರಿ, ಶ್ರೀಶೈಲ ಬೆಂಡವಾಡ, ಸದಾಶಿವ ಪತ್ತಾರ, ಶಿವಲಿಂಗಪ್ಪ ಪೂಜಾರಿ, ಬಾಳಪ್ಪ ಭಜಂತ್ರಿ ಇತರರು ಆಗ್ರಹಿಸಿದ್ದಾರೆ.