ಬಾದಾಮಿ : ರಾಜ್ಯದ ಶಕ್ತಿ ದೇವತೆಗಳಲ್ಲಿ ಒಂದಾದ ಪ್ರಸಿದ್ಧ ಕ್ಷೇತ್ರ ಎನಿಸಿದ ಉತ್ತರ ಕರ್ನಾಟಕದ ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಭಾನುವಾರ ಬೆಳಗ್ಗೆ 3ಕ್ಕೆ ಬನಶಂಕರಿ ದೇವಿಗೆ ವಿಶೇಷ ಅಭಿಷೇಕ ಹಮ್ಮಿಕೊಳ್ಳಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದಲೂ ಮಳೆ ಅಭಾವದಿಂದ ಬರದ ಛಾಯೆಯಲ್ಲಿ ಜನರು ಪರದಾಡುವ ಸ್ಥಿತಿಯಲ್ಲಿದ್ದಾರೆ. ದೇವಸ್ಥಾನದ ಪೂರ್ವದಲ್ಲಿರುವ ಹರಿದ್ರಾ ತೀರ್ಥದಲ್ಲಿಯೂ ನೀರಿಲ್ಲ. ಇದರಿಂದ ಭಕ್ತ ಸಮೂಹಕ್ಕೆ ಬಹಳಷ್ಟು ತೊಂದರೆಯಾಗುತ್ತಿದೆ.ಎಲ್ಲೆಡೆ ಮಳೆ ಬೆಳೆ ಸಮೃದ್ಧವಾಗಲಿ ಎಂಬ ಕಳಕಳಿಯಿಂದ ನಡೆಯುವ ಈ ಧಾರ್ಮಿಕ ಕಾರ್ಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಳೆ ಬೆಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಭಕ್ತರಿಗಾಗಿ ಬನಶಂಕರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಪ್ರಸಾದ ವ್ಯವಸ್ಥೆಯೂ ಹಮ್ಮಿಕೊಳ್ಳಲಾಗಿದೆ.
ಏನಿದು ಆಚರಣೆ?:
ವೈಶಾಖ ಮಾಸದ ವಿಶೇಷ ಫಲ ಎನಿಸಿದ ಮಾವಿನ ಹಣ್ಣಿನ ರಸದಿಂದ ದೇವಿಗೆ ಅಭಿಷೇಕ ನೆರವೇರಿಸಲಾಗುತ್ತದೆ. ಇದಕ್ಕಾಗಿ 3 ಸಾವಿರ ಮಾವಿನ ಹಣ್ಣುಗಳನ್ನು ತರಿಸಲಾಗಿದೆ. ಭಕ್ತರು ಕೂಡ ದೇಣಿಗೆ ರೂಪದಲ್ಲಿ ಅಂದಾಜು 2 ಸಾವಿರ ಹಣ್ಣುಗಳನ್ನು ನೀಡಿದ್ದಾರೆ. ಒಟ್ಟು 5 ಸಾವಿರಕ್ಕೂ ಹೆಚ್ಚು ಹಣ್ಣುಗಳನ್ನು ದೇವಿಯ ಅಭಿಷೇಕ ಹಾಗೂ ನೈವೇದ್ಯಕ್ಕೆ ಸಮರ್ಪಿಸಿ ನಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ ಎಂದು ದೇವಸ್ಥಾನ ಕಮೀಟಿಯವರು ತಿಳಿಸಿದ್ದಾರೆ.
ಇಂದೇ ಏಕೆ?:
ಭಕ್ತರ ರಕ್ಷ ಣೆಗಾಗಿ ಬನಶಂಕರಿ ದೇವಿ ಭುವಿಗೆ ಅವತರಿಸಿ ಬಂದ ದಿನ ವೈಶಾಖ ಬಹುಳ ಚತುರ್ದಶಿ (ಈ ವರ್ಷ ಜೂನ್ 2). ಈ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ಈ ಪವಿತ್ರ ದಿನದಂದು ಸುವರ್ಣ ಜಲ, ರಜತ ಜಲ, ತುಪ್ಪ, ಜೇನುತುಪ್ಪ, ಕಬ್ಬಿನ ಹಾಲು, ಎಳೆನೀರು, ಬಾಳೆ ಹಣ್ಣು, ಮಾವಿನ ಹಣ್ಣು, ಸಕ್ಕರೆ, ಹಾಲು, ಗಂಧ, ಹರಿದ್ರಾಲೇಪನ ಹೀಗೆ ಒಟ್ಟು 16 ದ್ರವ್ಯಗಳಿಂದ ದೇವಿಗೆ ವಿಶೇಷ ಅಭಿಷೇಕ ನೆರವೇರಿಸಲಾಗುತ್ತದೆ. ಒಂದು ದ್ರವ್ಯದಿಂದ ಅಭಿಷೇಕ ನೆರವೇರಿಸುವಾಗ 16 ಬಾರಿಯಂತೆ ಒಟ್ಟು 256 ಬಾರಿ ಶ್ರೀಸೂಕ್ತ ಪಾರಾಯಣ ಕೈಗೊಳ್ಳಲಾಗುತ್ತದೆ. ಇದರ ಜತೆಗೆ ಗಾಯತ್ರಿ ಜಪ, ಶಾಕಾಂಬರಿ ಮಾಲಾ ಮಂತ್ರ, ಶ್ರೀದೇವಿ ಕವಚ ಪಠಣ, ಅಷ್ಟಕ, ಪಂಚಕ, ಸಪ್ತಶತಿ ಪಾರಾಯಣಗಳು ನಡೆಯುತ್ತವೆ. ಬೆಳಗ್ಗೆ 4ಗಂಟೆಗೆ ಆರಂಭವಾಗುವ ಧಾರ್ಮಿಕ ವಿಧಿಗಳು ನಿರಂತರ ನಾಲ್ಕು ಗಂಟೆಗಳವರೆಗೆ ನಡೆಯಲಿವೆ.
ಹಲವು ವರ್ಷಗಳಿಂದ:
ಆರಂಭದಲ್ಲಿ ಕೇವಲ ದೇವಸ್ಥಾನಕ್ಕೆ ಸಂಬಂಧಿಸಿದ ಪೂಜಾರ ಕುಟುಂಬದವರು ಮಾತ್ರ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಂದಾಜು 15 ವರ್ಷಗಳಿಂದ ಸಾರ್ವಜನಿಕವಾಗಿ ಅಭಿಷೇಕ ನಡೆಸಲಾಗುತ್ತಿದೆ. ಬೆಳಗಾವಿಯ ದೇವಿಯ ಭಕ್ತರೊಬ್ಬರೇ ಹತ್ತು ವರ್ಷಗಳಿಂದ ದೇವಸ್ಥಾನಕ್ಕೆ ಪ್ರತಿ ವರ್ಷ ಈ ಅಭಿಷೇಕಕ್ಕೆ 2ಸಾವಿರಕ್ಕೂ ಅಧಿಕ ಹಣ್ಣುಗಳನ್ನು ಕಳುಹಿಸಿ ದೇವಿಗೆ ಭಕ್ತಿ ಸಮರ್ಪಣೆ ಮಾಡುತ್ತಾರೆ. ಇವರು ಯಾವುದೇ ರಾಸಾಯನಿಕ ಬಳಸದೆ ತಯಾರಾದ ಹಣ್ಣುಗಳನ್ನು ಕಳುಹಿಸುತ್ತಿರುವುದು ವಿಶೇಷ ಎಂದು ದೇವಸ್ಥಾನ ಕಮೀಟಿಯ ಮಹೇಶ ಪೂಜಾರ ತಿಳಿಸುತ್ತಾರೆ. ಅಂದಹಾಗೆ ಅಭಿಷೇಕದ ಜತೆಗೆ ಈ ವರ್ಷ ಒಂದು ಸಾವಿರ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆಯೂ ನಡೆಯಲಿದೆ.
ಸುವರ್ಣ ಪುಷ್ಪ ಅಭಿಷೇಕ
ದೇವಿಯ ಭಕ್ತರೊಬ್ಬರು ದೇವಸ್ಥಾನಕ್ಕೆ 108 ಸುವರ್ಣ ಪುಷ್ಪಗಳನ್ನು ನೀಡಿದ್ದಾರೆ. ಈ ಪುಷ್ಪಗಳು ಸಹಿತ ಪವಿತ್ರ ಜಲದ ಅಭಿಷೇಕವನ್ನೂ ಈ ದಿನ ಕೈಗೊಳ್ಳಲಾಗುತ್ತದೆ. ವರ್ಷದಲ್ಲಿ ಒಮ್ಮೆ ಮಾತ್ರ ಈ ಸುವರ್ಣ ಪುಷ್ಪಗಳ ಅಭಿಷೇಕ ನಡೆಸಲಾಗುತ್ತದೆ.
ಕಳೆದ ನಾಲ್ಕು ವರ್ಷಗಳಿಂದಲೂ ಮಳೆ ಅಭಾವದಿಂದ ಬರದ ಛಾಯೆಯಲ್ಲಿ ಜನರು ಪರದಾಡುವ ಸ್ಥಿತಿಯಲ್ಲಿದ್ದಾರೆ. ದೇವಸ್ಥಾನದ ಪೂರ್ವದಲ್ಲಿರುವ ಹರಿದ್ರಾ ತೀರ್ಥದಲ್ಲಿಯೂ ನೀರಿಲ್ಲ. ಇದರಿಂದ ಭಕ್ತ ಸಮೂಹಕ್ಕೆ ಬಹಳಷ್ಟು ತೊಂದರೆಯಾಗುತ್ತಿದೆ.ಎಲ್ಲೆಡೆ ಮಳೆ ಬೆಳೆ ಸಮೃದ್ಧವಾಗಲಿ ಎಂಬ ಕಳಕಳಿಯಿಂದ ನಡೆಯುವ ಈ ಧಾರ್ಮಿಕ ಕಾರ್ಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಳೆ ಬೆಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಭಕ್ತರಿಗಾಗಿ ಬನಶಂಕರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಪ್ರಸಾದ ವ್ಯವಸ್ಥೆಯೂ ಹಮ್ಮಿಕೊಳ್ಳಲಾಗಿದೆ.
ಏನಿದು ಆಚರಣೆ?:
ವೈಶಾಖ ಮಾಸದ ವಿಶೇಷ ಫಲ ಎನಿಸಿದ ಮಾವಿನ ಹಣ್ಣಿನ ರಸದಿಂದ ದೇವಿಗೆ ಅಭಿಷೇಕ ನೆರವೇರಿಸಲಾಗುತ್ತದೆ. ಇದಕ್ಕಾಗಿ 3 ಸಾವಿರ ಮಾವಿನ ಹಣ್ಣುಗಳನ್ನು ತರಿಸಲಾಗಿದೆ. ಭಕ್ತರು ಕೂಡ ದೇಣಿಗೆ ರೂಪದಲ್ಲಿ ಅಂದಾಜು 2 ಸಾವಿರ ಹಣ್ಣುಗಳನ್ನು ನೀಡಿದ್ದಾರೆ. ಒಟ್ಟು 5 ಸಾವಿರಕ್ಕೂ ಹೆಚ್ಚು ಹಣ್ಣುಗಳನ್ನು ದೇವಿಯ ಅಭಿಷೇಕ ಹಾಗೂ ನೈವೇದ್ಯಕ್ಕೆ ಸಮರ್ಪಿಸಿ ನಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ ಎಂದು ದೇವಸ್ಥಾನ ಕಮೀಟಿಯವರು ತಿಳಿಸಿದ್ದಾರೆ.
ಇಂದೇ ಏಕೆ?:
ಭಕ್ತರ ರಕ್ಷ ಣೆಗಾಗಿ ಬನಶಂಕರಿ ದೇವಿ ಭುವಿಗೆ ಅವತರಿಸಿ ಬಂದ ದಿನ ವೈಶಾಖ ಬಹುಳ ಚತುರ್ದಶಿ (ಈ ವರ್ಷ ಜೂನ್ 2). ಈ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ಈ ಪವಿತ್ರ ದಿನದಂದು ಸುವರ್ಣ ಜಲ, ರಜತ ಜಲ, ತುಪ್ಪ, ಜೇನುತುಪ್ಪ, ಕಬ್ಬಿನ ಹಾಲು, ಎಳೆನೀರು, ಬಾಳೆ ಹಣ್ಣು, ಮಾವಿನ ಹಣ್ಣು, ಸಕ್ಕರೆ, ಹಾಲು, ಗಂಧ, ಹರಿದ್ರಾಲೇಪನ ಹೀಗೆ ಒಟ್ಟು 16 ದ್ರವ್ಯಗಳಿಂದ ದೇವಿಗೆ ವಿಶೇಷ ಅಭಿಷೇಕ ನೆರವೇರಿಸಲಾಗುತ್ತದೆ. ಒಂದು ದ್ರವ್ಯದಿಂದ ಅಭಿಷೇಕ ನೆರವೇರಿಸುವಾಗ 16 ಬಾರಿಯಂತೆ ಒಟ್ಟು 256 ಬಾರಿ ಶ್ರೀಸೂಕ್ತ ಪಾರಾಯಣ ಕೈಗೊಳ್ಳಲಾಗುತ್ತದೆ. ಇದರ ಜತೆಗೆ ಗಾಯತ್ರಿ ಜಪ, ಶಾಕಾಂಬರಿ ಮಾಲಾ ಮಂತ್ರ, ಶ್ರೀದೇವಿ ಕವಚ ಪಠಣ, ಅಷ್ಟಕ, ಪಂಚಕ, ಸಪ್ತಶತಿ ಪಾರಾಯಣಗಳು ನಡೆಯುತ್ತವೆ. ಬೆಳಗ್ಗೆ 4ಗಂಟೆಗೆ ಆರಂಭವಾಗುವ ಧಾರ್ಮಿಕ ವಿಧಿಗಳು ನಿರಂತರ ನಾಲ್ಕು ಗಂಟೆಗಳವರೆಗೆ ನಡೆಯಲಿವೆ.
ಹಲವು ವರ್ಷಗಳಿಂದ:
ಆರಂಭದಲ್ಲಿ ಕೇವಲ ದೇವಸ್ಥಾನಕ್ಕೆ ಸಂಬಂಧಿಸಿದ ಪೂಜಾರ ಕುಟುಂಬದವರು ಮಾತ್ರ ಈ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಂದಾಜು 15 ವರ್ಷಗಳಿಂದ ಸಾರ್ವಜನಿಕವಾಗಿ ಅಭಿಷೇಕ ನಡೆಸಲಾಗುತ್ತಿದೆ. ಬೆಳಗಾವಿಯ ದೇವಿಯ ಭಕ್ತರೊಬ್ಬರೇ ಹತ್ತು ವರ್ಷಗಳಿಂದ ದೇವಸ್ಥಾನಕ್ಕೆ ಪ್ರತಿ ವರ್ಷ ಈ ಅಭಿಷೇಕಕ್ಕೆ 2ಸಾವಿರಕ್ಕೂ ಅಧಿಕ ಹಣ್ಣುಗಳನ್ನು ಕಳುಹಿಸಿ ದೇವಿಗೆ ಭಕ್ತಿ ಸಮರ್ಪಣೆ ಮಾಡುತ್ತಾರೆ. ಇವರು ಯಾವುದೇ ರಾಸಾಯನಿಕ ಬಳಸದೆ ತಯಾರಾದ ಹಣ್ಣುಗಳನ್ನು ಕಳುಹಿಸುತ್ತಿರುವುದು ವಿಶೇಷ ಎಂದು ದೇವಸ್ಥಾನ ಕಮೀಟಿಯ ಮಹೇಶ ಪೂಜಾರ ತಿಳಿಸುತ್ತಾರೆ. ಅಂದಹಾಗೆ ಅಭಿಷೇಕದ ಜತೆಗೆ ಈ ವರ್ಷ ಒಂದು ಸಾವಿರ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆಯೂ ನಡೆಯಲಿದೆ.
ಸುವರ್ಣ ಪುಷ್ಪ ಅಭಿಷೇಕ
ದೇವಿಯ ಭಕ್ತರೊಬ್ಬರು ದೇವಸ್ಥಾನಕ್ಕೆ 108 ಸುವರ್ಣ ಪುಷ್ಪಗಳನ್ನು ನೀಡಿದ್ದಾರೆ. ಈ ಪುಷ್ಪಗಳು ಸಹಿತ ಪವಿತ್ರ ಜಲದ ಅಭಿಷೇಕವನ್ನೂ ಈ ದಿನ ಕೈಗೊಳ್ಳಲಾಗುತ್ತದೆ. ವರ್ಷದಲ್ಲಿ ಒಮ್ಮೆ ಮಾತ್ರ ಈ ಸುವರ್ಣ ಪುಷ್ಪಗಳ ಅಭಿಷೇಕ ನಡೆಸಲಾಗುತ್ತದೆ.