ಆ್ಯಪ್ನಗರ

ಅಕ್ರಮ ಮರಳು ವಶಕ್ಕೆ

ಅಮೀನಗಡ: ಸಮೀಪದ ಹೊನ್ನರಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 20 ಟಿಪ್ಪರ್‌ ಮರಳನ್ನು ಹುನಗುಂದ ತಹಸೀಲ್ದಾರ್‌ ನೇತೃತ್ವದ ತಂಡ ವಶಕ್ಕೆ ಪಡೆದಿದೆ.

Vijaya Karnataka 16 Sep 2018, 5:00 am
ಅಮೀನಗಡ: ಸಮೀಪದ ಹೊನ್ನರಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 20 ಟಿಪ್ಪರ್‌ ಮರಳನ್ನು ಹುನಗುಂದ ತಹಸೀಲ್ದಾರ್‌ ನೇತೃತ್ವದ ತಂಡ ವಶಕ್ಕೆ ಪಡೆದಿದೆ.
Vijaya Karnataka Web amingad town illegal sand seized
ಅಕ್ರಮ ಮರಳು ವಶಕ್ಕೆ


ಹೊನ್ನರಹಳ್ಳಿ ಗ್ರಾಮದ ರಿಸನಂ 2ರ ಸರಕಾರಿ ಜಾಗೆಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹುನಗುಂದ ತಹಸೀಲ್ದಾರ್‌ ಎಸ್‌.ಎಸ್‌.ಸಂಪಗಾವಿ ನೇತೃತ್ವದಲ್ಲಿ ದಾಳಿ ಮಾಡಲಾಯಿತು. ದಾಳಿ ವೇಳೆ 20 ಟಿಪ್ಪರ್‌ನಷ್ಟು ಮರಳು ಸಂಗ್ರಹವಾಗಿದ್ದು ಕಂಡುಬಂದಿತು. ಅಂದಾಜು 1 ಲಕ್ಷ 30 ಸಾವಿರ ಮೌಲ್ಯದ ಮರಳು ಎಂದು ಅಂದಾಜಿಸಲಾಗಿದೆ.

ದಾಳಿ ವೇಳೆ ಕಂದಾಯ ನಿರೀಕ್ಷಕ ಐ.ಬಿ.ಬಾಲಾಗಾವಿ, ಗ್ರಾಮಲೆಕ್ಕಿಗ ಸುನೀಲ ಗೌಡರ, ಪಿಡಬ್ಲೂಡಿ ಇಲಾಖೆಯ ಮಾಲಿಪಾಟೀಲ, ಕಲಾದಗಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ