ಆ್ಯಪ್ನಗರ

ಯಡಿಯೂರಪ್ಪಜ್ಜ ಮದ್ಯ ಯಾಕೆ ಬಂದ್‌ ಮಾಡಿಲ್ಲ: ವಿಡಿಯೋ ಮೂಲಕ ಮನವಿ ಮಾಡಿದ 8 ವರ್ಷದ ಬಾಲಕಿ

ಈ ಹಿಂದೆಯೂ ಮದ್ಯ ಬಂದ್ ಮಾಡಿಸಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಳು ಸ್ಫೂರ್ತಿ. ಈಗ ಮತ್ತೊಂದು ವಿಡಿಯೋ ಮೂಲಕ ಮದ್ಯ ಮಾರಾಟ ಬಂದ್ ಮಾಡುವಂತೆ ಬಾಲಕಿ ಆಗ್ರಹ ಮಾಡಿರುವುದು ಸಾಕಷ್ಟು ಮೆಚ್ಚುಗೆಗೆ ವ್ಯಕ್ತವಾಗಿದೆ.

Vijaya Karnataka Web 9 May 2020, 10:17 am
ಬಾಗಲಕೋಟೆ: ಅತಿ ಹೆಚ್ಚು ಓದುಗರನ್ನು ಹೊಂದಿರುವ ವಿಜಯ ಕರ್ನಾಟಕ ವೆಬ್‌ ಕಳೆದ ಕೆಲವು ದಿನಗಳಿಂದ ಮದ್ಯ ಮಾರಾಟಕ್ಕೆ ಸಂಬಂಧಿಸಿ ಮಧುಲೋಕ ಬಾಳು ನರಕ ಎಂಬ ಅಭಿಯಾನ ಆರಂಭಿಸಿದೆ. ಇದಕ್ಕೆ ಈಗ ಎಲ್ಲೆಡೆಯಿಂದಲೂ ಈಗ ಎಲ್ಲೆಡೆ ಸಾಕಷ್ಟು ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
Vijaya Karnataka Web ಸ್ಫೂರ್ತಿ
ಸ್ಫೂರ್ತಿ


ವಿಕ ವೆಬ್‌ ಅಭಿಯಾನಕ್ಕೆ ಪೂರಕ ಎಂಬಂತೆ ಬಾಗಲಕೋಟೆಯಲ್ಲಿ 8 ವರ್ಷದ ಬಾಲಕಿಯೊಬ್ಬಳು ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಮದ್ಯಮಾರಾಟ ಆರಂಭ ಮಾಡಿರುವುದನ್ನು ವಿರೋಧಿಸಿರುವ ಈ ಬಾಲಕಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಲಾಕ್ ಡೌನ್ ಸಡಿಲಿಕೆ ಮಾಡಿರುವುದು ಹಾಗೂ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ಬಗ್ಗೆ ಈಕೆ ಗಮನ ಸೆಳೆದಿದ್ದಾಳೆ.

ಬೀಳಗಿಯ 8ವರ್ಷದ ಸ್ಪೂರ್ತಿ ಹುಲ್ಲಿಕೇರಿ ಎಂಬ ಬಾಲಕಿ ವಿಡಿಯೋ ಮೂಲಕ ಸಿಎಂಗೆ ಮನವಿ ಮಾಡಿದ್ದಾಳೆ. ಬಾಗಲಕೋಟೆ ಜಿಲ್ಲೆ ಬೀಳಗಿಯ ಬಸವೇಶ್ವರ ನಗರದ ಬಾಲಕಿ ವಿಡಿಯೋದಲ್ಲಿ ಮಾತನಾಡಿದ್ದಾಳೆ.

ಮದ್ಯ ಯಾಕೆ ಬಂದ್ ಮಾಡಿಸ್ತಿಲ್ಲ ಯಡಿಯೂರಪ್ಪಜ್ಜ ಉತ್ತರ ಕೊಡಿ ಎಂದು ಕೇಳಿದ್ದಾಳೆ. ಹಲವಾರು ಕಡೆ ಕೊಲೆ, ಜಗಳ ಆಗ್ತೀವೆ.. ಎಂದು ಸಮಸ್ಯೆ ತೆರೆದಿಡುವ ಪ್ರಯತ್ನ ಮಾಡಿದ್ದಾಳೆ ಈ ಬಾಲಕಿ

ಮದ್ಯ ಬಂದ್ ಮಾಡದಿದ್ರೆ ಉಪವಾಸ ಸತ್ಯಾಗ್ರಹ ಮಾಡೋದಾಗಿಯೂ ಸ್ಪೂರ್ತಿ ಹೇಳಿದ್ದಾಳೆ.

ಈ ಹಿಂದೆಯೂ ಮದ್ಯ ಬಂದ್ ಮಾಡಿಸಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಳು ಸ್ಫೂರ್ತಿ. ಈಗ ಮತ್ತೊಂದು ವಿಡಿಯೋ ಮೂಲಕ ಮದ್ಯ ಮಾರಾಟ ಬಂದ್ ಮಾಡುವಂತೆ ಬಾಲಕಿ ಆಗ್ರಹ ಮಾಡಿರುವುದು ಸಾಕಷ್ಟು ಮೆಚ್ಚುಗೆಗೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ