ಮುಧೋಳ : ಪ್ರಸಕ್ತ ಸಾಲಿನಲ್ಲಿ 44 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆಯಾಗಿದೆ ಎಂದು ಪ್ರಭಾರಿ ಪೌರಾಯುಕ್ತ ಸಂಗಮೇಶ ಬ್ಯಾಳಿ ತಿಳಿಸಿದ್ದಾರೆ.
ನಗರಸಭೆಯಲ್ಲಿ ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹೆಚ್ಚಿನ ಅನುದಾನವನ್ನು ನಿರೀಕ್ಷೆ ಮಾಡಲಾಗಿದೆ. ಆಸ್ತಿ ತೆರಿಗೆಯಿಂದ 1.25 ಕೋಟಿ ರೂ., ಅಂಗಡಿ ಬಾಡಿಗೆ-46 ಲಕ್ಷ ರೂ. ಕಟ್ಟಡ ಪರವಾನಗಿ 27 ಲಕ್ಷ ರೂ., ನಿವೇಶನ ಅಭಿವೃದ್ಧಿ ಶುಲ್ಕ 45 ಲಕ್ಷ ರೂ., ಸಂಗ್ರಹಣಾ ಮೇಲ್ವಿಚಾರಣೆ ಶುಲ್ಕ 65 ಲಕ್ಷ ರೂ., ಎಲ್ಲ ಮೂಲಗಳಿಂದ 2.4 ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದರು.
ಸಾಮೂಹಿಕ ಶೌಚಾಲಯ ನಿರ್ಮಾಣ-25 ಲಕ್ಷ ರೂ., ಬಸ್ ಸೆಲ್ಟರ್ ನಿರ್ಮಾಣ 35 ಲಕ್ಷ ರೂ., ರಸ್ತೆ ಚರಂಡಿ ನಿರ್ವಹಣೆ-55 ಲಕ್ಷ ರೂ., ಸಾರ್ವಜನಿಕ ಉದ್ಯಾನವನ ನಿರ್ವಹಣೆ-14 ಲಕ್ಷ ರೂ., ಕೊಳವೆಬಾವಿ, ಹೊಸ ಪೈಪ್ಲೈನ್ ಕಿರು ನೀರು ಸರಬರಾಜು ವ್ಯವಸ್ಥೆ 1.10 ಕೋಟಿ ರೂ. ಬಂಡವಾಳ ಖಾತೆಯಲ್ಲಿ 9.20 ಕೋಟಿ ರೂ. ಇದೆ ಎಂದು ವಿವರಿಸಿದರು.
ಕುಡಿವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಇಲ್ಲವಾಗಿದೆ. ಯಾವುದೇ ಸಮಸ್ಯೆ ಬಂದರೂ ಅದನ್ನು ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ನೀಲವ್ವಾ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕುಬೇರ ಲಮಾಣಿ, ಸೈಯದ್ ಮುಲ್ಲಾ, ಭಾರತಿ ಜೋಶಿ, ವಿನಾಯಕ ಕುಲಕರ್ಣಿ, ಲೆಕ್ಕಾಧಿಕಾರಿ ಎಂ.ಆರ್.ನದಾಫ್ ಇದ್ದರು.
ನಗರಸಭೆಯಲ್ಲಿ ಬಜೆಟ್ ಮಂಡನೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹೆಚ್ಚಿನ ಅನುದಾನವನ್ನು ನಿರೀಕ್ಷೆ ಮಾಡಲಾಗಿದೆ. ಆಸ್ತಿ ತೆರಿಗೆಯಿಂದ 1.25 ಕೋಟಿ ರೂ., ಅಂಗಡಿ ಬಾಡಿಗೆ-46 ಲಕ್ಷ ರೂ. ಕಟ್ಟಡ ಪರವಾನಗಿ 27 ಲಕ್ಷ ರೂ., ನಿವೇಶನ ಅಭಿವೃದ್ಧಿ ಶುಲ್ಕ 45 ಲಕ್ಷ ರೂ., ಸಂಗ್ರಹಣಾ ಮೇಲ್ವಿಚಾರಣೆ ಶುಲ್ಕ 65 ಲಕ್ಷ ರೂ., ಎಲ್ಲ ಮೂಲಗಳಿಂದ 2.4 ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದರು.
ಸಾಮೂಹಿಕ ಶೌಚಾಲಯ ನಿರ್ಮಾಣ-25 ಲಕ್ಷ ರೂ., ಬಸ್ ಸೆಲ್ಟರ್ ನಿರ್ಮಾಣ 35 ಲಕ್ಷ ರೂ., ರಸ್ತೆ ಚರಂಡಿ ನಿರ್ವಹಣೆ-55 ಲಕ್ಷ ರೂ., ಸಾರ್ವಜನಿಕ ಉದ್ಯಾನವನ ನಿರ್ವಹಣೆ-14 ಲಕ್ಷ ರೂ., ಕೊಳವೆಬಾವಿ, ಹೊಸ ಪೈಪ್ಲೈನ್ ಕಿರು ನೀರು ಸರಬರಾಜು ವ್ಯವಸ್ಥೆ 1.10 ಕೋಟಿ ರೂ. ಬಂಡವಾಳ ಖಾತೆಯಲ್ಲಿ 9.20 ಕೋಟಿ ರೂ. ಇದೆ ಎಂದು ವಿವರಿಸಿದರು.
ಕುಡಿವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಇಲ್ಲವಾಗಿದೆ. ಯಾವುದೇ ಸಮಸ್ಯೆ ಬಂದರೂ ಅದನ್ನು ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ನೀಲವ್ವಾ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕುಬೇರ ಲಮಾಣಿ, ಸೈಯದ್ ಮುಲ್ಲಾ, ಭಾರತಿ ಜೋಶಿ, ವಿನಾಯಕ ಕುಲಕರ್ಣಿ, ಲೆಕ್ಕಾಧಿಕಾರಿ ಎಂ.ಆರ್.ನದಾಫ್ ಇದ್ದರು.