ಆ್ಯಪ್ನಗರ

10.62 ಕೋಟಿ ರೂ.ಬಿಡುಗಡೆ

ಮುಧೋಳ: ರಾಜ್ಯದ 30 ಜಿಲ್ಲೆಗಳಿಗೆ ವಿಶೇಷ ಪಾಲನಾ ಯೋಜನೆಯ ಅನುದಾನ ಸರಕಾರ ಬಿಡುಗಡೆ ಮಾಡಿದೆ.

Vijaya Karnataka 14 Jul 2018, 5:00 am
ಮುಧೋಳ: ರಾಜ್ಯದ 30 ಜಿಲ್ಲೆಗಳಿಗೆ ವಿಶೇಷ ಪಾಲನಾ ಯೋಜನೆಯ ಅನುದಾನ ಸರಕಾರ ಬಿಡುಗಡೆ ಮಾಡಿದೆ.
Vijaya Karnataka Web 10 62
10.62 ಕೋಟಿ ರೂ.ಬಿಡುಗಡೆ

ಎಚ್‌ಐವಿ ಹಾಗೂ ಏಡ್ಸ್‌ ಸೋಂಕಿತ, ಬಾಧಿತ ಮಕ್ಕಳಿಗೆ ತಲಾ ಸಾವಿರ ಮಾಸಾಶನ ಸೌಲಭ್ಯ ದೊರೆತಂತಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 4ನೇ ಕಂತಿನ 10.62ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬರಬೇಕಾಗಿದ್ದ ತ್ರೈಮಾಸಿಕ ಅನುದಾನ ಬರದೇ ಇರುವುದರಿಂದ ಮಕ್ಕಳಿಗೆ ಉಪಜೀವನಕ್ಕೆ ತೊಂದರೆಯಾಗಿತ್ತು. ಸರಕಾರದ ಆದೇಶ ಅನ್ವಯ ನಾಲ್ಕನೇ ತ್ರೈಮಾಸಿಕ ಅನುದಾನ ಬಳಕೆ ಮಾಡಲು ಸೂಚನೆ ನೀಡಿದೆ.
ರಾಜ್ಯದ ಪರಿಶಿಷ್ಟ ಜಾತಿ 4300, ಪಂಗಡ 1770, ಇತರೆ 11630, ಒಟ್ಟು 17,700 ಮಕ್ಕಳಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಬಳಕೆಯಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಿನ ಅನುದಾನ ಬಳಕೆಯಾಗದೆ ಉಳಿದಿದೆ. ಬಾಗಲಕೋಟ ಜಿಲ್ಲೆಯಲ್ಲಿ 1459, ಬೆಳಗಾವಿ 1778, ವಿಜಯಪುರ 697, ಬೆಂಗಳೂರ ಗ್ರಾಮಾಂತರ 183, ಬೆಂಗಳೂರ ನಗರ 665, ಬಳ್ಳಾರಿ 1301, ಬೀದರ 176, ಚಾಮರಾಜನಗರ 336, ಚಿಕ್ಕಬಳ್ಳಾಪೂರ 213, ಚಿಕ್ಕಮಂಗಳೂರ 270, ದಕ್ಷೀಣ ಕನ್ನಡ 480, ಧಾರವಾಡ 627, ಗದಗ 441, ಕಲಬುರ್ಗಿ 248, ಹಾಸನ 412, ಹಾವೇರಿ 753, ಕೊಡಗು 207, ಕೋಲ್ಹಾರ್‌ 371, ಕೊಪ್ಪಳ 1154, ಮಂಡ್ಯ 218, ಮೈಸೂರ 957, ರಾಯಚೂರ 584, ರಾಮನಗರ 295, ತುಮಕೂರ 533, ಶಿವಮೊಗ್ಗ 401, ಉಡುಪಿ 460, ಉತ್ತರ ಕನ್ನಡ 285, ಯಾದಗಿರಿ 303 ಫಲಾನುಭವಿಗಳಿಗೆ ಅನುದಾನ ಮಂಜೂರು ದೊರಕಿದೆ. ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ಕಲ್ಯಾಣ ರಕ್ಷ ಣಾ ಸಮಿತಿ ವಿಶೇಷ ಮುತುವರ್ಜಿಯಿಂದ ಅನುದಾನ ಬಿಡುಗಡೆಗೆ ಒತ್ತು ನೀಡಲಾಗಿದೆ.
ವಿಜಯ ಕರ್ನಾಟಕ ಡಿ.9ಕ್ಕೆ ಈ ಕುರಿತು 'ಪಾಲನೆಗೆ ಬಾರದ ಕಾಬಾ ಯೋಜನೆ ಹಣ, ಸೋಂಕಿತ ಮಕ್ಕಳಿಗೆ ದೊರೆಯದ ಭತ್ಯೆ' ವಿಶೇಷ ವರದಿ ಪ್ರಕಟಿಸಿತು.

ಸರಕಾರದ ಸೂಚನೆ ಬಂದ ಬಳಿಕ ಅನುದಾನ ಬಿಡುಗಡೆ ಮಾಡಲಾಗಿದೆ. ನಾಲ್ಕನೇ ತ್ರೈಮಾಸಿಕ ಯೋಜನೆ ರಾಜ್ಯದ ಫಲಾನುಭವಿಗಳು ಇದರ ಪ್ರಯೋಜನ ಪಡೆಯಬೇಕು.
-ಎಂ.ದೀಪಾ, ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು.

ಪ್ರತಿ ತಿಂಗಳು 1 ಸಾವಿರ ಮಾಸಾಶನ ಬಂದಿರುವ ಸುದ್ದಿ ತಿಳಿದಿದೆ. ನಮ್ಮ ಅಕೌಂಟ್‌ಗೆ ಜಮಾ ಆಗಲಿದೆ. ವಿಜಯ ಕರ್ನಾಟಕ ವರದಿ ಪ್ರಕಟಿಸಿರುವುದಕ್ಕೆ ಅಭಿನಂದನೆಗಳು.
-ಬಾಲಕ ಫಲಾನುಭವಿ ಪಾಲಕರು, ಮುಧೋಳ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ