ತೇರದಾಳ: ಇಂದಿನ ತಂತ್ರಜ್ಞಾನ ಯುಗದಲ್ಲಿ ಪುರುಷನ ಸಮನಾಗಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ಮಾಡುತ್ತಿದ್ದಾಳೆ. ಆದ್ದರಿಂದ ಮಹಿಳೆ ಅಬಲೆ ಅಲ್ಲ, ಸಬಲೆ ಎಂದು ಡಾ.ವಿದ್ಯಾ ಪತ್ತಾರ ಹೇಳಿದರು. ಸ್ಥಳೀಯ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಿಲ್ಲಾಭಾಗ ವಲಯ ವ್ಯಾಪ್ತಿಯ ಸಾಧನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯ ಸ್ವಾವಲಂಬಿ ಜೀವನಕ್ಕೆ ಸಂಘ-ಸಂಸ್ಥೆಗಳು ಮುಂದಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಂಸ್ಥೆ ಯೋಜನಾಧಿಕಾರಿ ಸತೀಶ ಶೆಟ್ಟಿ ಮಾತನಾಡಿ, ತೇರದಾಳ ವಲಯಕ್ಕೆ ಸುಮಾರು 6 ಕೋಟಿ ಸಾಲ ನೀಡಲಾಗಿದ್ದು, ಇನ್ನು ಸಾಕಷ್ಟು ಯೋಜನೆಗಳಿವೆ. ಅವುಗಳ ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಕಿಲ್ಲಾಭಾಗ ಒಕ್ಕೂಟದ ಅಧ್ಯಕ್ಷೆ ಪದ್ಮಶ್ರೀ ದಾನಿಗೊಂಡ ಅಧ್ಯಕ್ಷತೆ ವಹಿಸಿದ್ದರು. ಶಂಕರ ಶೆಟ್ಟಿ, ಪುರಸಭೆ ಸದಸ್ಯ ಶೀತಲಕುಮಾರ ದೇಸಾಯಿ, ಶೀತಲ ಬೋಳಗೊಂಡ, ಪುಷ್ಪಾ ಹಜಾರೆ, ಮಹಾಲಿಂಗಪ್ಪ ಜಡಿ, ಚಂದ್ರಶೇಖರ ಇದ್ದರು.
‘ಮಹಿಳೆ ಅಬಲೆ ಅಲ್ಲ, ಸಬಲೆ’
Vijaya Karnataka Web 6 Nov 2015, 6:34 pm
Subscribe
ಇಂದಿನ ತಂತ್ರಜ್ಞಾನ ಯುಗದಲ್ಲಿ ಪುರುಷನ ಸಮನಾಗಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ಮಾಡುತ್ತಿದ್ದಾಳೆ. ಆದ್ದರಿಂದ ಮಹಿಳೆ ಅಬಲೆ ಅಲ್ಲ, ಸಬಲೆ ಎಂದು ಡಾ.ವಿದ್ಯಾ ಪತ್ತಾರ ಹೇಳಿದರು.
ಕಾಮೆಂಟ್ ಮಾಡಿ