ಆ್ಯಪ್ನಗರ

ಸಂಬಂಧಿ ಅಂತ್ಯಕ್ರಿಯೆಗೂ ಹೋಗದೆ ನೆರೆ ಸಂತಸ್ತರ ಸೇವೆಯಲ್ಲಿ ನಿರತರಾದ ಮಹಿಳಾ ಪಿಡಿಒ

ಸಂಬಂಧಿಯೊಬ್ಬರ ಅಂತ್ಯಕ್ರಿಯೆಯಲ್ಲೂ ಭಾಗವಹಿಸದೆ ಪ್ರವಾಹ ಪರಿಹಾರ ಕಾರ್ಯದಲ್ಲಿ ನಿರತರಾಗುವ ಮೂಲಕ ಬಾಗಲಕೋಟ ಜಿಲ್ಲೆಯ ಮಹಿಳಾ ಪಿಡಿಒವೊಬ್ಬರು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

Vijaya Karnataka 17 Aug 2019, 9:34 am
ಕಲಾದಗಿ: ಮನೆಯಲ್ಲಿ ಹತ್ತಿರದ ಸಂಬಂಧದ ಹಿರಿಯರೊಬ್ಬರು ತೀರಿಕೊಂಡರು ಅವರ ಅಂತ್ಯಕ್ರಿಯೆಗೆ ಹೋಗದೆ ಇಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಾಕ್ಷಾಯಿಣಿ ಬಿ.ಹಿರೇಮಠ ನೆರೆ ಸಂತ್ರಸ್ತರ ರಕ್ಷ ಣೆಯ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
Vijaya Karnataka Web ಸಂಬಂಧಿ ಅಂತ್ಯಕ್ರಿಯೆಗೂ ಹೋಗದೆ ನೆರೆ ಸಂತಸ್ತರ ಸೇವೆಯಲ್ಲಿ ನಿರತರಾದ ಮಹಿಳಾ ಪಿಡಿಒ


ಘಟಪ್ರಭೆ ಆರ್ಭಟಿಸುತ್ತಾ ಊರನ್ನು ಅವಸರದಿಂದ ಆಕ್ರಮಿಸುತ್ತಿದ್ದ ವೇಳೆಯಲ್ಲಿ ಗುರುವಾರ ಸಂಜೆ ಪರಿಹಾರದ ಕಾರ್ಯದ ಚಿಂತನೆಯಲ್ಲಿದ್ದಾಗ ಪಿಡಿಒ ದಾಕ್ಷಾಯಿಣಿ ಹಿರೇಮಠ ಅವರಿಗೆ ತಮ್ಮ ಪತಿಯ ಅಜ್ಜಿ ಅಡವೆಮ್ಮಾ ಮುದ್ದೇಬಿಹಾಳ ಬಳಿಯ ಚಲಮಿಯಲ್ಲಿ ತೀರಿಕೊಂಡ ಬಗ್ಗೆ ಮಾಹಿತಿ ಬಂದಿತಾದರೂ ಅವರಿಗೆ ಅಲ್ಲಿಗೆ ಹೋಗದೆ ಒಪ್ಪಿಸಿದ ಜವಾಬ್ದಾರಿಯನ್ನು ನಿಭಾಯಿಸಲು ಗ್ರಾಮದಲ್ಲಿಯೆ ಉಳಿದು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಅಜ್ಜನ ಅಂತ್ಯಕ್ರಿಯೆಗೂ ತೆರಳದೆ ನೆರೆ ಪರಿಹಾರ ಕಾರ್ಯದಲ್ಲಿ ನಿರತರಾದ ವಿಜಯಪುರ ಜಿಲ್ಲಾಧಿಕಾರಿ

ಗುರುವಾರ ಸಂಜೆಯಿಂದ ಇಂದಿನವರೆಗೂ ಇನ್ನಿತರ ಅಧಿಕಾರಿಗಳ, ಸಿಬ್ಬಂದಿಯ ಸಮನ್ವಯದಲ್ಲಿ ನೆರೆ ಸಂತ್ರಸ್ತರ ರಕ್ಷ ಣೆಯಲ್ಲಿ ನಿರತರಾಗಿರುವ ಅವರಿಗೆ ಅವರ ಮನೆಯವರನ್ನು ಈವರೆಗೂ ಮಾತನಾಡಿಸಲು ಹೋಗಿಲ್ಲ.

''ಏನ್‌ ಮಾಡಲಿಕ್ಕಾಗುವುದಿಲ್ಲಾ, ನಾವೆಲ್ಲಾ ಸಾರ್ವಜನಿಕರ ಸೇವೆಯಲ್ಲಿರೋರು. ಬಹಳ ಸಲ ನಮ್ಮೆಲ್ಲಾ ವೈಯಕ್ತಿಕ ಹಿತಾಸಕ್ತಿ, ಕೆಲಸಗಳನ್ನ ಬಿಟ್ಟು ಜನರ ಸೇವೆಗೆ ನಿಲ್ಲಬೇಕಾಗುತ್ತದೆ.
ದಾಕ್ಷಾಯಿಣಿ ಹಿರೇಮಠ, ಪಿಡಿಒ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ