ಆ್ಯಪ್ನಗರ

7 ಜನರ ಜೀವ ಉಳಿಸಿದ ಚಾಲಕ

ಜಮಖಂಡಿ: ತಾಲೂಕಿನ ಹಿಪ್ಪರಗಿ ಜಲಾಶಯದ ಬಳಿ ಶುಕ್ರವಾರ ಕೃಷ್ಣಾ ನದಿ ಪ್ರವಾಹವನ್ನು ನೋಡುತ್ತ ನದಿಗೆ ಬಿದ್ದ ಏಳು ಜನರ ಜೀವವನ್ನು ಕೃಷಿ ಇಲಾಖೆ ವಾಹನದ ಚಾಲಕನು ಚಾಣಾಕ್ಷ ತನದಿಂದ ಉಳಿಸಿದ್ದಾನೆ.

Vijaya Karnataka 17 Aug 2019, 5:00 am
ಜಮಖಂಡಿ: ತಾಲೂಕಿನ ಹಿಪ್ಪರಗಿ ಜಲಾಶಯದ ಬಳಿ ಶುಕ್ರವಾರ ಕೃಷ್ಣಾ ನದಿ ಪ್ರವಾಹವನ್ನು ನೋಡುತ್ತ ನದಿಗೆ ಬಿದ್ದ ಏಳು ಜನರ ಜೀವವನ್ನು ಕೃಷಿ ಇಲಾಖೆ ವಾಹನದ ಚಾಲಕನು ಚಾಣಾಕ್ಷ ತನದಿಂದ ಉಳಿಸಿದ್ದಾನೆ.
Vijaya Karnataka Web a driver who saved seven peoples lives
7 ಜನರ ಜೀವ ಉಳಿಸಿದ ಚಾಲಕ


ತಾಲೂಕಿನ ಹಿಪ್ಪರಗಿ ಜಲಾಶಯದ ಜನವಾಡ ಬಳಿ ಲಕ್ಷ್ಮಿ ದೇವಸ್ಥಾನ ಬಳಿ ಎತ್ತರವಾಗಿರುವ ರಸ್ತೆ ಮೇಲಿಂದ ಕೃಷ್ಣೆಯ ಪ್ರವಾಹದ ಹಿನ್ನೀರು ನೋಡುತ್ತ ವಾಹನ ಚಲಾಯಿಸುತ್ತಿದ್ದಾಗ ಚಾಲಕನÜ ನಿಯಂತ್ರಣ ತಪ್ಪಿ ವಾಹನ ರಸ್ತೆ ಮೇಲಿಂದ ನೀರಿನಲ್ಲಿ ಮುಳಗಿದೆ.

ಇದೇ ರಸ್ತೆಯಲ್ಲಿ ಸಾಗುತ್ತಿದ್ದ ಜಮಖಂಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಜಿ.ಮಾಳೇದ ಅವರ ವಾಹನ ಚಾಲಕ ವಿನೋದ ಬರಗಿ ಈ ಘಟನೆ ನೋಡಿ ತನ್ನ ಜೀವದ ಹಂಗು ತೊರೆದು ಮುಳುಗಿದ ವಾಹನದಿಂದ ಏಳು ಜನರನ್ನು ರಕ್ಷಿಸಿ, ಮಾನವೀಯತೆ ಮೆರೆದಿದ್ದಾನೆ.

ವಾಹನದಲ್ಲಿ ಮೂವರು ಪುರುಷರು, ಮಹಿಳೆಯರು ಸಂಚರಿಸುತ್ತಿದ್ದರು. ಎಲ್ಲರೂ ಅಥಣಿ ತಾಲೂಕಿನವರಾಗಿದ್ದು, ಜಮಖಂಡಿಯಲ್ಲಿನ ಸಂಬಂಧಿಕರ ಮನೆಗೆ ಹೊರಟಿರುವ ವೇಳೆ ಈ ಘಟನೆ ನಡೆದಿದೆ. ಸುರೇಖಾ ಮಾರುತಿ ಪಾಟೀಲರ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ವಿಜಯಪುರಕ್ಕೆ ಕಳುಹಿಸಲಾಗಿದೆ. ಇನ್ನೂಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಇಲ್ಲಿಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಚಾಲಕ ವಿನೋದ ಬರಗಿ ಸಾಹಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸಾಹೇಬರು ಸೂಚನೆ ಬಂದ ಬಳಿಕ ಧೈರ್ಯ ಮಾಡಿ ನದಿಗೆ ಹಾರಿದೆ. ಏಳು ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದೆ. ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ನಾನು ಮಾಡಿದ ಸಾಹಸಕ್ಕೆ ಹಿರಿಯರ ಆಶೀರ್ವಾದ ಇತ್ತು. ನನಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಿನೋದ ಬರಗಿ, ಕೃಷಿ ಇಲಾಖೆಯ ವಾಹನ ಚಾಲಕ, ಜಮಖಂಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ