ಬಾಗಲಕೋಟೆ: ಜಿಲ್ಲೆಯ ಆರಾಧ್ಯ ದೈವ ಬನಶಂಕರಿ ದೇವಿ ರಥೋತ್ಸವ ಗುರುವಾರ ಸರಳವಾಗಿ ನೆರವೇರಿತು. ಕೋವಿಡ್ ಭೀತಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಜಾತ್ರೆ ನಿಷೇಧಿಸಿದ್ದರಿಂದ ಸಾಂಕೇತಿಕವಾಗಿ ರಥೋತ್ಸವ ಕೈಗೊಳ್ಳಲಾಯಿತು. ನಿಷೇಧದ ಮಧ್ಯೆಯೂ ಸಾವಿರಾರು ಜನರು ಉತ್ಸವದಲ್ಲಿ ಭಾಗವಹಿಸಿದ್ದರು. ನಿಗದಿತ ಮಾರ್ಗದಲ್ಲಿ 200 ಮೀ. ಕ್ರಮಿಸಿದ ತೇರು ನಂತರ ದೇವಸ್ಥಾನಕ್ಕೆ ವಾಪಸಾಯಿತು. ನಂತರ ಧಾರ್ಮಿಕ ಕೈಂಕರ್ಯವನ್ನು ಅರ್ಚಕರು ಕೈಗೊಂಡರು.
ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸಿದ್ದ ಸ್ಥಳೀಯ ಪೊಲೀಸರು ದೇವಾಲಯ ತಲುಪುವ ಮಾರ್ಗಗಳನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಿದ್ದರು.
ದರ್ಶನಕ್ಕಾಗಿ ಬಂದ ಸಾವಿರಾರು ಜನ ದೂರದಿಂದಲೇ ದೇವಿಗೆ ಕೈ ಮುಗಿದು ವಾಪಸ್ ಹೋದರು. ಜನ ಸೇರದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಂಗಡಿ, ಮುಂಗಟ್ಟುಗಳನ್ನು ಅಳವಡಿಸಲು ಪೊಲೀಸರು ಅವಕಾಶ ನೀಡಿರಲಿಲ್ಲ.
ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸಿದ್ದ ಸ್ಥಳೀಯ ಪೊಲೀಸರು ದೇವಾಲಯ ತಲುಪುವ ಮಾರ್ಗಗಳನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಿದ್ದರು.
ದರ್ಶನಕ್ಕಾಗಿ ಬಂದ ಸಾವಿರಾರು ಜನ ದೂರದಿಂದಲೇ ದೇವಿಗೆ ಕೈ ಮುಗಿದು ವಾಪಸ್ ಹೋದರು. ಜನ ಸೇರದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಂಗಡಿ, ಮುಂಗಟ್ಟುಗಳನ್ನು ಅಳವಡಿಸಲು ಪೊಲೀಸರು ಅವಕಾಶ ನೀಡಿರಲಿಲ್ಲ.