ಆ್ಯಪ್ನಗರ

ಬಾಗಲಕೋಟೆಯಲ್ಲಿ ಮತ್ತೊಬ್ಬ ವ್ಯಕ್ತಿ ಕೊರೊನಾಗೆ ಬಲಿ

ಅನಾರೋಗ್ಯದಿಂದ ಬಳಲುತ್ತಿದ್ದ 47 ವರ್ಷದ ವ್ಯಕ್ತಿ ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಜಿಲ್ಲೆಯ ಸಿಕ್ಕೇರಿ ಗ್ರಾಮದವನಾಗಿದ್ದ ವ್ಯಕ್ತಿ ವೀರಾಪೂರ ಗ್ರಾಮದಲ್ಲಿ ವಾಸ್ತವ್ಯದಲ್ಲಿದ್ದ. ಚಿಕಿತ್ಸೆಗಾಗಿ ನಿನ್ನೆಯೇ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

Vijaya Karnataka Web 11 Jul 2020, 11:02 am
ಬಾಗಲಕೋಟೆ: ಕೊರೊನಾ ವೈರಸ್‌ ಸೋಂಕು ದಿನದಿಂದ ದಿನಕ್ಕೆ ಇಡೀ ರಾಜ್ಯವನ್ನು ಆವರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ.
Vijaya Karnataka Web CORONA LAB


355ಕ್ಕೇರಿದ ಪಾಸಿಟಿವ್‌ ಸಂಖ್ಯೆ6 ಜನರಿಗೆ ಸೋಂಕು, ವೃದ್ಧೆ ಸಾವು

ಅನಾರೋಗ್ಯದಿಂದ ಬಳಲುತ್ತಿದ್ದ 47 ವರ್ಷದ ವ್ಯಕ್ತಿ ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಜಿಲ್ಲೆಯ ಸಿಕ್ಕೇರಿ ಗ್ರಾಮದವನಾಗಿದ್ದ ವ್ಯಕ್ತಿ ವೀರಾಪೂರ ಗ್ರಾಮದಲ್ಲಿ ವಾಸ್ತವ್ಯದಲ್ಲಿದ್ದ. ಚಿಕಿತ್ಸೆಗಾಗಿ ನಿನ್ನೆಯೇ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಕಾರ್ಖಾನೆ ಮಾಲೀಕರಿಗೆ ಡಿಸಿ ಸೂಚನೆ15 ದಿನದೊಳಗೆ ಕಬ್ಬು ಬಾಕಿ ಪಾವತಿಸಿ

ಆತ ಸಾವನ್ನಪ್ಪಿದ ಬಳಿಕ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ರಿಪೋರ್ಟ್‌ನಲ್ಲಿ ಆತನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಹೀಗಾಗಿ ಆತನ ಮೃತದೇಹವನ್ನು ನಿನ್ನೆ ತಡರಾತ್ರಿಯೇ ಕೋವಿಡ್ ನಿಯಾಮಾವಳಿ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಮೂಲಕ ಬಾಗಲಕೋಟೆಯಲ್ಲಿ ಕೊರೊನಾ ಸೋಂಕು ತಗುಲಿ ಮೃತಪಟ್ಟವರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ.

ಸ್ವಕ್ಷೇತ್ರದ ರಸ್ತೆ ದುರಸ್ಥಿಗೆ ಅನುದಾನ ಮಂಜೂರು ಮಾಡಲು ಪತ್ರ ಬರೆದ ಸಿದ್ದರಾಮಯ್ಯ

ಸಾವನ್ನಪ್ಪಿದ ವ್ಯಕ್ತಿಗೆ ಕೋವಿಡ್‌ ಸೋಂಕು ತಗುಲಿದ್ದು ಕನ್ಫರ್ಮ್ ಆಗ್ತಿದ್ದಂತೆ ವೀರಾಪುರ ಗ್ರಾಮದ ಜನರಲ್ಲಿ ಆತಂಖ ಶುರುವಾಗಿದ್ದು, ಆತನ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರನ್ನೂ ಹೋಂ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ. ಎಂದು ಬಾಗಲಕೋಟೆ ಡಿಎಚ್‌ಓ ಅನಂತ ದೇಸಾಯಿ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ