ಆ್ಯಪ್ನಗರ

ಜೆಡಿಎಸ್‌ನಲ್ಲಿ ಮುಗಿಯದ ಭಿನ್ನ ಮತ

ಬಾಗಲಕೋಟ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಸಂಘಟನೆ ಕೈಗೊಳ್ಳಬೇಕಾದ ಜಿಲ್ಲಾ ಜೆಡಿಎಸ್‌ನಲ್ಲಿ ಭಿನ್ನಮತ ಮುಂದುವರಿದಿದೆ, ಜಿಲ್ಲಾ ವಕ್ತಾರ ರಮೇಶ ಬದ್ನೂರ ಅವರನ್ನು ಮತ್ತೊಮ್ಮೆ ಪಕ್ಷದ ವಕ್ತಾರ ಸ್ಥಾನದಿಂದ ವಜಾಗೊಳಿಸಲಾಗಿದೆ.

Vijaya Karnataka 24 Mar 2019, 5:00 am
ಬಾಗಲಕೋಟ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಸಂಘಟನೆ ಕೈಗೊಳ್ಳಬೇಕಾದ ಜಿಲ್ಲಾ ಜೆಡಿಎಸ್‌ನಲ್ಲಿ ಭಿನ್ನಮತ ಮುಂದುವರಿದಿದೆ, ಜಿಲ್ಲಾ ವಕ್ತಾರ ರಮೇಶ ಬದ್ನೂರ ಅವರನ್ನು ಮತ್ತೊಮ್ಮೆ ಪಕ್ಷದ ವಕ್ತಾರ ಸ್ಥಾನದಿಂದ ವಜಾಗೊಳಿಸಲಾಗಿದೆ.
Vijaya Karnataka Web a different voter in the jds
ಜೆಡಿಎಸ್‌ನಲ್ಲಿ ಮುಗಿಯದ ಭಿನ್ನ ಮತ


ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡ ಅವರು ಜಿಲ್ಲಾ ವಕ್ತಾರ ಸ್ಥಾನದಿಂದ ಬದ್ನೂರ ಅವರನ್ನು ವಜಾಗೊಳಿಸಿದ್ದಾರೆ. ಜತೆಗೆ ಜಮಖಂಡಿ ಘಟಕದ ಅಧ್ಯಕ್ಷ ಗುಡುಸಾಬ್‌ ಹೊನವಾಡ ಅವರನ್ನು ವಜಾಗೊಳಿಸಿ ಅವರ ಸ್ಥಾನಕ್ಕೆ ಚನಬಸಪ್ಪ ಕಪಾಟೆಯವರನ್ನು ನೇಮಕಗೊಳಿಸಲಾಗಿದೆ ಎಂದು ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶರಣು ಹುರಕಡ್ಲಿ ತಿಳಿಸಿದ್ದಾರೆ. ಹೊಸದಾಗಿ ಪದಾಧಿಕಾರಿಗಳನ್ನು ವಜಾಗೊಳಿಸಿದ ಆದೇಶ ಪಕ್ಷದ ಕಾರ್ಯಕರ್ತರಲ್ಲೇ ಗೊಂದಲಕ್ಕೆ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ ಜಿಲ್ಲಾಧ್ಯಕ್ಷ ಎಸ್‌.ಆರ್‌.ನವಲಿಹಿರೇಮಠ ಅವರು ಬದ್ನೂರ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಆದೇಶ ನೀಡಿದ್ದರು. ನಂತರ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ ಜಿಲ್ಲಾಧ್ಯಕ್ಷರ ಆದೇಶ ರದ್ದುಗೊಳಿಸಿ ಬದ್ನೂರ ಅವರನ್ನು ಪಕ್ಷದಲ್ಲಿ ಮುಂದುವರಿಸಿದ್ದರು. ಆದೇಶದಲ್ಲಿ 'ಜಿಲ್ಲಾಧ್ಯಕ್ಷರು ಅವರು ಯಾವುದೇ ಕ್ರಮ ಕೈಗೊಳ್ಳುವ ಮೊದಲು ನನಗೆ ಮಾಹಿತಿ ನೀಡಬೇಕು. ಚುನಾವಣೆ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಉಚ್ಛಾಟಿಸಬಾರದು' ಎಂದು ಖಡಕ್‌ ಸೂಚನೆ ನೀಡಿದ್ದರು. ಪಕ್ಷ ವಿರೋಧಿ ಹೇಳಿಕೆ ನೀಡಿದ್ದ ಬದ್ನೂರ ವಿರುದ್ಧ ಆಕ್ರೋಶಗೊಂಡಿದ್ದ ಜಿಲ್ಲಾಧ್ಯಕ್ಷ ನವಲಿಹಿರೇಮಠ ರಾಜ್ಯಾಧ್ಯಕ್ಷರ ಆದೇಶದಿಂದ ಮುಜುಗರಕ್ಕೀಡಾಗಿದ್ದರು ಎನ್ನಲಾಗಿದೆ. ಇದೀಗ ಜೆಡಿಎಸ್‌ ವರಿಷ್ಠ ದೇವೇಗೌಡರೇ ಬದ್ನೂರ ಅವರನ್ನು ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದು ನವಲಿಹಿರೇಮಠ ಹಾಗೂ ಬದ್ನೂರ ಮಧ್ಯೆ ನಡೆಯುತ್ತಿರುವ ಜಟಾಪಟಿಯ ಫಲಿತಾಂಶ ಎಂದು ಹೇಳಲಾಗಿದೆ.

'ದೇವೇಗೌಡರು ಹೊರಡಿಸಿದ ಆದೇಶದಲ್ಲಿ ಮಾ.2 ಎಂದು ಉಲ್ಲೇಖಿಸಲಾಗಿದೆ, ಇದು ಅನುಮಾನಕ್ಕೆ ಕಾರಣವಾಗಿದೆ. ನಾನು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ' ಎಂದು ರಮೇಶ ಬದ್ನೂರ ಹೇಳಿದ್ದಾರೆ. ಅಸ್ತಿತ್ವದ ಹುಡುಕಾಟದಲ್ಲಿರುವ ಜೆಡಿಎಸ್‌ನ ಜಿಲ್ಲಾ ಘಟಕದಲ್ಲಿ ಪದಾಧಿಕಾರಿಗಳ ಕಲಹ ಹೆಚ್ಚಾಗಿದ್ದು, ಸಂಘಟನೆ ಕೈಗೊಳ್ಳುವುದು ಹೈಕಮಾಂಡ್‌ಗೆ ಕಷ್ಟಕರವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ