ಆ್ಯಪ್ನಗರ

ರಾಜ್ಯದ ಮದ್ಯ ಗುಣಮಟ್ಟದಿಂದ ಕೂಡಿದೆ: ಸಚಿವ ತಿಮ್ಮಾಪುರ

ರಾಜ್ಯದಲ್ಲಿನ ಉತ್ತಮ ಮದ್ಯ ಇತರ ರಾಜ್ಯಗಳಿಗೂ ಮಾದರಿಯಾಗಿದೆ ಎಂದು ಅಬಕಾರಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸಮರ್ಥಿಸಿಕೊಂಡರು.

Vijaya Karnataka Web 26 Jan 2018, 5:17 pm
ಬಾಗಲಕೋಟ: ರಾಜ್ಯದಲ್ಲಿನ ಉತ್ತಮ ಮದ್ಯ ಇತರ ರಾಜ್ಯಗಳಿಗೂ ಮಾದರಿಯಾಗಿದೆ ಎಂದು ಅಬಕಾರಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸಮರ್ಥಿಸಿಕೊಂಡರು.
Vijaya Karnataka Web alcohol in karnataka
ರಾಜ್ಯದ ಮದ್ಯ ಗುಣಮಟ್ಟದಿಂದ ಕೂಡಿದೆ: ಸಚಿವ ತಿಮ್ಮಾಪುರ


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು `ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಮದ್ಯ ಒದಗಿಸುತ್ತಿದ್ದೇವೆ ಎಂಬ ಸಮಾಧಾನ ನಮಗಿದೆ. ಬೇರೆ ರಾಜ್ಯಗಳಿಗೆ ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಉತ್ಕ್ರಷ್ಟ ಗುಣಮಟ್ಟದ ಮದ್ಯ ಮಾದರಿಯಾಗಿದೆ. ಈ ವರ್ಷ ಅಬಕಾರಿ ಇಲಾಖೆಯಲ್ಲಿ ನಿಗದಿತ ಗುರಿ 18 ಸಾವಿರ ಕೋಟಿ ರೂ. ತಲುಪಲು ಸಾಧ್ಯವಾಗಿಲ್ಲ. ಆದರೆ ಜನರು ಆರೋಗ್ಯವಂತರಾಗಿದ್ದರೆ ನಮಗೆ ಅಷ್ಟು ಸಾಕು' ಎಂದು ಹೇಳಿದರು.

ಮಾರ್ಚ್ ಮೊದಲ ವಾರದಲ್ಲಿ ಚಾಲುಕ್ಯ ಹಾಗೂ ರನ್ನ ಉತ್ಸವ ಆಯೋಜಿಸಲು ನಿರ್ಧರಿಸಲಾಗಿದೆ. ಈಗಾಗಲೇ ಪೂರ್ವ ಸಿದ್ಧತೆ ಸಭೆ ನಡೆಸಿ ರೂಪುರೇಷೆ ಕೈಗೊಳ್ಳಲಾಗಿದೆ. ಮಾರ್ಚ್‍ನಲ್ಲೇ ಎರಡೂ ಉತ್ಸವಗಳನ್ನು ನಡೆಸಲಾಗುತ್ತದೆ. ಅದ್ದೂರಿಯಾಗಿ ಉತ್ಸವ ಆಚರಿಸಲಾಗುವುದು' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ