ಆ್ಯಪ್ನಗರ

ಬಂಕ್‌ನಲ್ಲೇ ಎಟಿಎಂ!

ರವಿರಾಜ್‌ ಆರ್‌. ಗಲಗಲಿ ಬಾಗಲಕೋಟೆ ಲಾಕ್‌ ಡೌನ್‌ನಲ್ಲಿಎಟಿಎಂಗಳಲ್ಲಿನೋ ಕ್ಯಾಶ್‌ ಬೋರ್ಡ್‌ ಇದ್ದರೆ ಆತಂಕ ಬೇಡ, ಸಮೀಪದ ಬಿಪಿಸಿಎಲ್‌ ಪೆಟ್ರೋಲ್‌ ಬಂಕ್‌ನಲ್ಲೇ ಹಣ ಪಡೆಯಬಹುದು !.

Vijaya Karnataka 21 Apr 2020, 5:00 am
ರವಿರಾಜ್‌ ಆರ್‌. ಗಲಗಲಿ ಬಾಗಲಕೋಟೆ
Vijaya Karnataka Web BUNK ATM-BGK-20_41


ಲಾಕ್‌ ಡೌನ್‌ನಲ್ಲಿಎಟಿಎಂಗಳಲ್ಲಿನೋ ಕ್ಯಾಶ್‌ ಬೋರ್ಡ್‌ ಇದ್ದರೆ ಆತಂಕ ಬೇಡ, ಸಮೀಪದ ಬಿಪಿಸಿಎಲ್‌ ಪೆಟ್ರೋಲ್‌ ಬಂಕ್‌ನಲ್ಲೇ ಹಣ ಪಡೆಯಬಹುದು !.

ತುರ್ತು ಸಂದರ್ಭದಲ್ಲಿಹಣ ಪಡೆಯಲು ಗ್ರಾಮೀಣ ಪ್ರದೇಶದ ಜನರು ಪರದಾಡಬಾರದು ಎಂಬ ಕಾರಣಕ್ಕೆ ಭಾರತ್‌ ಪೆಟ್ರೋಲಿಯಂ ಕಾಪೋರ್‍ರೇಶನ್‌ ಮೂಲಕ ಇಂತಹ ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿದೆ. ವ್ಯವಸ್ಥೆ ಅಳವಡಿಸಲಾಗಿರುವ ರಾಜ್ಯದ 569 ಬಂಕ್‌ಗಳಲ್ಲಿಹಣ ಪಡೆಯಬಹುದಾಗಿದೆ. ಈ ಸೌಲಭ್ಯ ಒಂದು ವರ್ಷದ ಹಿಂದೆಯೇ ಜಾರಿಗೊಂಡಿದ್ದರೂ ಲಾಕ್‌ ಡೌನ್‌ ಸಂದರ್ಭದಲ್ಲಿಜನರ ಪಾಲಿಗೆ ಆಪದ್ಬಾಂಧವವಾಗಿದೆ.

ಏನಿದು ಎಟಿಎಂ ?

ಫಿನೋ ಬ್ಯಾಂಕ್‌ನ ಸಹಯೋಗದೊಂದಿಗೆ ಬಿಪಿಸಿಎಲ್‌ ತನ್ನ ಆಯ್ದ ಬಂಕ್‌ಗಳಲ್ಲಿಪಿಒಎಸ್‌ ಮಶೀನ್‌ ಒದಗಿಸಿದೆ. ಈ ಮಶೀನ್‌ಗಳಲ್ಲಿಎಟಿಎಂ ಕಾರ್ಡ್‌ ಸ್ವೆತ್ರೖಪ್‌ ಮಾಡುವ ಮೂಲಕ ಜನರು ಹಣ ಪಡೆಯಲು ಸಾಧ್ಯವಿದೆ. ಕಾರ್ಡ್‌ ಸ್ವೆತ್ರೖಪ್‌ ಮಾಡುತ್ತಿದ್ದಂತೆ ಎಟಿಎಂ ವಿತ್‌ಡ್ರಾವಲ್‌ ಎಂಬ ರಸೀದಿ ದೊರೆಯುತ್ತದೆ. ಗ್ರಾಹಕರು ಕಾರ್ಡ್‌ ಮೂಲಕ ಪಡೆಯಬೇಕಾದ ಹಣವನ್ನು ನಗದು ರೂಪದಲ್ಲಿಬಂಕ್‌ ಸಿಬ್ಬಂದಿಯೇ ನೀಡುತ್ತಾರೆ. ಜನರಿಗೆ ನೀಡಿದ ಈ ಹಣವನ್ನು ಬಂಕ್‌ ಡೀಲರ್‌ ಅಕೌಂಟ್‌ಗೆ ಕಂಪನಿಯಿಂದ ಜಮಾ ಮಾಡಲಾಗುತ್ತದೆ.

ಎಲ್ಲಿಸೌಲಭ್ಯ ?

ಎಟಿಎಂಗಳು ದೂರವಿರುವ, ಗ್ರಾಮೀಣ ಪ್ರದೇಶದ ಬಂಕ್‌ಗಳನ್ನು ಗುರುತಿಸಿ ಅಲ್ಲಿಈ ಸೌಲಭ್ಯ ಕಲ್ಪಿಸಲಾಗಿದೆ. ಈವರೆಗೆ ಟ್ರಕ್‌ ಚಾಲಕರೇ ಈ ಸೌಲಭ್ಯವನ್ನು ಹೆಚ್ಚಾಗಿ ಪಡೆಯುತ್ತಿದ್ದರು. ಎಟಿಎಂ ಲಭ್ಯವಿರದ, ಎಟಿಎಂಗಾಗಿ ಹತ್ತಾರು ಕಿ.ಮೀ. ಕ್ರಮಿಸಬೇಕಾದ ಜನರು ಬಂಕ್‌ನಲ್ಲಿಎಟಿಎಂ ಸೌಲಭ್ಯ ಪಡೆಯುತ್ತಿದ್ದಾರೆ.

ರಾಜ್ಯದ ಬಂಕ್‌ಗಳಲ್ಲಿಏ.1 ರಿಂದ 16ರವರೆಗೆ ಅಂದಾಜು 5 ಕೋಟಿ ರೂ. ವಹಿವಾಟು ನಡೆದಿದೆ. ಕಾರ್ಡ್‌ ಇಲ್ಲದಿದ್ದರೆ ಆಧಾರ್‌ ಕಾರ್ಡ್‌ನಿಂದ ಲಿಂಕ್‌ ಆಗಿರುವ ಖಾತೆಯ ಮೂಲಕವೂ ಹಣ ನೀಡಲಾಗುತ್ತದೆ. ಹಣ ವರ್ಗಾವಣೆ, ಹಣದ ಠೇವಣಿ ಸೌಲಭ್ಯವನ್ನ ಒದಗಿಸಲಾಗುತ್ತಿದೆ ಎನ್ನುತ್ತಾರೆ ಕಂಪನಿಯ ಜಿಲ್ಲಾಮಾರಾಟ ಅಧಿಕಾರಿ ವೈಭವ್‌ ವಿಶಾಲ್‌.

ಬಂಕ್‌ ಎಟಿಎಂ ಮೂಲಕ ಹಣ ಪಡೆಯಲು ಗರಿಷ್ಟ ಮೊತ್ತ ಎಂದೇನೂ ನಿಯಮವಿಲ್ಲ, ಗ್ರಾಹಕರು ಹೊಂದಿರುವ ಯಾವುದೇ ಬ್ಯಾಂಕ್‌ನ ಕಾರ್ಡ್‌ನ ಗರಿಷ್ಟ ಮೊತ್ತದಷ್ಟು ಹಣ ಪಡೆಯಬಹುದಾಗಿದೆ. ಈ ಸೌಲಭ್ಯ ಒದಗಿಸಿದ ಬಂಕ್‌ಗಳ ಮಾಲೀಕರಿಗೆ ಕಂಪನಿಯಿಂದ ಕಮಿಷನ್‌ ನೀಡಲಾಗುತ್ತದೆ.


ಪ್ರತಿ ದಿನ ಹಣವನ್ನು ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿ ಪಾವತಿಸುವುದು ರಿಸ್ಕ್‌ ಆಗುತ್ತದೆ. ಈ ಸೌಲಭ್ಯದಿಂದ ನಮ್ಮಲ್ಲಿನ ಹಣವನ್ನು ಗ್ರಾಹಕರಿಗೆ ನೀಡುತ್ತೇವೆ. ನಮಗೆ ಬರಬೇಕಾದ ಹಣ ಅಕೌಂಟ್‌ಗೆ ನೇರವಾಗಿ ಜಮೆಯಾಗುತ್ತದೆ. ನಮ್ಮ ಹಣ ಸುರಕ್ಷಿತವಾಗಿರಲು ಯೋಜನೆ ನೆರವಾಗಿದೆ.
ಕಿರಣ್‌ ಮೆಳ್ಳಿಗೇರಿ, ಬಂಕ್‌ ಮಾಲೀಕ, ಗದ್ದನಕೇರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ