Please enable javascript.ಸರ್ವೆಯಂತೆ ರಸ್ತೆ ನಿರ್ಮಿಸಿ - ಸರ್ವೆಯಂತೆ ರಸ್ತೆ ನಿರ್ಮಿಸಿ - Vijay Karnataka

ಸರ್ವೆಯಂತೆ ರಸ್ತೆ ನಿರ್ಮಿಸಿ

Vijaya Karnataka Web 13 Dec 2014, 3:57 am
Subscribe

ಚಿಮ್ಮಡ -ಹೊಸೂರ ರಸ್ತೆ ಕಾಮಗಾರಿಯನ್ನು ಸರ್ವೆ ಮಾಡಿದ ರೀತಿಯಲ್ಲಿ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸರ್ವೆಯಂತೆ ರಸ್ತೆ ನಿರ್ಮಿಸಿ
ರಬಕವಿ/ಬನಹಟ್ಟಿ : ಚಿಮ್ಮಡ -ಹೊಸೂರ ರಸ್ತೆ ಕಾಮಗಾರಿಯನ್ನು ಸರ್ವೆ ಮಾಡಿದ ರೀತಿಯಲ್ಲಿ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚಿಮ್ಮಡ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ರಸ್ತೆ ಒತ್ತುವರಿ ಮಾಡಿದ್ದಾರೆ. ಅದನ್ನು ತೆರವುಗೊಳಿಸಿ ಈ ಯೋಜನೆ ಅಡಿ ನೇರ ರಸ್ತೆ ನಿರ್ಮಿಸಲು ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಕಾಮಗಾರಿ ನಡೆಸಿದಂತೆ ಬಂದ್ ಮಾಡಲಾಗಿದೆ.

2012ರಲ್ಲಿ ಹಿಂದಿನ ತಹಸೀಲ್ದಾರ್ ಸರ್ವೇ ಕೈಗೊಂಡ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡವರಿಗೆ ತೆರವುಗೊಳಿಸಲು ಆದೇಶ ನೀಡಿದ್ದರು. ಆದರೆ ಈ ವರೆಗೆ ಆ ಕೆಲಸ ಆಗಿಲ್ಲ. ಈಗ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಸರ್ವೇ ಆದ ಗ್ರಾಮ ನಕ್ಷೆಯಲ್ಲಿರುವಂತೆ ನಿರ್ಮಿಸಬೇಕು ಎಂದು ಅಯೂಬಖಾನ ಹೊರಟ್ಟಿ, ನಂದೆಪ್ಪ ಮಿಳ್ಳಿ, ಮಲ್ಲಪ್ಪ ಜಗದಾಳ, ಪ್ರಕಾಶ ಪೂಜಾರಿ, ಶ್ರೀಶೈಲ ಬೆಂಡವಾಡ, ಸದಾಶಿವ ಪತ್ತಾರ, ಶಿವಲಿಂಗಪ್ಪ ಪೂಜಾರಿ, ಬಾಳಪ್ಪ ಭಜಂತ್ರಿ ಇತರರು ಆಗ್ರಹಿಸಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ