ಆ್ಯಪ್ನಗರ

ಬೇಕರಿ ನಮಗೂ ಬೇಕ್‌ ರೀ..!

ಲಾಕ್‌ಡೌನ್‌ನಿಂದಾಗಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಬ್ರೆಡ್‌ ಸಿಗುತ್ತಿಲ್ಲ, ಕೇಕ್‌ ಸದ್ಯಕ್ಕೆ ಕನಸಿನ ಮಾತು.

Vijaya Karnataka Web 24 Apr 2020, 5:00 am
ರವಿರಾಜ್‌ ಆರ್‌.ಗಲಗಲಿ ಬಾಗಲಕೋಟೆ : ಲಾಕ್‌ಡೌನ್‌ನಿಂದಾಗಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಬ್ರೆಡ್‌ ಸಿಗುತ್ತಿಲ್ಲ, ಕೇಕ್‌ ಸದ್ಯಕ್ಕೆ ಕನಸಿನ ಮಾತು.
Vijaya Karnataka Web BAKERY-BGK-23-2_41


ಬಿಸಿ ಬಿಸಿ ಖಾದ್ಯಗಳಿಂದ ಜನರ ಮನ ಸೆಳೆಯುತ್ತಿದ್ದ ಬೇಕರಿಗಳು, ಕೇಕ್‌ ಶಾಪ್‌ಗಳು ಜಿಲ್ಲೆಯಲ್ಲಿಬಾಗಿಲು ಮುಚ್ಚಿವೆ. ರಾಜ್ಯದ ಇತರೆಡೆ ಬೇಕರಿಗಳ ಬಾಗಿಲು ತೆರೆಯಲು ಸರಕಾರ ಹಸಿರು ನಿಶಾನೆ ನೀಡಿದೆ. ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿರುವ ಕೋಟೆ ನಾಡಿನಲ್ಲಿಬೇಕರಿಗಳು ಬಂದ್‌ ಇವೆ.

ಸಂಕಷ್ಟ ಸ್ಥಿತಿ:
ಕಳೆದ ಒಂದು ತಿಂಗಳಿನಿಂದ ಬೇಕರಿ ಉದ್ಯಮ ಸಂಪೂರ್ಣ ಸ್ಥಗಿತಗೊಂಡಿದೆ. ಜಿಲ್ಲೆಯ ಅಂದಾಜು 250 ಬೇಕರಿಗಳಲ್ಲಿಖಾದ್ಯ ಪದಾರ್ಥಗಳು ತಯಾರಾಗುತ್ತಿಲ್ಲ. ಬಂದ್‌ನಂತಹ ಸಂದಿಗ್ಧ ಸ್ಥಿತಿಯಲ್ಲಿಅವಿವಾಹಿತರು, ರೂಂಗಳಲ್ಲಿರುವವರಿಗೆ ಊಟ ದೊರೆಯಲಿಲ್ಲವೆಂದರೂ ಬೇಕರಿಯಲ್ಲಿಪಫ್‌, ಬ್ರೆಡ್‌, ಕೇಕ್‌ನಂತಹ ಹೊಟ್ಟೆ ತುಂಬಿಸುವ ಖಾದ್ಯಗಳು ಲಭ್ಯವಾಗುತ್ತಿದ್ದವು. ಬೇಕರಿಗಳಲ್ಲಿಜನಸಂದಣಿ ಹೆಚ್ಚಾಗುವುದರಿಂದ ಸರಕಾರ ಹಾಟ್‌ ಸ್ಪಾಟ್‌ಗಳಲ್ಲಿಬೇಕರಿ ಆರಂಭಕ್ಕೆ ಅವಕಾಶ ನೀಡಿಲ್ಲ.

ಲಾಕ್‌ ಡೌನ್‌ ನಂತರ ಬೇಕರಿಯಲ್ಲಿಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರು ಕೂಡ ಲಾಕ್‌ ಆಗಿದ್ದಾರೆ. ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ಕುಶಲ ಕಾರ್ಮಿಕರು ಈಗ ರೂಂಗಳಲ್ಲೇ ಇದ್ದಾರೆ. ಬಹುತೇಕ ಕಡೆ ಮಾಲೀಕರೇ ಊಟ, ವಸತಿ ವ್ಯವಸ್ಥೆ ಒದಗಿಸಿದ್ದಾರೆ. ಸಂಬಳವನ್ನೂ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿಕಾಂಡಿಮೆಂಟ್‌ ಶಾಪ್‌ ಮಾದರಿಯ ಅಂಗಡಿಗಳಿಗೆ ಸರಕಾರ ಬಾಗಿಲು ತೆರೆಯಲು ಅನುಮತಿ ನೀಡಿದೆ. ಆದರೆ ಜಿಲ್ಲೆಯಲ್ಲಿಈ ಮಾದರಿಯ ಶಾಪ್‌ಗಳು ಇಲ್ಲದ ಕಾರಣ ಬ್ರೆಡ್‌, ಬನ್‌ ಸೇರಿದಂತೆ ಬೇಕರಿ ಪದಾರ್ಥ ಮಾರಾಟಕ್ಕೆ ಅವಕಾಶವಿಲ್ಲ.

ಅಪಾರ ಹಾನಿ:
'ಅಂದಾಜು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುವ ಬೇಕರಿ ಉದ್ಯಮಕ್ಕೆ 1 ಕೋಟಿ ರೂ.ಗಿಂತ ಹೆಚ್ಚಿನ ಹಾನಿಯಾಗಿದೆ. ಕೆಲಸವಿಲ್ಲದೇ ಖಾಲಿ ಕೂಡುವುದು ಬೇಸರ ಮೂಡಿಸಿದೆ. ಮತ್ತೆ ಮೊದಲಿನಂತೆ ಅಂಗಡಿಗಳು ಆರಂಭಗೊಂಡರೆ ದಿನವಿಡಿ ಕೆಲಸ ಮಾಡಬಹುದು' ಎನ್ನುವುದು ಕಾರ್ಮಿಕರೊಬ್ಬರ ಅಭಿಪ್ರಾಯ.

ಜಿಲ್ಲಾಡಳಿತ ಒಂದು ಬಾರಿ ನಿರ್ಬಂಧ ರದ್ದುಪಡಿಸಲು ಮುಂದಾಗಿದ್ದರೂ ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಬೇಕರಿ ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿಯಿತು. ಲಾಕ್‌ಡೌನ್‌ಗಿಂತ ಮೊದಲು ಬೇಕರಿ ಪದಾರ್ಥಗಳ ಸಿದ್ಧತೆಗಾಗಿ ಸಂಗ್ರಹಿಸಿಡಲಾಗಿದ್ದ ಮೈದಾ ಸೇರಿದಂತೆ ಕಚ್ಚಾ ವಸ್ತುಗಳೂ ಅವಧಿ ಮುಗಿದು ಹಾಳಾಗುತ್ತಿವೆ. ಜಿಲ್ಲೆಯಲ್ಲಿಕೊರೊನಾ ಪ್ರಸರಣ ಕಡಿಮೆಯಾಗುತ್ತಿರುವುದರಿಂದ ಬೇಕರಿ ಆರಂಭಕ್ಕೆ ಗ್ರೀನ್‌ ಸಿಗ್ನಲ್‌ ದೊರೆಯಬಹುದು ಎಂಬ ಭಾವನೆಯಲ್ಲಿಬೇಕರಿ ಮಾಲೀಕರು ಜಿಲ್ಲಾಡಳಿತದತ್ತ ನೋಡುತ್ತಿದ್ದಾರೆ.

ರೆಡ್‌ ಝೋನ್‌ನಲ್ಲಿರುವ ಕಾರಣ ಜಿಲ್ಲೆಯಲ್ಲಿಬೇಕರಿಗಳ ಆರಂಭಕ್ಕೆ ಅನುಮತಿ ದೊರೆತಿಲ್ಲ. ಇತಿಹಾಸದಲ್ಲಿಇದೇ ಮೊದಲ ಬಾರಿ ಇಷ್ಟು ಅವಧಿಯವರೆಗೆ ಬೇಕರಿಗಳು ಬಂದ್‌ ಆಗಿವೆ. ಹೆಸ್ಕಾಂ ಬಿಲ್‌, ಬಾಡಿಗೆ, ಕಾರ್ಮಿಕರ ವೇತನ ಸೇರಿದಂತೆ ಮಾಲೀಕರು ಹಾನಿ ಅನುಭವಿಸಿದ್ದಾರೆ.
-ಸುಬ್ಬಣ್ಣ ದಾಸ್‌, ಬೇಕರಿ ಮಾಲೀಕರ ಮುಖಂಡ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ