ಆ್ಯಪ್ನಗರ

ನಿಯಮ ಪಾಲಿಸಿ ಅಪಘಾತ ತಪ್ಪಿಸಿ: ಚರಂತಿಮಠ

ಬಾಗಲಕೋಟ: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಒಂದು ಪಿಡುಗಾಗಿ ಮಾರ್ಪಟ್ಟಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

Vijaya Karnataka 5 Feb 2019, 5:00 am
ಬಾಗಲಕೋಟ: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಒಂದು ಪಿಡುಗಾಗಿ ಮಾರ್ಪಟ್ಟಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
Vijaya Karnataka Web avoid rule policy accident charanthimatha
ನಿಯಮ ಪಾಲಿಸಿ ಅಪಘಾತ ತಪ್ಪಿಸಿ: ಚರಂತಿಮಠ


ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಮಿನಿ ಆಡಿಟೋರಿಯಂ ಹಾಲ್‌ನಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಹಮ್ಮಿಕೊಂಡ ರಸ್ತೆ ಸುರಕ್ಷ ತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಪಘಾತ ರಹಿತ ಚಾಲನೆಗೆ ಸಂಚಾರಿ ನಿಯಮ ಹಾಗೂ ತಾಳ್ಮೆ ಜಾಗೃತಿ ಅವಶ್ಯವಾಗಿದ್ದು, ವಾಹನ ಸವಾರರು ಮೊದಲು ಇಚ್ಚಾಶಕ್ತಿ ಪ್ರದರ್ಶಿಸಬೇಕು ಎಂದರು.

ಪ್ರತಿಯೊಬ್ಬರಿಗೂ ಸಾವು ನಿಶ್ಚಿತ. ಬೇಜವಾಬ್ದಾರಿಯಿಂದ, ದೈವದತ್ತವಾಗಿ ಬಂದ ನೂರು ವರ್ಷದ ಆಯುಷನ್ನು ಎಚ್ಚರಿಕೆಯಿಂದ ನಿಭಾಯಿಸಿಕೊಳ್ಳದೇ ಅಪಘಾತದಿಂದ ಅಕಾಲಿಕ ಮರಣ ಹೊಂದುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಸಾರಿಗೆ ಹಾಗೂ ಪೊಲೀಸ್‌ ಇಲಾಖೆ ಜಂಟಿಯಾಗಿ ವಾಹನ ಸವಾರರಿಗೆ ಪರಿಣಾಮಕಾರಿ ಮಾಹಿತಿ ನೀಡುವುದರೊಂದಿಗೆ ರಸ್ತೆ ಸುರಕ್ಷ ತೆ ಬಗ್ಗೆ ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದರು.

ರಸ್ತೆ ಸುರಕ್ಷ ತಾ ಸಪ್ತಾಹ ಕೇವಲ ಪಟ್ಟಣ ಪ್ರದೇಶ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮೀಸಲಾಗಿರದೇ ಗ್ರಾಮೀಣ ಮಟ್ಟದಲ್ಲೂ ಸಹ ಇಂತಹ ಸಪ್ತಾಹಗಳು ಪರಿಣಾಕಾರಿಯಾಗುವಂತೆ ಮಾಡಬೇಕು. ಗ್ರಾಮೀಣ ವಾಹನ ಸವಾರರಿಗೆ ಸೂಕ್ತ ಜಾಗೃತಿ ಮೂಡಿಸಿ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಕಲು ಪ್ರತಿಯನ್ನಾದರೂ ತೋರಿಸುವ ವ್ಯವಸ್ಥೆಯಾಗಬೇಕೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿಸಿ ಆರ್‌.ರಾಮಚಂದ್ರನ್‌ ಮಾತನಾಡಿದರು.

ಎಸ್ಪಿ ಸಿ.ಬಿ.ರಿಷ್ಯಂತ ಮಾತನಾಡಿ, ಕೆಲ ಯುವ ದ್ವಿಚಕ್ರ ಚಾಲಕರು ತಮ್ಮ ತಲೆ ಕೂದಲಿನ ವಿನ್ಯಾಸ ಕೆಡುತ್ತದೆ ಎಂಬ ಕ್ಷ ುಲ್ಲಕ ಕಾರಣ ಒಡ್ಡಿ ಅಪಘಾತಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸವಾರಿ ಮಾಡುವ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತ ವೇಗವಾಗಿ ಸವಾರಿ ಮಾಡುವವರನ್ನು ಕಂಡಾಗ ಜನರೇ ತಿರ್ಮಾನಿಸಿ ಇತನಿಗೆ ಅಪಘಾತವಾಗುವ ಸಂಭವವಿದೆ ಎಂಬ ಅರಿವು ಸವಾರನಿಗೂ ಕೂಡಾ ಅವಶ್ಯವಾಗಿದೆ. ಸವಾರರು ರಸ್ತೆ ಸಂಚಾರ ನಿಯಮ ಪಾಲಿಸುವದರ ಜೊತೆಗೆ ರಕ್ಷ ಣಾ ಪರಿಕರ ಬಳಸಿ ಸುರಕ್ಷಿತ ಸವಾರಿ ಮಾಡಬೇಕೆಂದು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತ್ವಾಡಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಫೆ. 10ರ ವರೆಗೆ ಸುರಕ್ಷತಾ ಸಪ್ತಾಹದ ನಿಮಿತ್ತ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು. ಹಿರಿಯ ಮೋಟಾರು ನಿರೀಕ್ಷ ಕ ಬಿ.ಡಿ.ಹತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ಜಾಗೃತಿ ಜಾಥಾಕ್ಕೆ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು. ಜಾಥಾ ಬಿವಿವ ಸಂಘದ ಆವರಣದಿಂದ ಪ್ರಾರಂಭವಾಗಿ ಬಸವೇಶ್ವರ ಸರ್ಕಲ್‌, ಪೊಲೀಸ್‌ ಚೌಕ್‌ ಮಾರ್ಗವಾಗಿ ನಂತರ ಬಿವಿವ ಸಂಘದ ಆವರಣಕ್ಕೆ ಮುಕ್ತಾಯವಾಯಿತು. ಜಾಥಾದಲ್ಲಿ ಎನ್‌ಸಿಸಿ ಕೆಡೆಟ್‌ಗಳು ಘೋಷಣೆಗಳ ಫಲಕಗಳನ್ನು ಹಿಡಿದುಕೊಂಡು ಜಾಗೃತಿ ಸಂದೇಶಗಳನ್ನು ಕೂಗಿದರು.

ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್‌ ಬಳಕೆ ಕಡ್ಡಾಯವಾಗಿದ್ದು, ವಾಹನ ಸವಾರರ ಜತೆ ಹಿಂದೆ ಕುಳಿತವರಿಗೂ ಹೆಲ್ಮೆಟ್‌ ಕಡ್ಡಾಯವಾಗಿದೆ. ಹೆಲ್ಮೆಟ್‌ ಬಳಸುವುದನ್ನು ರೂಢಿಸಿಕೊಳ್ಳಬೇಕು. ಮನೆಯವರು ಹಿಂದುಗಡೆ ಸವಾರಿ ಮಾಡುವಾಗ ಚಾಲಕನಷ್ಟೇ ತಮಗೂ ಸುರಕ್ಷ ತೆ ಅವಶ್ಯವಾಗಿದೆ ಎನ್ನುವುದನ್ನು ಅರಿತುಕೊಳ್ಳಬೇಕು. ಪ್ರತಿಯೊಬ್ಬರು ನಿಯಮ ಪಾಲಿಸಬೇಕು.
ಆರ್‌.ರಾಮಚಂದ್ರನ್‌, ಡಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ