ಬಾಗಲಕೋಟ: ಜಮಖಂಡಿ ತಾಲೂಕಿನ ಅಸ್ಕಿ ಪುನರ್ವಸತಿ ಕೇಂದ್ರಕ್ಕಾಗಿ ಸ್ಥಾಪಿಸಿರುವ ಮದನಮಟ್ಟಿ ಗ್ರಾಮದ ರಿಸಂ.ನಂ.27/2 ರಲ್ಲಿ 49-02 ಎ/ಗುಂ ಜಮೀನು ‘ಬ’ ಖರಾಬ ಜಮೀನಾಗಿರುವುದರಿಂದ ‘ಬ’ಖರಾಬ ಶೀರ್ಷಿಕೆಯಿಂದ ವಿಹಿತಗೊಳಿಸಲು ಸರಕಾರದಿಂದ ಪೂರ್ವಾನುಮೋದನೆ ದೊರೆತಿದೆ ಎಂದು ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ತಿಳಿಸಿದ್ದಾರೆ.
ಅಸ್ಕಿ ಗ್ರಾಮದ ಪುನರ್ವಸತಿ ಕೇಂದ್ರದ ಸಲುವಾಗಿ ಮದನಮಟ್ಟಿ ಗ್ರಾಮದ ರಿ.ಸಂ.ನಂ.27/2ರ ಕ್ಷೇತ್ರ 204-26 ಎ/ಗುಂ ಬಿನ್ ಆಕಾರ ‘ಬ’ ಖರಾಬ ಜಮೀನಿನ ಪೈಕಿ ಉತ್ತರ ಭಾಗದ 49-02 ಎ/ಗುಂ ಜಮೀನನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 68(2)ರಲ್ಲಿ ಚರ್ಚಿಸಿದಂತೆ ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಆ ಆಸ್ತಿಯ ಮೇಲೆ ಇರುವ ಸಾರ್ವಜನಿಕ ಹಾಗೂ ಎಲ್ಲ ವ್ಯಕ್ತಿಗಳ ಹಕ್ಕುಗಳು ಅಳಿದು ಹೋಗುತ್ತವೆ.
ಯಾವುದೇ ತರಹದ ಆಕ್ಷೇಪಣೆ ಇದ್ದಲ್ಲಿ ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 90 ದಿನಗಳೊಳಗಾಗಿ ಖುದ್ದಾಗಿ ಇಲ್ಲವೆ ವಕೀಲರ ಮುಖಾಂತರವಾಗಲಿ, ಲಿಖಿತವಾಗಿ ಆಗಲಿ ಜಿಲ್ಲಾಧಿಕಾರಿ ಕಚೇರಿ, ಬಾಗಲಕೋಟ ಅವರಿಗೆ ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.
ಅಸ್ಕಿ ಗ್ರಾಮದ ಪುನರ್ವಸತಿ ಕೇಂದ್ರದ ಸಲುವಾಗಿ ಮದನಮಟ್ಟಿ ಗ್ರಾಮದ ರಿ.ಸಂ.ನಂ.27/2ರ ಕ್ಷೇತ್ರ 204-26 ಎ/ಗುಂ ಬಿನ್ ಆಕಾರ ‘ಬ’ ಖರಾಬ ಜಮೀನಿನ ಪೈಕಿ ಉತ್ತರ ಭಾಗದ 49-02 ಎ/ಗುಂ ಜಮೀನನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 68(2)ರಲ್ಲಿ ಚರ್ಚಿಸಿದಂತೆ ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಆ ಆಸ್ತಿಯ ಮೇಲೆ ಇರುವ ಸಾರ್ವಜನಿಕ ಹಾಗೂ ಎಲ್ಲ ವ್ಯಕ್ತಿಗಳ ಹಕ್ಕುಗಳು ಅಳಿದು ಹೋಗುತ್ತವೆ.
ಯಾವುದೇ ತರಹದ ಆಕ್ಷೇಪಣೆ ಇದ್ದಲ್ಲಿ ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 90 ದಿನಗಳೊಳಗಾಗಿ ಖುದ್ದಾಗಿ ಇಲ್ಲವೆ ವಕೀಲರ ಮುಖಾಂತರವಾಗಲಿ, ಲಿಖಿತವಾಗಿ ಆಗಲಿ ಜಿಲ್ಲಾಧಿಕಾರಿ ಕಚೇರಿ, ಬಾಗಲಕೋಟ ಅವರಿಗೆ ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.