ಆ್ಯಪ್ನಗರ

ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳು

ಬಾಗಲಕೋಟ: ಬಾಗಲಕೋಟ ಲೋಕಸಭೆ ಕ್ಷೇತ್ರದಿಂದ ಇಬ್ಬರು ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ 14 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

Vijaya Karnataka 9 Apr 2019, 5:00 am
ಬಾಗಲಕೋಟ: ಬಾಗಲಕೋಟ ಲೋಕಸಭೆ ಕ್ಷೇತ್ರದಿಂದ ಇಬ್ಬರು ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ 14 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
Vijaya Karnataka Web 14 candidates in the final
ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳು


ಏ.23ರಂದು ನಡೆಯಲಿರುವ ಚುನಾವಣೆಗೆ ಮಾ.28ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿತ್ತು. ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಏ.4ರಂದು 16 ಅಭ್ಯರ್ಥಿಗಳಿಂದ 28 ನಾಮಪತ್ರ ಸಲ್ಲಿಕೆ ಆಗಿದ್ದವು. ಪರಿಶೀಲನೆ ಅವಧಿಯಲ್ಲಿ ಒಂದು ನಾಮಪತ್ರ ತಿರಸ್ಕೃತವಾಗಿ 27 ನಾಮಪತ್ರ ಸ್ವೀಕೃತವಾಗಿದ್ದವು. ನಾಮಪತ್ರ ಹಿಂಪಡೆಯಲು ಅಂತಿಮ ದಿನವಾದ ಏ.8ರಂದು ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಮಾಗುಂಡಪ್ಪ ಗಾಣಿಗೇರ ಹಾಗೂ ಸಂಗಮೇಶ ಭಾವಿಕಟ್ಟಿ ತಮ್ಮ ನಾಮಪತ್ರ ಹಿಂಪಡೆದಿದ್ದರಿಂದ ಅಂತಿಮವಾಗಿ 14 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಕಣದಲ್ಲಿ ಉಳಿದವರು

ಪಿ.ಸಿ.ಗದ್ದಿಗೌಡರ (ಬಿಜೆಪಿ), ವೀಣಾ ಕಾಶಪ್ಪನವರ (ಕಾಂಗ್ರೆಸ್‌), ಎಂ.ಶಶಿಕುಮಾರ (ಉತ್ತಮ ಪ್ರಜಾಕೀಯ ಪಕ್ಷ ), ರಾಮನಗೌಡ ಬಾಳವಾಡ (ಹಿಂದುಸ್ತಾನ ಜನತಾ ಪಕ್ಷ ), ಬಸನಗೌಡ ಮೇಟಿ (ಸೆಕ್ಯೂಲರ್‌ ಡೆಮಾಕ್ರಟಿಕ್‌ ಪಕ್ಷ ), ಪರಶುರಾಮ ನೀಲನಾಯಕ (ಆರ್‌ಪಿಐ), ರಾಜೇಂದ್ರ ಆಡಗಲ್‌ (ಬಹುಜನ ಮುಕ್ತಿ ಪಕ್ಷ ), ಮುತ್ತಪ್ಪ ಹಿರೇಕುಂಬಿ (ರೈತ ಭಾರತ ಪಕ್ಷ ), ಮಹಮ್ಮದಹುಸೇನ್‌ ಮುಜಾವರ (ಬಿಎಸ್‌ಪಿ), ಮಾರುತಿ ಜಮೀನ್ದಾರ (ಕೆಜೆಪಿ), ರವಿ ಪಡಸಲಗಿ, ಶಿವರಾಜಕುಮಾರ ತಳವಾರ, ಮುತ್ತು ಸುರಕೋಡ, ಬುಡ್ಡೇಸಾಬ ಪೆಂಡಾರಿ (ಪಕ್ಷೇತರ) ಕಣದಲ್ಲಿ ಉಳಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ