ಆ್ಯಪ್ನಗರ

ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ:ಆರೋಪಿ ಬಂಧನ

ಬಾಗಲಕೋಟೆ : ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು 24 ಗಂಟೆಯೊಳಗೆ ಬಂಧಿಸುವಲ್ಲಿಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಲೋಕೇಶ ಜಗಲಾಸರ್‌ ತಿಳಿಸಿದರು.

Vijaya Karnataka 1 Oct 2019, 5:00 am
ಬಾಗಲಕೋಟೆ : ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು 24 ಗಂಟೆಯೊಳಗೆ ಬಂಧಿಸುವಲ್ಲಿಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಲೋಕೇಶ ಜಗಲಾಸರ್‌ ತಿಳಿಸಿದರು.
Vijaya Karnataka Web attempt to rape a minor arrested
ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ:ಆರೋಪಿ ಬಂಧನ


ನಗರದಲ್ಲಿಸೋಮವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು ಸೆ.28ರಂದು ನಗರದ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ವಿಜಯಪುರ ಜಿಲ್ಲೆಜುಮನಾಳದ ನಿಂಗಪ್ಪ ಮಾದರ (45) ಬಂಧಿತ ವ್ಯಕ್ತಿ. ತನ್ನ ಮನೆ ಸಮೀಪದ ಕಿರಾಣಿ ಅಂಗಡಿಗೆ ಬಾಲಕಿ ತೆರಳಿದಾಗ ಆರೋಪಿ, ನೀವು ಹೊಸ ಮನೆ ನಿರ್ಮಿಸುತ್ತಿದ್ದೀರಿ. ನಿಮ್ಮ ತಂದೆ ಹೂವಿನ ಕುಂಡ ಕೊಡಲು ಹೇಳಿದ್ದಾರೆ. ನಾನು ಕೊಡುತ್ತೇನೆ ಎಂದು ಕರೆದುಕೊಂಡು ಕಬ್ಬಿನ ತೋಟದಲ್ಲಿಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂದರ್ಭದಲ್ಲಿವೃದ್ಧೆಯೊಬ್ಬಳು ಸ್ಥಳಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ವಿವರಿಸಿದರು.

ಈ ಆರೋಪಿ 1997, 1998ರಲ್ಲಿಜಮಖಂಡಿಯಲ್ಲಿಹಾಗೂ 2017ರಲ್ಲಿವಿಜಯಪುರ ಗೋಲಗುಮ್ಮಜ್‌ನಲ್ಲಿಅತ್ಯಾಚಾರ ಎಸಗಿದ್ದ. ನಂತರ 16 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಜಿಲ್ಲೆಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಸ್‌ಪಿ ಎಸ್‌.ಬಿ.ಗಿರೀಶ, ಸಿಪಿಐ ಶ್ರೀಶಳ ಗಾಬಿ, ಪಿಎಸ್‌ಐ ಆರ್‌.ಎಚ್‌.ಹಳ್ಳಿ, ನಿಂಗೊಳ್ಳಿ, ಶ್ರೀಶೈಲ ನಡಗೇರಿ, ಆರ್‌.ಎಂ.ಮನಗೂಳಿ, ಗುರು ಲಮಾಣಿ, ಮುತ್ತ ಅಜಮನಿ, ಪ್ರದೀಪ ಪಾಟೀಲ, ಸುಭಾಷ ಕೊಟಗಿ, ಬಿ.ಎನ್‌.ಗೌಡರ ಅವರನ್ನು ಒಳಗೊಂಡ ತಂಡ ರಚಿಸಿ ಆರೋಪಿ ಬಂಧನಕ್ಕೆ ಜಾಲ ಬೀಸಲಾಗಿತ್ತುಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ