ಆ್ಯಪ್ನಗರ

ಕೊರೊನಾ ಎಫೆಕ್ಟ್‌: ಸರಳವಾಗಿ ನಡೆದ ಬನಶಂಕರಿ ದೇವಿ ರಥೋತ್ಸವ

ದರ್ಶನಕ್ಕಾಗಿ ಬಂದ ಸಾವಿರಾರು ಜನ ದೂರದಿಂದಲೇ ದೇವಿಗೆ ಕೈ ಮುಗಿದು ವಾಪಸ್ಸಾದರು. ಜನ ಸೇರದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಂಗಡಿ, ಮುಂಗಟ್ಟುಗಳನ್ನು ಅಳವಡಿಸಲು ಪೊಲೀಸರು ಅವಕಾಶ ನೀಡಿರಲಿಲ್ಲ.

Vijaya Karnataka Web 28 Jan 2021, 6:39 pm

ಹೈಲೈಟ್ಸ್‌:

  • ಕೋವಿಡ್ ಭೀತಿಯಿಂದ ಜಿಲ್ಲಾಡಳಿತ ಜಾತ್ರೆ ನಿಷೇಧ
  • 200 ಮೀ. ಕ್ರಮಿಸಿದ ತೇರು ನಂತರ ದೇವಸ್ಥಾನಕ್ಕೆ ವಾಪಸ್
  • ಜನ ಸೇರದಂತೆ ಪೊಲೀಸ್‌ ಬಿಗಿ ಬಂದೋಬಸ್ತ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಬಾಗಲಕೋಟೆ: ಜಿಲ್ಲೆಯ ಆರಾಧ್ಯ ದೈವ ಬನಶಂಕರಿ ದೇವಿ ರಥೋತ್ಸವ ಗುರುವಾರ ಸರಳವಾಗಿ ನೆರವೇರಿತು. ಕೋವಿಡ್ ಭೀತಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಜಾತ್ರೆ ನಿಷೇಧಿಸಿದ್ದರಿಂದ ಸಾಂಕೇತಿಕವಾಗಿ ರಥೋತ್ಸವ ಕೈಗೊಳ್ಳಲಾಯಿತು.
ನಿಷೇಧದ ಮಧ್ಯೆಯೂ ಸಾವಿರಾರು ಜನರು ಉತ್ಸವದಲ್ಲಿ ಭಾಗವಹಿಸಿದ್ದರು. ನಿಗದಿತ ಮಾರ್ಗದಲ್ಲಿ 200 ಮೀ. ಕ್ರಮಿಸಿದ ತೇರು ನಂತರ ದೇವಸ್ಥಾನಕ್ಕೆ ವಾಪಸಾಯಿತು. ನಂತರ ಧಾರ್ಮಿಕ ಕೈಂಕರ್ಯವನ್ನು ಅರ್ಚಕರು ಕೈಗೊಂಡರು.

ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸಿದ್ದ ಸ್ಥಳೀಯ ಪೊಲೀಸರು ದೇವಾಲಯ ತಲುಪುವ ಮಾರ್ಗಗಳನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಿದ್ದರು.

ದರ್ಶನಕ್ಕಾಗಿ ಬಂದ ಸಾವಿರಾರು ಜನ ದೂರದಿಂದಲೇ ದೇವಿಗೆ ಕೈ ಮುಗಿದು ವಾಪಸ್‌ ಹೋದರು. ಜನ ಸೇರದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಂಗಡಿ, ಮುಂಗಟ್ಟುಗಳನ್ನು ಅಳವಡಿಸಲು ಪೊಲೀಸರು ಅವಕಾಶ ನೀಡಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ