ಆ್ಯಪ್ನಗರ

ಅಯೋಧ್ಯೆಯಲ್ಲಿ ರಾಮಮಂದಿರ ಬಾಗಲಕೋಟದಲ್ಲಿ ಜನಾಗ್ರಹ ಸಭೆ

ಬಾಗಲಕೋಟ: ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣವಾಗಬೇಕು ಎಂಬುದು ಹಿಂದುಗಳ ಆಗ್ರಹ. ಒಂದು ವೇಳೆ ಹಿಂದು ಭಾವನೆಗೆæ ಮೌಲ್ಯ ದೊರೆಯದಿದ್ದರೆ ಸರಕಾರ ಹಾಗೂ ರಾಜಕೀಯ ವ್ಯಕ್ತಿಗಳ ಮೇಲೆ ಕೆಟ್ಟ ಪರಿಣಾಮವಾಗುತ್ತದೆ ಎಂದು ವಿಶ್ವ ಹಿಂದು ಪರಿಷತ್‌ ಜಿಲ್ಲಾಧ್ಯಕ್ಷ ಸಂಗಣ್ಣ ಕುಪ್ಪಸ್ತ ತಿಳಿಸಿದರು.

Vijaya Karnataka 28 Nov 2018, 5:00 am
ಬಾಗಲಕೋಟ: ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣವಾಗಬೇಕು ಎಂಬುದು ಹಿಂದುಗಳ ಆಗ್ರಹ. ಒಂದು ವೇಳೆ ಹಿಂದು ಭಾವನೆಗೆæ ಮೌಲ್ಯ ದೊರೆಯದಿದ್ದರೆ ಸರಕಾರ ಹಾಗೂ ರಾಜಕೀಯ ವ್ಯಕ್ತಿಗಳ ಮೇಲೆ ಕೆಟ್ಟ ಪರಿಣಾಮವಾಗುತ್ತದೆ ಎಂದು ವಿಶ್ವ ಹಿಂದು ಪರಿಷತ್‌ ಜಿಲ್ಲಾಧ್ಯಕ್ಷ ಸಂಗಣ್ಣ ಕುಪ್ಪಸ್ತ ತಿಳಿಸಿದರು.
Vijaya Karnataka Web ayodhya rammandir meeting in the bagalkot
ಅಯೋಧ್ಯೆಯಲ್ಲಿ ರಾಮಮಂದಿರ ಬಾಗಲಕೋಟದಲ್ಲಿ ಜನಾಗ್ರಹ ಸಭೆ


ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಭವ್ಯಮಂದಿರ ನಿರ್ಮಾಣಕ್ಕಾಗಿ ವಿಎಚ್‌ಪಿ ಹಮ್ಮಿಕೊಂಡ ಜನಾಗ್ರಹ ಸಭೆ ಕುರಿತು ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 2017ರ ಜೂನ್‌ನಲ್ಲಿ ವಿವಾದದ ಕುರಿತು ಸರ್ವೋಚ್ಛ ನ್ಯಾಯಾಲಯ ಅಂತಿಮ ವಿಚಾರಣೆ ಪ್ರಾರಂಭಿಸುತ್ತಿದ್ದಂತೆ ವಕೀಲರಾದ ಕಪಿಲ್‌ಸಿಬಾಲ್‌ ಅವರು ವಿಚಾರಣೆಯನ್ನು 2019ರ ಲೋಕಸಭೆ ಚುನಾವಣೆ ನಂತರ ಕೈಗೆತ್ತಿಕೊಳ್ಳಲು ವಿನಂತಿಸಿದರು. ಅಕ್ಟೋಬರ್‌ಗೆ ಇದ್ದ ವಿಚಾರಣೆ ಸದ್ಯ 2019ರ ಜನೆವರಿಗೆ ಮುಂದೂಡಲಾಗಿದೆ. ಹೀಗಾಗಿ ರಾಮ ಮಂದಿರ-ಬಾಬರಿ ಮಸೀದಿ ವಿವಾದಕ್ಕೆ ಕೋರ್ಟ್‌ನಲ್ಲಿ ಪರಿಹಾರ ಶೀಘ್ರ ದೊರೆಯುವಂತೆ ಕಾಣುತ್ತಿಲ್ಲ. ಮತ್ತೊಂದೆಡೆ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಅರ್ಜಿ ಹಾಕಿದ ಮುಸ್ಲಿಂ ಸಮಾಜದವರೂ ಮಾತುಕತೆಗೆ ಸಿದ್ಧ್ದರಿದ್ದೇವೆ ಎಂದು ತಿಳಿಸಿದ್ದಾರೆ. ವಿವಾದಕ್ಕೆ ಜನಾಗ್ರಹವೇ ಅನಿವಾರ್ಯವೆಂದು ವಿಶ್ವ ಹಿಂದು ಪರಿಷತ್‌ ದೇಶಾದ್ಯಂತ ಜನಾಗ್ರಹ ಸಭೆ ಆಯೋಜಿಸಿದೆ ಎಂದರು.

ಸ್ವಾಭಿಮಾನದ ಸಂಕೇತ:

ಕಳೆದ 26 ವರ್ಷದಿಂದ ತಾಳ್ಮೆ ವಹಿಸಿದ್ದೇವೆ. ಅಯೋಧ್ಯೆಯಲ್ಲಿ ರಾಮನ ಪೂಜೆಗೆ ಇಂದಿಗೂ ತಾತ್ಕಾಲಿಕ ವ್ಯವಸ್ಥೆ ಇದೆಯೇ ಹೊರತು ಶಾಶ್ವತ ವ್ಯವಸ್ಥೆ ಇಲ್ಲದಂತಾಗಿದೆ. ಮುಂಬರುವ ಲೋಕಸಭೆ ಚುನಾವಣೆಗಾಗಿ ವಿಶ್ವ ಹಿಂದು ಪರಿಷತ್‌ ಈ ಆಂದೋಲನ ನಡೆಸುತ್ತಿಲ್ಲ. 2018ರಲ್ಲೇ ಕೋರ್ಟ್‌ ನಿರ್ಣಯ ಕೈಗೊಳ್ಳಬಹುದೆಂಬ ನಿರೀಕ್ಷೆ ಇತ್ತು. ಸದ್ಯ ಮತ್ತಷ್ಟು ವಿಳಂಬವಾಗುತ್ತಿರುವುದರಿಂದ ಹಿಂದು ಭಾವನೆಗಳನ್ನು ಕೆಣಕುವ ಪ್ರಸಂಗ ಮರುಕಳಿಸಬಾರದು. ಮಂದಿರ ನಿರ್ಮಾಣಕ್ಕಿರುವ ಅಡೆತಡೆಗಳನ್ನು ಸಂಸತ್ತಿನಲ್ಲಿ ಮಸೂದೆ ಮೂಲಕ ನಿವಾರಿಸಬೇಕು. ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಾನದಲ್ಲಿ ಭವ್ಯ ಶ್ರೀರಾಮನ ಮಂದಿರ ನಿರ್ಮಾಣ ಕೋಟ್ಯಂತರ ಹಿಂದುಗಳ ಶ್ರದ್ಧೆ, ನಂಬಿಕೆ, ಮಹಾದಾಸೆ, ಹೆಮ್ಮೆ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ. ಒಂದು ವೇಳೆ ಹಿಂದು ಭಾವನೆಗೆ ಮೌಲ್ಯ ದೊರೆಯದಿದ್ದರೆ ಸರಕಾರ ಕೆಟ್ಟ ಪರಿಣಾಮ ಎದುರಿಸುತ್ತದೆ. ಮನೆಮನೆಗೆ ಹೋಗಿ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ. ಹಿಂದುಗಳ ಭಾವನೆಗೆ ಧಕ್ಕೆ ಆದರೆ ಹಿಂದುಗಳೇ ಪಾಠ ಕಲಿಸುತ್ತಾರೆ ಎಂದರು.

30ಕ್ಕೆ ಬೈಕ್‌ ರಾರ‍ಯಲಿ:

ಡಿ.2ರಂದು ನಡೆಯಲಿರುವ ಜನಾಗ್ರಹ ಸಭೆ ಕುರಿತು ಮಾಹಿತಿ ನೀಡಿದ ವಿಎಚ್‌ಪಿ ಮುಖಂಡ ಶಿವಕುಮಾರ ಮೇಲ್ನಾಡ್‌, ಸಭೆಯ ಮುಂಚಿತವಾಗಿ ನ.30ರಂದು ನಗರದಲ್ಲಿ ಬೈಕ್‌ ರಾರ‍ಯಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10.30ಕ್ಕೆ ಬೀಳೂರು ಅಜ್ಜನವರ ದೇವಸ್ಥಾನದಿಂದ ಪ್ರಾರಂಭವಾಗುವ ಬೈಕ್‌ ರಾರ‍ಯಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಟಂಟಂ ಚಾಲಕರೂ ಸಹ ಸಾಥ್‌ ನೀಡಲಿದ್ದಾರೆ. ಡಿ.2ರಂದು ಮಧ್ಯಾಹ್ನ 3.45ಕ್ಕೆ ಭವ್ಯಶೋಭಾಯಾತ್ರೆ ಜರುಗಲಿದ್ದು ವೆಂಕಟಪೇಟೆಯ ವೆಂಕಟೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಬಸವೇಶ್ವರ ಕಾಲೇಜ್‌ ಮೈದಾನದವರೆಗೆ ಸಾಗಲಿದೆ.

ಸಂಜೆ ಜನಾಗ್ರಹ ಸಭೆ

ಸಂಜೆ 5.15ಕ್ಕೆ ಬಸವೇಶ್ವರ ಕಾಲೇಜ್‌ ಮೈದಾನದಲ್ಲಿ ಜರುಗುವ ಜನಾಗ್ರಹ ಸಭೆಯಲ್ಲಿ ಶ್ರೀಮದ್‌ ವೀರಶೈವ ಶಿವಯೋಗಮಂದಿರ ಸಂಸ್ಥೆಯ ಡಾ.ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು ಜಿಲ್ಲೆಯ ನಾನಾ ಮಠಾಧೀಶರು ಭಾಗವಹಿಸಲಿದ್ದಾರೆ. ನಿವೃತ್ತ ಪೊಲೀಸ್‌ ಅಧಿಕಾರಿ ಶಂಕರ ಬಿದರಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ವಕ್ತಾರರಾಗಿ ವಿಎಚ್‌ಪಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಆಗಮಿಸಲಿದ್ದಾರೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ರಾಮಮಂದಿರ ನಿರ್ಮಾಣದ ಕುರಿತಂತೆ ಸಂಸತ್‌ ಸದಸ್ಯರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮಲ್ಲೇಶಪ್ಪ ಜಿಗಜಿನ್ನಿ, ಜಯಪ್ರಕಾಶ ಬೆಂಡಿಗೇರಿ, ಪುಂಡಲೀಕ ದಳವಾಯಿ, ಅಶೋಕ ಲಿಂಬಾವಳಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ