ಆ್ಯಪ್ನಗರ

ಬದುಕಿನ ನಂಟು ಅರಳಿಸಿದ ಗುಲಾಬಿ ಕಂಟಿ

ಹನಮಂತ ಬುರ್ಲಿ, ಗಲಗಲಿ; ಕಬ್ಬು ಕಬ್ಬು ಎಂದು ಕಬ್ಬು ಬೆಳೆಯುತ್ತಿರುವ ಈ ಭಾಗದ ಸಾವಿರಾರು ರೈತರ ಮಧ್ಯೆ ಇಲ್ಲೊಬ್ಬ ರೈತ ವಿನೂತನ ಪ್ರಯೋಗ ಮಾಡಿ ಗುಲಾಬಿ ಬೆಳೆದು ಬದುಕನ್ನು ಅರಳಿಸಿಕೊಂಡಿದ್ದಾನೆ.

Vijaya Karnataka 2 Dec 2019, 5:00 am
ಹನಮಂತ ಬುರ್ಲಿ, ಗಲಗಲಿ;
Vijaya Karnataka Web a rose that bloomed for life
ಬದುಕಿನ ನಂಟು ಅರಳಿಸಿದ ಗುಲಾಬಿ ಕಂಟಿ

ಕಬ್ಬು ಕಬ್ಬು ಎಂದು ಕಬ್ಬು ಬೆಳೆಯುತ್ತಿರುವ ಈ ಭಾಗದ ಸಾವಿರಾರು ರೈತರ ಮಧ್ಯೆ ಇಲ್ಲೊಬ್ಬ ರೈತ ವಿನೂತನ ಪ್ರಯೋಗ ಮಾಡಿ ಗುಲಾಬಿ ಬೆಳೆದು ಬದುಕನ್ನು ಅರಳಿಸಿಕೊಂಡಿದ್ದಾನೆ.

ಬೀಳಗಿ ತಾಲೂಕಿನ ಗುಳಬಾಳ ಗ್ರಾಮದ ಯುವ ರೈತ ವಿಠ್ಠಲ ಪೂಜಾರಿ ಗುಲಾಬಿ ಹೂ ಬೆಳೆ ಕೃಷಿಯತ್ತ ಮನಸ್ಸುಮಾಡಿ ಬಾಳು ಬೆಳಗಿಸಿಕೊಂಡಿದ್ದಾನೆ. ಕಬ್ಬು, ಈರುಳ್ಳಿ, ಗೋವಿನಜೋಳ ಸೇರಿದಂತೆ ನಾನಾ ಬೆಳೆಗಳನ್ನು ಬೆಳೆಯುತ್ತಿರುವ ಕೃಷ್ಣಾ ಕಣಿವೆಯ ಸಂತ್ರಸ್ತರ ಸೀಮೆಯ ರೈತ ಅಲ್ಪಾವಧಿ ಬೆಳೆಯಾಗಿರುವ ನಾನಾ ಬಣ್ಣದ ಗುಲಾಬಿ ಹೂವಿನ ಬೆಳೆ ಕೃಷಿ ಯತ್ತ ಗಮನಹರಿಸಿ ಅತಿ ಕಡಿಮೆ ಅವಧಿಯಲ್ಲಿಅಧಿಕ ಲಾಭ ಸಾಧ್ಯ ಎಂಬುದನ್ನು ತಾನೂ ಕಂಡು ಕೊಂಡು ಮತ್ತೊಬ್ಬರಿಗೂ ತೋರಿಸಿಕೊಟ್ಟಿದ್ದಾನೆ.

ಇವರ ತೋಟದಲ್ಲಿಚೆನ್ನಾಗಿ ಅರಳಿ ಬೆಳೆದು ನಿಂತಿರುವ ಗುಲಾಬಿ ಹೂವುಗಳತ್ತ ಕಣ್ಣರಳಿಸಿದರೆ ಸಾಕು ಮನಸ್ಸು ಅರಳುತ್ತದೆ. ಕಾಲುಗಳನ್ನ ಈತನ ಹೂ ಬೆಳೆಯತ್ತ ಸೆಳೆಯುವಂತೆ ಮಾಡುತ್ತದೆ.

ಕಸಿ ಮಾಡಿದ ಸಸಿ,

ಕೇವಲ ಸುಮಾರು 15 ಗುಂಟೆ ಜಮೀನಿನಲ್ಲಿಸುಮಾರು 6 ನೂರಕ್ಕಿಂತ ಹೆಚ್ಚು ಕಸಿಮಾಡಿದ ಸಸಿಗಳನ್ನು ನಾಟಿಸಿ ಅದಕ್ಕಿಂತ ಮೊದಲು ಫಲವತ್ತಾದ ಮಣ್ಣು ಹಾಕಿಸಿ ಅದಕ್ಕೆ ಸೆಗಣಿಯ ಗೊಬ್ಬರ ಬಳಸಿ ಭೂಮಿ ಹದಮಾಡಿ 4 ಅಡಿ ಅಂತರದಿಂದ ಪ್ರತಿ ಸಾಲಿಗೆ 3 ಅಡಿ ದೂರದಲ್ಲಿಸಸಿಗಳನ್ನು ನಾಟಿಮಾಡಿದ್ದಾನೆ. ನಾಟಿ ಮಾಡಿದ ಕೆಲವೇ ದಿನಗಳಲ್ಲಿಅರಳಿ ನಿಂತ ಗುಲಾಬಿ ಹೂವುಗಳು ಮತ್ತೊಬ್ಬ ರೈತರ ಮನವನ್ನೂ ಸೆಳೆದು ತಾವೂ ಬೆಳೆಯಬೇಕು ಎಂಬಂತೆ ಸ್ಪೂರ್ತಿ ನೀಡಿವೆ.

ಮಾರಾಟ;

ಅರಳಿ ನಿಂತ ಗುಲಾಬಿ ಹೂವುಗಳನ್ನು ವಿಠ್ಠಲ ಪೂಜಾರಿ ಸುತ್ತ ಮುತ್ತಲಿನ ನಾನಾ ಗ್ರಾಮಗಳಿಗೆ ರವಾಣಿಸುತ್ತಾನೆ. ಇದೀಗ ಅತ್ಯತ್ತಮ ಹೂವು ಇಲ್ಲಿಸಿಗುತ್ತದೆಂದು ಗೊತ್ತಾಗಿ ಕೆಲವರು ತೋಟಕ್ಕೆ ಬಂದು ಒಯ್ಯುವಂತಾಗಿದೆ. ಗುಲಾಬಿ ಹೂವು ಇಲ್ಲಿದೊರೆಯುತ್ತಿವೆ ಎಂಬ ಮಾಹಿತಿ ದೊರೆತ ನಾನಾ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಮದುವೆ, ಪೂಜೆ, ಅಲಂಕಾರ, ಸೇರಿದಂತೆ ನಾನಾ ಸಭೆ ಸಮಾರಂಭಗಳು ನಡೆಯುವ ಕಾರ್ಯಗಳಿಗೆ ಫೋನಿನಲ್ಲಿಅಡ್ವಾನ್ಸ್‌ ಬುಕ್ಕಿಂಗ್‌ ಮಾಡಿ ಹೂವುಗಳನ್ನು ಪಡೆಯುತ್ತಾರೆ.

ಲಕ್ಷಾಂತರ ಲಾಭ:

ಕಸಿಮಾಡಿದ ಗುಲಾಬಿ ಹೂವಿನ ಸಸಿಗಳನ್ನು ನಾಟಿಸಿ ಗೊಬ್ಬರ ಔಷಧಿ ಸೇರಿದಂತೆ ಇನ್ನಿತರ ಖರ್ಚು ತೆಗೆದು ಕೇವಲ 15 ಗುಂಟೆ ಭೂಮಿಯಲ್ಲಿಸುಮಾರು 1.50.000 ಲಾಭವಾಗಿದೆ. ಪ್ರತಿ ದಿನ ಅರಳಿದ ಹೂವನ್ನು ತಮ್ಮ ಕುಟುಂಬ ತೆಗೆದುಕೊಂಡು ನಾನಾ
ಗ್ರಾಮಗಳಿಗೆ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ರೈತ ವಿಠ್ಠಲ ಪೂಜಾರಿ.

ರೈತರಿಗೆ ಮಾದರಿ:
ಮಣ್ಣಲ್ಲಿ ಚಿನ್ನವಿದೆ. ಪಡೆಯುವ ಕಲೆ ಬೇಕು. ಅದಕ್ಕಿಂತಲೂ ದುಡಿಯುವ ಛಲಬೇಕು ಎಂದು ಎಂ,ಎ, ಬಿ ಎಡ್‌ ಪದವಿ ಪಡೆದು ಸರಕಾರಿ ನೌಕರಿಗೆ ಅಲೆಯದೆ ಪುಷ್ಪ ಕೃಷಿ ಮಾಡುತ್ತ ಗುಲಾಬಿ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾನೆ ಗುಳಬಾಳ ಗ್ರಾಮದ ರೈತ ವಿಠ್ಠಲ ಪೂಜಾರಿ. ತೋಟದಲ್ಲಿಬೆಳಗ್ಗೆ ಹಾಗೂ ಸಂಜೆ ಸೂರ್ಯೋದಯ, ಸೂರ್ಯಾಸ್ತ ಸಮಯದಲ್ಲಿಗುಲಾಬಿ ನೋಡುವುದರಲ್ಲೇ ಬದುಕಿನ ಸಾರ್ಥಕತೆ, ಸುವಾಸನೆ ಇದೆ ಎನ್ನುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ