ಆ್ಯಪ್ನಗರ

ಕ್ವಾರಂಟೈನ್‌ನಲ್ಲಿದ್ದ 80 ಜನ ಬಿಡುಗಡೆ

ಅಮೀನಗಡ: ಹೊರ ರಾಜ್ಯದಿಂದ ಬಂದು ಮಾರ್ಚ್ನಿಂದ ಕ್ವಾರಂಟೈನ್‌ನಲ್ಲಿದ್ದ 82 ಜನರನ್ನು ಶನಿವಾರ ಬಿಡುಗಡೆಗೊಳಿಸಲಾಯಿತು.

Vijaya Karnataka 26 Apr 2020, 5:00 am
ಅಮೀನಗಡ: ಹೊರ ರಾಜ್ಯದಿಂದ ಬಂದು ಮಾರ್ಚ್ನಿಂದ ಕ್ವಾರಂಟೈನ್‌ನಲ್ಲಿದ್ದ 82 ಜನರನ್ನು ಶನಿವಾರ ಬಿಡುಗಡೆಗೊಳಿಸಲಾಯಿತು.
Vijaya Karnataka Web 80 release in quarantine
ಕ್ವಾರಂಟೈನ್‌ನಲ್ಲಿದ್ದ 80 ಜನ ಬಿಡುಗಡೆ


ಹುನಗುಂದ ತಾಲೂಕಿನ ಬೇರೆ ಬೇರೆ ಗ್ರಾಮದ ನಿವಾಸಿಗಳು ಕೋವಿಡ್‌ ನಿಮಿತ್ತ ತಮ್ಮ ಗ್ರಾಮ, ಪಟ್ಟಣಗಳತ್ತ ಆಗಮಿಸಿದ್ದರು. ತಾಲೂಕು ಆಡಳಿತ ಮುಂಜಾಗ್ರತಾ ಕ್ರಮವಾಗಿ ಅಂತವರನ್ನೆಲ್ಲಮಾ.28ರಿಂದ ಕ್ವಾರಂಟೈನ್‌ನಲ್ಲಿಡಲಾಗಿತ್ತು.

ಹುನಗುಂದ ನಗರದ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿ37 ಜನ, ಆದರ್ಶ ವಿದ್ಯಾಲಯದಲ್ಲಿ21 ಜನ ಹಾಗೂ ಅಮೀನಗಡ ನವಚೇತನ ಪ್ರೌಢಶಾಲೆಯಲ್ಲಿದ್ದ 22 ಜನರಿದ್ದರು.

ಮಾ.28ರಿಂದ ನಾನಾ ಸ್ಥಳಗಳಲ್ಲಿದ್ದ 80 ಜನರನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು. ಈ ಅವಧಿಯಲ್ಲಿಅವರನ್ನು ಪ್ರತಿದಿನ ಆರೋಗ್ಯ ತಪಾಸಣೆ ಮಾಡಲಾಗಿದ್ದು ಅವರಿಗೆ ಇಲ್ಲಿವರೆಗೂ ಯಾವುದೇ ಕೋವಿಡ್‌-19 ಸೋಂಕಿತ ರೋಗ ಲಕ್ಷಣ ಕಂಡು ಬಂದಿಲ್ಲ. ಜತೆಗೆ ಎಲ್ಲರೂ ಕ್ವಾರಂಟೈನ್‌ನ್ನು ತೃಪ್ತಿಕರವಾಗಿ ಪೂರೈಸಿದ್ದು ತಮ್ಮ ದೈನಂದಿನ ಕಾರ್ಯ ನಿರ್ವಹಿಸಲು ಅರ್ಹರಾಗಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಹುನಗುಂದ ತಹಸೀಲ್ದಾರ್‌ ಕಚೇರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿಅವರನ್ನೆಲ್ಲಬಿಡುಗಡೆಗೊಳಿಸಲಾಯಿತು.

ಪಪಂ ಮುಖ್ಯಾಧಿಕಾರಿ ಐ.ಜಿ.ಕೊಣ್ಣೂರ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿಮನೆಗೆ ತೆರಳಿದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ವಿನಾಕಾರಣ ಹೊರಗೆ ತಿರುಗಾಡದೆ ಮನೆಯಲ್ಲೇ ಇರಿ. ಅವಶ್ಯಕ ವಸ್ತು ಖರೀದಿಗೆ ಹೊರ ಬಂದರೂ ಮಾಸ್ಕ್‌ ಧರಿಸಿಕೊಳ್ಳಿ ಎಂದರು.

ಸಮುದಾಯ ಸಂಘಟನಾ ಅಧಿಕಾರಿ ಯು.ಜಿ.ವರದಪ್ಪನವರ, ಪಿಡಬ್ಲೂತ್ರ್ಯಡಿಯ ಕೆ.ಎಸ್‌.ಕೊಟಗಿ, ಜೆಎಚ್‌ಒ ಸಂತೋಷ ವ್ಯಾಪಾರಿಮಠ, ಸದಸ್ಯರಾದ ವಿಜಯಕುಮಾರ ಕನ್ನೂರ, ಗುರುನಾಥ ಚಳ್ಳಮರದ, ಸಂಗಪ್ಪ ಗೌಡರ, ಯಮನಪ್ಪ ಕುರಿ, ಸೋನಾಬಾಯಿ ಲಮಾಣಿ, ವಿಜಯಲಕ್ಷಿತ್ರ್ಮ ಐಹೊಳ್ಳಿ, ಆರೋಗ್ಯ, ಪೊಲೀಸ್‌ ಇಲಾಖೆ ಹಾಗೂ ಪಪಂ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ