ಆ್ಯಪ್ನಗರ

ಬಾಗಲಕೋಟೆ: ನ್ಯಾಯಕ್ಕಾಗಿ 4 ತಿಂಗಳ ಹಸುಳೆಯೊಂದಿಗೆ ಪತ್ನಿಯ ಪಾದಯಾತ್ರೆ

ಪತಿಯ ಜೀವಭಯವಿದೆ. ನನಗೆ ರಕ್ಷಣೆ ಬೇಕಿದೆ ಎಂದು ಬಾದಾಮಿ ತಾಲೂಕಿನ ತಮನಾಳ ಗ್ರಾಮದ ಹೆಣ್ಣು ಮಗಳೊಬ್ಬಳು ತನ್ನ 4 ತಿಂಗಳ ಹಸುಗೂಸನ್ನು ಎತ್ತಿಕೊಂಡು ನ್ಯಾಯಕ್ಕಾಗಿ ಪಾದಯಾತ್ರೆ ಕೈಗೊಂಡಿದ್ದಾಳೆ.

Vijaya Karnataka Web 7 May 2020, 12:28 pm
ಬಾಗಲಕೋಟೆ: ಪತಿಯ ಜೀವಭಯದಿಂದ 4 ತಿಂಗಳ ಹಸುಗೂಸಿನೊಂದಿಗೆ ಗೃಹಿಣಿ ಒಬ್ಬಳು ನ್ಯಾಯಕ್ಕಾಗಿ ಪಾದಯಾತ್ರೆ ಹೊರಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ತಮನಾಳ ಗ್ರಾಮದಲ್ಲಿ ನಡೆದಿದೆ.
Vijaya Karnataka Web bagalkot


ತಮನಾಳ ಗ್ರಾಮದಿಂದ ಬಾದಾಮಿ ಪೋಲಿಸ್ ಠಾಣೆಯವರೆಗೆ ತನ್ನ 4 ತಿಂಗಳ ಹಸುಗೂಸನ್ನು ಕಂಕುಳಲ್ಲಿ ಹೊತ್ತುಕೊಂಡು ಉರಿ ಬಿಸಿಲಲ್ಲೂ 15 ಕಿಮೀ ಪಾದಯಾತ್ರೆ ಹೊರಟಿರುವ ಈಕೆಯ ಹೆಸರು ಅಶ್ವಿನಿ.

ಕಳೆದ 7 ವರ್ಷದ ಹಿಂದೆ ಅಶ್ವಿನಿ ಮತ್ತು ದೇವರಾಜ್ ಪ್ರೀತಿಸಿ ಅಂತಜಾ೯ತಿ ವಿವಾಹವಾಗಿದ್ದರು. ಆದರೆ ಪತಿ ದೇವರಾಜ್ ಹೇಳದೆ ಕೇಳದೆ ಎರಡನೇ ಮದುವೆಯಾಗಿದ್ದ. ಹೀಗಾಗಿ ಪತಿಯ ವಿರುದ್ಧ ಬಾದಾಮಿಯ ಎಸ್.ಪಿ ಕಚೇರಿಗೆ ತೆರಳಿ ಅಶ್ವಿನಿ ದೂರು ಸಲ್ಲಿಸಿದ್ದಳು.

ಬಾಗಲಕೋಟೆಯಲ್ಲಿ ಕೊರೊನಾ ರೌದ್ರಾವತಾರ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸಿದ್ದರಾಮಯ್ಯ

ಆದರೆ. ಇದೀಗ ಪತಿ ಬೇಲ್ ಮೇಲೆ ಹೊರ ಬಂದಿದ್ದಾನೆ. ಇದರಿಂದ ಅಶ್ವಿನಿ ಭಯಗೊಂಡಿದ್ದು, ಮಕ್ಕಳಿಗೆ ಮತ್ತು ತನಗೆ ಜೀವ ಬೆದರಿಕೆ ಇದೆ. ನನಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿ ತಮನಾಳದಿಂದ ಬಾದಾಮಿವರೆಗೆ ಪಾದಯಾತ್ರೆ ಕೈಗೊಂಡಿದ್ದು ನ್ಯಾಯಕ್ಕಾಗಿ ಗೋಗರೆಯಿತ್ತಿದ್ದಾಳೆ ಹೆಣ್ಣು ಮಗಳು. ಲಾಕ್ ಡೌನ್ ಸಮಯವಾದುದರಿಂದ ವಾಹನ ಸೌಕರ್ಯವಿಲ್ಲದೆ ಪಾದಯಾತ್ರೆ ಕೈಗೊಂಡಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ