ಆ್ಯಪ್ನಗರ

ಕಲೆ ದೇವರು ನೀಡಿರುವ ಕೊಡುಗೆ

ಜಮಖಂಡಿ: ಇರುವುದನ್ನು ಕಾಣುವುದು, ಕಾಣುವುದನ್ನು ಇನ್ನೊಬ್ಬರಿಗೆ ಚಿತ್ರದ ಮೂಲಕ ಹೇಳುವುದೇ ಕಲೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಹೇಳಿದರು

Vijaya Karnataka 21 Dec 2019, 5:00 am
ಜಮಖಂಡಿ: ಇರುವುದನ್ನು ಕಾಣುವುದು, ಕಾಣುವುದನ್ನು ಇನ್ನೊಬ್ಬರಿಗೆ ಚಿತ್ರದ ಮೂಲಕ ಹೇಳುವುದೇ ಕಲೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಹೇಳಿದರು.
Vijaya Karnataka Web art is a gift from god
ಕಲೆ ದೇವರು ನೀಡಿರುವ ಕೊಡುಗೆ


ಇಲ್ಲಿನ ಬಿ.ಎಲ್‌.ಡಿ.ಇ ಸಂಸ್ಥೆಯಲ್ಲಿಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಹಾಗೂ ಮಹೇಂದ್ರ ಚಿತ್ರಕಲಾ ಮಹಾವಿದ್ಯಾಲಯ ಸಹಯೋಗದಲ್ಲಿರಾಜ್ಯಮಟ್ಟದ ಕಲಾಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲಾವಿದರು ಯಾರು ಬಡವರಲ್ಲಾ, ಕಲೆ ದೇವರು ನೀಡಿರುವ ಕೊಡುಗೆ ಎಂದು ಭಾವಿಸಬೇಕು, ಮಕ್ಕಳಲ್ಲಿಕಲೆಯ ಬಗ್ಗೆ ಆಸಕ್ತಿ ಮೂಡಿಸಿ ಮುಂದೆ ತರಬೇಕು, ಇಂದಿನ ದಿನಗಳಲ್ಲಿಕಲೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದ್ದು, ಆದ್ದರಿಂದ ಸರಕಾರ ಪ್ರಾಥಮಿಕ ಶಾಲೆಗಳಲ್ಲಿಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದರು.

ವರ್ಣಶಿಲ್ಪಿ ಹಿರಿಯ ಕಲಾವಿದ ವಿಜಯ ಸಿಂಧೂರ ಮಾತನಾಡಿ, ಚಿತ್ರಕಲೆ ಬಹಳ ಶ್ರೇಷ್ಠ ಕಲೆಯಾಗಿದ್ದು ಅದನ್ನು ಎಲ್ಲರು ಕಲಿತುಕೊಳ್ಳಬೇಕು, ನಮ್ಮ ಕಲೆ ನಮ್ಮ ಜೀವನಕ್ಕೆ ಒಳ್ಳೆಯ ತಿರುವು ನಿಡಬೇಕು ಎಂದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ರಮೇಶ ಚೌಹಾಣ್‌, ಬಿಎಲ್‌ಡಿಇ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್‌.ಎಚ್‌.ಲಗಳಿ, ಪ್ರಾಚಾರ್ಯ ಮೂಲಿಮನಿ, ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ