ಆ್ಯಪ್ನಗರ

ಹೋಳಿ ಹಬ್ಬದ ಆಚರಣೆ ಸಮಿತಿಗೆ ಅಭಿನಂದನ ಹೆಸರು

ನಗರದ ಬಟ್ಟೆ ವ್ಯಾಪಾರಸ್ಥರು, ಚಿನ್ನದ ವ್ಯಾಪಾರಸ್ಥರು, ಪಾತ್ರೆ ಸಾಮಗ್ರಿ ವ್ಯಾಪಾರಸ್ಥರು ಹಾಗೂ ಕಿರಾಣಿ ವರ್ತಕರ ಸಂಘಟನೆಯಿಂದ ಹೋಳಿ ಹಬ್ಬದ ಆಚರಣೆ ಸಮಿತಿಗೆ ಅಭಿನಂದನ ಎಂದು ಹೆಸರಿಡಲಾಗಿದೆ.

Vijaya Karnataka 16 Mar 2019, 6:17 pm
ಬಾಗಲಕೋಟ: ಪಾಕಿಸ್ತಾನದ ಯುದ್ಧ ವಿಮಾನ ಹೊಡೆದುರುಳಿಸಿ ಖ್ಯಾತಿ ಗಳಿಸಿರುವ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರ ಹೆಸರನ್ನು ಹೋಳಿ ಆಚರಣೆ ಸಮಿತಿಯೊಂದಕ್ಕೆ ನಾಮಕರಣಗೊಳಿಸುವ ಮೂಲಕ ವ್ಯಾಪಾರಸ್ಥರು ರಾಷ್ಟ್ರಪ್ರೇಮ ಮೆರೆದಿದ್ದಾರೆ.
Vijaya Karnataka Web abhi


ನಗರದ ಬಟ್ಟೆ ವ್ಯಾಪಾರಸ್ಥರು, ಚಿನ್ನದ ವ್ಯಾಪಾರಸ್ಥರು, ಪಾತ್ರೆ ಸಾಮಗ್ರಿ ವ್ಯಾಪಾರಸ್ಥರು ಹಾಗೂ ಕಿರಾಣಿ ವರ್ತಕರ ಸಂಘಟನೆಯಿಂದ ಹೋಳಿ ಹಬ್ಬದ ಆಚರಣೆ ಸಮಿತಿಗೆ ಅಭಿನಂದನ ಎಂದು ಹೆಸರಿಡಲಾಗಿದೆ. ಇದೇ ಶೀರ್ಷಿಕೆಯಡಿ ಶುಕ್ರವಾರ ಹಲಗೆ ಮೇಳ ಆಯೋಜಿಸಿದ ಸಂಘಟಕರು ಮಾಜಿ ಸೈನಿಕರನ್ನು ಸನ್ಮಾನಿಸಿದರು.

ಅಡತ್‌ ಬಜಾರ್‌ನಲ್ಲಿ ರಾತ್ರಿ ಆಯೋಜಿಸಲಾಗಿದ್ದ ಹಲಗೆ ಮೇಳದಲ್ಲಿ ಹಲವಾರು ಯುವಕರು ಹಲಗೆ ಬಾರಿಸಿ ಗಮನ ಸೆಳೆದರು. ಮೇಳ ಉದ್ಘಾಟಿಸಿದ ಹೋಳಿ ಆಚರಣೆ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ 'ಹೋಳಿ ಹಬ್ಬದ ಮೂರು ದಿನ ಎಲ್ಲರೂ ನಗರದಲ್ಲಿದ್ದು ಸಂಭ್ರಮಾಚರಣೆಯಲ್ಲಿ ಭಾಗವಹಿಸಬೇಕು. ನಗರದ ಸಂಪ್ರದಾಯವಾದ ಬಣ್ಣದಾಟದಲ್ಲಿ ಎಲ್ಲರೂ ಆಸಕ್ತಿಯಿಂದ ಭಾಗವಹಿಸಬೇಕು' ಎಂದು ಹೇಳಿದರು. ಮಾಜಿ ಸೈನಿಕರಾದ ಉಮೇಶ ತೇಲಕರ, ಗಿರಗಾಂವಿಯವರನ್ನು ಸನ್ಮಾನಿಸಲಾಯಿತು. ಸಮಿತಿ ಅಧ್ಯಕ್ಷ ದಿನೇಶ ಬಾರ್ಸಿ, ಭಗವಾನ್‌ದಾಸ್‌ ಬಾರ್ಶಿ, ವೈಭವ ಬಾರ್ಶಿ, ಕೃಷ್ಣಾಜಿ ಅಂಬಾಜಿ, ಮಾರುತಿ ಮಗಜಿ, ನಾಗರಾಜ ಕುಪ್ಪಸ್ತ ಹಾಗೂ ವ್ಯಾಪಾರಸ್ಥರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ