ಆ್ಯಪ್ನಗರ

ಬಾಗಲಕೋಟೆ: ಪುರಸಭೆ ಸದಸ್ಯೆಗೆ ಗರ್ಭಪಾತ; ಸಿಎಂಗೆ ಕಣ್ಣು, ಬಾಯಿ ಇಲ್ಲದಂತಾಗಿದೆ ಎಂದು ಉಮಾಶ್ರೀ ಕಿಡಿ

ಮಹಾಲಿಂಗಪುರ ಪುರಸಭೆ ಸದಸ್ಯೆ ಚಾಂದಿನಿ ನಾಯಕ್‌ ಅವರಿಗೆ ಗರ್ಭಪಾತವಾಗಿರುವ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ಕಿಡಿಕಾರಿದ್ದಾರೆ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ನ.9 ರಂದು ಮಹಾಲಿಂಗಪುರದಲ್ಲಿ ಚುನಾವಣೆ ನಡೆದಾಗ ಮೂವರು ಬಿಜೆಪಿ ಮಹಿಳಾ ಸದಸ್ಯರನ್ನು ತಳ್ಳಲಾಗಿತ್ತು. ಈ ಪೈಕಿ ಚಾಂದಿನಿ ನಾಯಕ್‌ ಕೂಡ ಇದ್ದರು.

Vijaya Karnataka Web 1 Dec 2020, 7:58 am
ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರದಲ್ಲಿ ಪುರಸಭೆ ಚುನಾವಣೆ ವೇಳೆ ತಳ್ಳಾಟಕೊಳಗಾಗಿದ್ದ ಸದಸ್ಯೆ ಚಾಂದಿನಿ ನಾಯಕ್‌ ಅವರಿಗೆ ಗರ್ಭಪಾತವಾಗಿದ್ದು ಈ ಹಿನ್ನೆಲೆ ರಾಜ್ಯ ಸರಕಾರದ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ಸಿಎಂಗೆ ಕಿವಿ, ಕಣ್ಣೂ, ಬಾಯಿಯೂ ಇಲ್ಲದಂತಾಗಿದೆ ಎಂದಿರುವ ಅವರು, ಗರ್ಭಪಾತ ಆಗಿರೋದು ಕೊಲೆಗೆ ಸಮಾನವಾಗಿದೆ.
Vijaya Karnataka Web umashree


ಆದರೆ ಸರ್ಕಾರ ಮಾತ್ರ ಏನು ಕ್ರಮ ಕೈ ಗೊಳ್ಳುತ್ತಿಲ್ಲ. ಈ ಘಟನೆಯಲ್ಲಿ ಇದ್ದ ನೀಚ ಶಾಸಕರನ್ನು ಸರ್ಕಾರ ಪಕ್ಷದಿಂದ ಹೊರಗಿಡಬೇಕು. ಸರ್ಕಾರ ಅಪರಾಧಿಗಳನ್ನ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಏನಿದು ಘಟನೆ?
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ನ.9 ರಂದು ಮಹಾಲಿಂಗಪುರದಲ್ಲಿ ಚುನಾವಣೆ ನಡೆದಾಗ ಮೂವರು ಬಿಜೆಪಿ ಮಹಿಳಾ ಸದಸ್ಯರನ್ನು ತಳ್ಳಲಾಗಿತ್ತು. ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದರಿಂದ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಕಾರ್ಯಕರ್ತರು ಸದಸ್ಯೆಯರನ್ನು ಸಭೆಗೆ ಬಾರದಂತೆ ತಡೆಯಲು ತಳ್ಳಾಡಿದ್ದರು.

ಶಾಸಕ ಸಿದ್ದು ಸವದಿ ಎಳೆದಾಡಿದ್ದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್‌ಗೆ ಗರ್ಭಪಾತ

ತಳ್ಳಾಟದಿಂದಾಗಿ ಮೂರು ತಿಂಗಳ ಗರ್ಭಿಣಿ ಚಾಂದಿನಿ ನಾಯಕ್‌ ಆರೋಗ್ಯ ಏರುಪೇರಾಗಿತ್ತು. ಅವರು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ಕು ದಿನಗಳ ಹಿಂದೆ ಚಾಂದಿನಿಯವರಿಗೆ ಗರ್ಭಪಾತವಾಗಿದೆ. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾಂದಿನಿ ಪತಿ ನಾಗೇಶ್‌ ''ಮತ ನೀಡಲು ತೆರಳುವಾಗ ಶಾಸಕರು ಹಾಗೂ ಬೆಂಬಲಿಗರು ತಡೆಯೊಡ್ಡಿ ತಳ್ಳಾಡಿ ಬೀಳಿಸಿದ್ದರು. ಈಗ ಗರ್ಭಪಾತವಾಗಿದೆ, ಕಾನೂನಾತ್ಮಕ ಹೋರಾಟವನ್ನೂ ಮಾಡುತ್ತೇವೆ' ಎಂದಿದ್ದಾರೆ. ಚಾಂದಿನಿ ಮನೆಗೆ ಭೇಟಿ ನೀಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಕ್ಷಿತಾ ಈಟಿ ಆರೋಗ್ಯ ವಿಚಾರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ