ಆ್ಯಪ್ನಗರ

ಬೃಹತ್‌ ಕುಂಭಮೇಳ, ಮೇಳೈಸಿದ ವಾದ್ಯಮೇಳ

ಲೋಕಾಪುರ : ಸ್ಥಳೀಯ ಜ್ಞಾನೇಶ್ವರ ಮಠದ ಬ್ರಹ್ಮಾನಂದ ಮಹಾಸ್ವಾಮಿಗಳನ್ನು ಹನ್ನೆರಡನೆಯ ಪೀಠಸ್ಥರನ್ನಾಗಿ ಪೀಠಾರೋಹಣ ಮಾಡುವ ನಿಮಿತ್ತ ಹಮ್ಮಿಕೊಂಡ ಕುಂಭಮೇಳದಲ್ಲಿ 1008 ಕ್ಕೂ ಹೆಚ್ಚು ಸುಮಂಗಲಿಯರು ಕುಂಭಮೇಳದಲ್ಲಿ ಪಾಲ್ಗೊಂಡು ಗಮನಸೆಳೆದರು.

Vijaya Karnataka 26 Jun 2018, 5:00 am
ಲೋಕಾಪುರ : ಸ್ಥಳೀಯ ಜ್ಞಾನೇಶ್ವರ ಮಠದ ಬ್ರಹ್ಮಾನಂದ ಮಹಾಸ್ವಾಮಿಗಳನ್ನು ಹನ್ನೆರಡನೆಯ ಪೀಠಸ್ಥರನ್ನಾಗಿ ಪೀಠಾರೋಹಣ ಮಾಡುವ ನಿಮಿತ್ತ ಹಮ್ಮಿಕೊಂಡ ಕುಂಭಮೇಳದಲ್ಲಿ 1008 ಕ್ಕೂ ಹೆಚ್ಚು ಸುಮಂಗಲಿಯರು ಕುಂಭಮೇಳದಲ್ಲಿ ಪಾಲ್ಗೊಂಡು ಗಮನಸೆಳೆದರು.
Vijaya Karnataka Web a huge kumbh mela a sung band
ಬೃಹತ್‌ ಕುಂಭಮೇಳ, ಮೇಳೈಸಿದ ವಾದ್ಯಮೇಳ


ಪಟ್ಟಣದ ಲೋಕೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಕುಂಭಮೇಳ ವಿವಿಧ ಕಲಾ ತಂಡಗಳಾದ ಕರಡಿ ಮಜಲು, ಆಕ್ಟ್ರೆಸ್ಟ್ರಾ, ಸುಮಂಗಲೆಯರ ಹೆಜ್ಜೆ ಕುಣಿತ, ಶ್ರೀಗಳಿಗೆ ಪುಷ್ಪರ್ಚನೆ, ಮಹಾರಾಷ್ಟ್ರದ ಡೋಲ್‌ಪತಾಕೆ, ಅಂಬಾರೆ, ಕುದುರೆ ಸವಾರಿ, ನಂದಿಕೋಲು, ಡೊಳ್ಳು ಕುಣಿತ, ಮದ್ದು ಸುಡುವುದು ಸೇರಿದಂತೆ ನಾನಾ ಕಲಾ ತಂಡಗಳ ನೃತ್ಯ ಸಾರ್ವಜನಿಕರ ಮನತಣಿಸಿತು.

ಬ್ರಹ್ಮಾನಂದ ಶ್ರೀಗಳು ಚಿತ್ರಭಾನುಕೋಟಿಯ ಗವಿಗೆ ಹೋಗಿ ಶ್ರೀಗಳ ಆಶೀರ್ವಾದ ತೆಗೆದುಕೊಂಡು ಬಂದು ಕುದರೆಯ ಮೇಲೇರಿ ಕುಂಭಮೇಳಕ್ಕೆ ಚಾಲನೆ ನೀಡಿದರು. ಶಂಕರ ಭಟ್ಟ ಜೋಶಿ ಸಾನ್ನಿಧ್ಯವನ್ನು ವಹಿಸಿದ್ದರು.

ಕುಂಭಮೇಳದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಮಾಜಿಸಚಿವ ಆರ್‌.ಬಿ.ತಿಮ್ಮಾಪುರ, ಹಿರಿಯರಾದ ಲೋಕಣ್ಣ ಉದಪುಡಿ, ಜಿಪಂ ಸದಸ್ಯ ಮಹಾಂತೇಶ ಉದಪುಡಿ, ಶಿವಾನಂದ ಉದಪುಡಿ, ಲೋಕಣ್ಣ ಕತ್ತಿ, ಕಾಶಿನಾಥ ಹುಡೇದ, ಆನಂದ ಹಿರೇಮಠ, ಬಿ.ಡಿ.ಚಿನಗುಂಡಿ, ಯಮನಪ್ಪ ಹೊರಟ್ಟಿ, ಜಿ.ಬಿ.ಜೋಶಿ, ಪ್ರಕಾಶ ಆರ್‌.ಚುಳಕಿ, ಮಲ್ಲಪ್ಪ ಅಂಗಡಿ, ಪ್ರವೀಣ ಗಂಗಣ್ಣವರ, ಸತೀಶ ಕುಲಕರ್ಣಿ, ಬಿ.ಎಲ್‌.ಬಬಲಾದಿ, ಲಕ್ಷ್ಮೀಕಾಂತ ದೇಶಪಾಂಡೆ, ಅಶೋಕ ಮೋದಿ, ಶಿವು ಸುರಪುರ, ಸದಾಶಿವ ಉದಪುಡಿ, ರಾಮಣ್ಣ ಕಿಲಾರಿ, ನಿಂಗಪ್ಪ ಕಾಸರ, ಸಿದ್ದು ಹೂಗಾರ, ಕೃಷ್ಣಾ ಭಜಂತ್ರಿ, ಪ್ರವೀಣ ಮುಷ್ಠಿಗೇರಿ ಅನೇಕ ಭಕ್ತ ವೃಂದ, ಲಕ್ಷಾನಟ್ಟಿ, ವೆಂಕಟಾಪುರ, ಅರಳಿಕಟ್ಟಿ, ಚೌಡಾಪೂರ, ನಾಗಣಾಪುರ, ಜಾಲಿಕಟ್ಟಿ, ಚಿತ್ರಭಾನುಕೋಟಿ ಗ್ರಾಮಗಳ ಭಕ್ತರು ಕುಂಭಮೇಳದಲ್ಲಿ ಪಾಲ್ಗೊಂಡಿದ್ದರು.

ಪಟ್ಟಾಭಿಷೇಕ ಮಹೋತ್ಸವ ಇಂದು

ಬ್ರಹ್ಮಾನಂದ ಶ್ರೀಗಳ ಹನ್ನೆರಡನೆ ಪೀಠಸ್ಥರಾಗಿ ದಿ.26 ರಂದು ಪಟ್ಟಾಭೀಷೇಕ ಮಹೋತ್ಸವ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಶೃಂಗೇರಿಯ ಡಾ: ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳು , ಕೆಂಗೇರಿ ಮುರಗೋಡದ ದಿವಾಕರ ದೀಕ್ಷಿತರು, ಸವದತ್ತಿ ಪ್ರಸನ್‌ ದೀಕ್ಷಿತರು ಸಾನ್ನಿಧ್ಯ ವಹಿಸುವರು. ಕೊಪ್ಪಳದ ಸಂತಶ್ರೇಷ್ಠ ಸುರೇಶ ಪಾಟೀಲ, ಅಗಡಿ ಆನಂದವನದ ಗುರುದತ್ತ ಮೂರ್ತಿ ಚಕ್ರವರ್ತಿಗಳು, ಹಾವೇರಿ ಶಂಕರಭಟ್ಟರು, ಬೆಂಗಳೂರಿನ ಅಧ್ಯಾಪಕ ಭಾಸ್ಕರ ಜೋ ಭಾಗವಸಲಿದ್ದಾರೆ.

ಚತುರ್ವೇದ ವಿದ್ವಾಂಸರಿಂದ ವೇದೋಕ್ತವಾಗಿ ಬ್ರಹ್ಮಾನಂದ ಶ್ರೀಗಳ ಪೀಠಾರೋಹಣ ಕಾರ್ಯಕ್ರಮ ಪಟ್ಟಾಭಿಷೇಕ, ಶಿಲಾಮಣಿಧಾರಣೆ, ಹಾಗೂ ಪಾದಪೂಜೆ, ಪುಷ್ಟವೃ ಠಿ ಕಿರೀಟಧಾರಣೆ ನಡೆಯಲಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ