ಆ್ಯಪ್ನಗರ

ಬಿದಿರು ಬೇಸಾಯ, ರೈತರಿಗೆ ಸರಕಾರದ ಸಹಾಯ

ಮುಧೋಳ: ಸವಳು ಜವಳು ಜಮೀನು, ಹಾಳು ಭೂಮಿಯಲ್ಲಿ ಕಡಿಮೆ ಮಣ್ಣಿನ ಫಲವತ್ತತೆ ಇರುವಂತಹ ಭೂಮಿಯಲ್ಲಿ ಬಿದಿರಿನ್ನು ಬೆಳೆಯಬಹುದು ಎಂದು ಬೆಳಗಾವಿಯ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ಪಿ.ಬಿ.ಕರುಣಾಕರ ಹೇಳಿದ್ದಾರೆ.

Vijaya Karnataka 13 Mar 2019, 5:00 am
ಮುಧೋಳ: ಸವಳು ಜವಳು ಜಮೀನು, ಹಾಳು ಭೂಮಿಯಲ್ಲಿ ಕಡಿಮೆ ಮಣ್ಣಿನ ಫಲವತ್ತತೆ ಇರುವಂತಹ ಭೂಮಿಯಲ್ಲಿ ಬಿದಿರಿನ್ನು ಬೆಳೆಯಬಹುದು ಎಂದು ಬೆಳಗಾವಿಯ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ಪಿ.ಬಿ.ಕರುಣಾಕರ ಹೇಳಿದ್ದಾರೆ.
Vijaya Karnataka Web bamboo agriculture government assistance to farmers
ಬಿದಿರು ಬೇಸಾಯ, ರೈತರಿಗೆ ಸರಕಾರದ ಸಹಾಯ


ನಗರದ ರನ್ನ ಸ್ಮಾರಕ ಗ್ರಂಥಾಲಯದ ಸಭಾ ಭವನದಲ್ಲಿ ಕೃಷಿ ವಿಶ್ವ ವಿದ್ಯಾಲಯ ಧಾರವಾಡ, ಕೃಷಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಬಿದಿರು ಉತ್ಪಾದನೆ ಮತ್ತು ಬಿದಿರಿನ ಉತ್ಪನ್ನಗಳ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿದಿರು ಬೆಳೆಯಲು ಬಯಸುವ ರೈತರಿಗೆ ಐದು ಎಕರೆ ಜಮೀನಿಗೆ 50 ಸಾವಿರ ರೂ.ಸಹಾಯ ಧನ ಕೊಡಲಾಗುವುದು. ನಾಟಿ ಮಾಡಿದ ಮೊದಲ ವರ್ಷ 25ಸಾವಿರ, ಎರಡನೇ ವರ್ಷ 15ಸಾವಿರ ಹಾಗೂ ಮೂರನೇ ವರ್ಷಕ್ಕೆ 10ಸಾವಿರ ಕೊಡಲಾಗುವುದು. ಬಿದಿರು ಬೆಳೆಯು ಬೇಸಾಯ ಕ್ರಮಗಳ ಹಾಗೂ ಹನಿ ನೀರಾವರಿಗಳ ಕುರಿತು ವಿವರಣೆ ನೀಡಿ ಬರುವ ವರ್ಷದ ಮುಂಗಾರಿನಲ್ಲಿ ಬಿದಿರು ಬೆಳೆಯುವ ರೈತರು ಅಂತರ್ಜಾಲ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಬೆಂಗಳೂರಿನ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷ ಣಾಧಿಕಾರಿ ಡಾ.ರಾಜಕುಮಾರ ಶ್ರೀವಾತ್ಸವ ಮಾತನಾಡಿ, ಕೃಷ್ಣಾ ಹಾಗೂ ಘಟಪ್ರಭಾ ನದಿ ಮುಳುಗಡೆ ಪ್ರದೇಶದಲ್ಲಿಯೂ ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳಲ್ಲಿ ಬಿದಿರು ನಾಟಿ ಮಾಡಿದರೆ ಬಿದಿರು ಎತ್ತರ ಬೆಳೆದು ನೀರಿನಲ್ಲಿ ಮುಳುಗಿದ್ದರೆ ಬಿದಿರು ಚನ್ನಾಗಿ ಬೆಳೆಯಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಆರೇಳು ತಿಂಗಳು ನೀರಿನಲ್ಲಿ ಮುಳುಗಿದರೇ ಬೆಳೆಯು ಸಂಪೂರ್ಣ ನಾಶವಾಗುವುದೆಂದು ಶ್ರೀವಾತ್ಸವ ಎಚ್ಚರಿಸಿದ್ದಾರೆ.

ಸಂಪನ್ಮೂಲ ವ್ಯಕ್ತಿಯಾಗಿ ಫೌಂಡರ್‌ ಡೈರೆಕ್ಟರ್‌ ಗ್ರೋಮೊರ ಸಂಸ್ಥೆಯ ಡಾ.ಎನ್‌.ಭಾರತಿ ಮಾತನಾಡಿ ಬಿದಿರಿನ ನಾನಾ ತಳಿಗಳು ಹಾಗೂ ಬಟ್ಟೆ, ಕಟ್ಟಡ ತಯಾರಿಕೆ, ಈಥೆನಾಲ್‌ ಹಾಗೂ ಎಣ್ಣೆ ತಯಾರಿಕೆಯಲ್ಲಿ ಉಪಯುಕ್ತವಾಗಲಿದೆ ಎಂದು ಹೇಳಿದ್ದಾರೆ. ಸಾಂಗ್ಲಿಯ ಉದ್ಯಮಿ ದೀಪಕ ಯರಾಟೆ ಮಾತನಾಡಿ, ರೈತರಿಂದ ಬೆಳೆದ ಬಿದಿರನ್ನು ಪ್ರತಿ ಟನ್ನಗೆ 3200 ರಿಂದ 3800ರೂ.ವರಿಗೂ ಒಪ್ಪಂದ ಮಾಡಿಕೊಂಡು ಖರೀದಿಸುವುದಾಗಿ ಹೇಳಿದ್ದಾರೆ.

ನಿವೃತ್ತ ಜಿಲ್ಲಾ ಅರಣ್ಯ ಸಂರಕ್ಷ ಣಾಧಿಕಾರಿ ಕೆ.ಎಂ.ಶೀಗಿಹಳ್ಳಿ, ನಿವೃತ್ತ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ ಕೆ.ಡಿ.ಉದಪುಡಿ ಮಾತನಾಡಿದರು.

ರನ್ನ ಸಾವಯುವ ಕೃಷಿಕ ಸಂಸ್ಥೆ ಅಧ್ಯಕ್ಷ ಸುಭಾಸ ನಾಡಗೌಡ, ಮಾಜಿ ಶಾಸಕ ಜೆ.ಟಿ.ಪಾಟೀಲ, ಡಾ.ಎಂ.ಆರ್‌.ದೇಶಾಯಿ, ಕೃಷಿ ವಿಸ್ತರಣಾ ಮುಂದಾಳು ಡಾ.ಟಿ.ಎ.ಮಾಲಬಸರಿ, ರಮೇಶ ಅಣ್ಣಿಗೇರಿ ಇದ್ದರು. ಮುಧೋಳ ಹಾಗೂ ಬೀಳಗಿ ತಾಲೂಕಿನ ನಾನಾ ಗ್ರಾಮಗಳ ರೈತರು ಭಾಗವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ