ಆ್ಯಪ್ನಗರ

ಆಶಾ ಕಾರ್ಯಕರ್ತೆಯರಿಗೆ ಪಾಠ, ವಿದ್ಯಾರ್ಥಿನಿಯರಿಗೆ ಮೇಸ್ಟು್ರ

ಬಾಗಲಕೋಟೆ: ಜನರಲ್ಲಿಆರೋಗ್ಯದ ಕುರಿತು ಹೇಗೆ ಜಾಗೃತಿ ಮೂಡಿಸಬೇಕು ಎಂದು ಆಶಾ ಕಾರ್ಯಕರ್ತೆಯರಿಗೆ ಕ್ಲಾಸ್‌ ತೆಗೆದುಕೊಂಡರೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುವ ಮೂಲಕ ಮೇಸ್‌್ಟ್ರ ಆಗಿ ಬಾಗಲಕೋಟೆ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಕಾರ್ಯ ನಿರ್ವಹಿಸಿದರು.

Vijaya Karnataka 16 Sep 2019, 5:00 am
ಬಾಗಲಕೋಟೆ: ಜನರಲ್ಲಿಆರೋಗ್ಯದ ಕುರಿತು ಹೇಗೆ ಜಾಗೃತಿ ಮೂಡಿಸಬೇಕು ಎಂದು ಆಶಾ ಕಾರ್ಯಕರ್ತೆಯರಿಗೆ ಕ್ಲಾಸ್‌ ತೆಗೆದುಕೊಂಡರೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುವ ಮೂಲಕ ಮೇಸ್‌್ಟ್ರ ಆಗಿ ಬಾಗಲಕೋಟೆ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಕಾರ್ಯ ನಿರ್ವಹಿಸಿದರು.
Vijaya Karnataka Web a lesson for asha activists teacher for students
ಆಶಾ ಕಾರ್ಯಕರ್ತೆಯರಿಗೆ ಪಾಠ, ವಿದ್ಯಾರ್ಥಿನಿಯರಿಗೆ ಮೇಸ್ಟು್ರ


ಜಿಲ್ಲಾಡಳಿತ ಭವನದಲ್ಲಿಹೊರಗಡೆ ಆಶಾ ಕಾರ್ಯಕರ್ತೆಯರು ಹಾಗೂ ನರ್ಸಿಂಗ್‌ ಕಾಲೇಜ್‌ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಅವರೊಟ್ಟಿಗೆ ಮಾತನಾಡುತ್ತಿರುವವರು ಯಾರೆಂದು ಹೋದರೆ ಅಲ್ಲಿಕಂಡದ್ದು ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಎಲ್ಲರ ಗಮನ ಸೆಳೆದರು.

ಭಾನುವಾರ ಬೆಳಗ್ಗೆ 10ಕ್ಕೆ ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮ ಆರೋಗ್ಯ ಇಲಾಖೆಯಿಂದ ಆಯೋಜಿಸಲಾಗಿತ್ತು. ಡಿಸಿಎಂ ಗೋವಿಂದ ಕಾರಜೋಳ ಜಾಗೃತಿ ಜಾಥಾಕ್ಕೆ ಚಾಲನೆ ನೀಡಬೇಕಿತ್ತು. ಆದರೆ ಡಿಸಿಎಂ ಬರುವುದು ವಿಳಂಬವಾಯಿತು. ಈ ಸಂದರ್ಭದಲ್ಲಿಜಾಥಾದಲ್ಲಿಪಾಲ್ಗೊಳ್ಳಲು ಆಶಾ ಕಾರ್ಯಕರ್ತೆಯರು ಹಾಗೂ ನರ್ಸಿಂಗ್‌ ವಿದ್ಯಾರ್ಥಿಗಳು ನೆರೆದಿದ್ದರು. ಅವರಿಗೆಲ್ಲಮೇಸ್‌್ಟ್ರ ಆಗಿ ಕಾರ್ಯ ನಿರ್ವಹಿಸಿ ಡಿಸಿ ಗಮನ ಸೆಳೆದರು.

ಆಶಾ ಕಾರ್ಯಕರ್ತೆಯರ ಜತೆ ಚರ್ಚೆ ನಡೆಸಿ ಶೌಚಾಲಯ ಹಾಗೂ ಸ್ವಚ್ಛತೆ ಬಗ್ಗೆ ಗ್ರಾಮ ಮಟ್ಟದಲ್ಲಿಜಾಗೃತಿ ಮೂಡಿಸುವಂತೆ ತಿಳಿಸಿದರು. ಸ್ವಾತಂತ್ರ ಬಂದು 70 ವರ್ಷ ಗತಿಸಿದರೂ ನಮ್ಮಲ್ಲಿಬಯಲು ಶೌಚಾಲಯದಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತಿಲ್ಲ. ಜನರಲ್ಲಿಜಾಗೃತಿ ಮೂಡಿಸುವಲ್ಲಿಆಶಾ ಕಾರ್ಯಕರ್ತೆಯರ ಕೆಲಸ ಬಹು ಉಪಯುಕ್ತವಾಗಿದೆ. ಬಯಲು ಶೌಚಾಲಯದಿಂದ ಮನುಷ್ಯ ಅನಾರೋಗ್ಯಕ್ಕೆ ಈಡಾಗುತ್ತಾನೆ. ಈ ಕುರಿತು ಆಶಾ ಕಾರ್ಯಕರ್ತೆಯರು ಹೆಚ್ಚು ಗಮನ ಹರಿಸಬೇಕು ಎಂದರು.

ನಂತರ ಬಸವೇಶ್ವರ ವಿದ್ಯಾವರ್ಧಕ ಸಂಘದ ನರ್ಸಿಂಗ್‌ ಕಾಲೇಜ್‌ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರಂತೆ ಪ್ರಶ್ನೆ ಕೇಳುವ ಜತೆ ಉತ್ತರ ನೀಡಿದರು. ಎಂಎಲ್‌ಎಚ್‌ಪಿ ಎಂದರೇನು? ಗ್ರಾಮೀಣ ಜನರ ಆರೋಗ್ಯ ಕಾಪಾಡುವಲ್ಲಿನಿಮ್ಮ ಪಾತ್ರವೇನು? ತಾಯಿ ಕಾರ್ಡ್‌, ಜೆಎಸ್‌ವೈ, ಜನನಿ, ಸುರಕ್ಷಾ ಎಂದರೇನು? ಹೊಸ ವೈರಸ್‌ ಹೆಸರೇನು? ಎಂಬ ಇತ್ಯಾದಿ ಪ್ರಶ್ನೆಗಳ ಮೂಲಕ ಉತ್ತರ ಪಡೆದರಲ್ಲದೆ ತಾವೂ ಸಹ ಕೆಲ ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ