ಆ್ಯಪ್ನಗರ

ಬಸವ ಧರ್ಮ ಜಾಗತಿಕ ಧರ್ಮ

ಬಾಗಲಕೋಟ: 'ಮಾನ್ಯತೆ ಕೊಟ್ಟರೂ ಕೊಡದಿದ್ದರೂ ಬಸವ ಧರ್ಮ ಜಾಗತಿಕ ಧರ್ಮವಾಗಿದೆ' ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಅಭಿಪ್ರಾಯಪಟ್ಟರು.

Vijaya Karnataka 17 Mar 2019, 5:00 am
ಬಾಗಲಕೋಟ: 'ಮಾನ್ಯತೆ ಕೊಟ್ಟರೂ ಕೊಡದಿದ್ದರೂ ಬಸವ ಧರ್ಮ ಜಾಗತಿಕ ಧರ್ಮವಾಗಿದೆ' ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಅಭಿಪ್ರಾಯಪಟ್ಟರು.
Vijaya Karnataka Web basava dharma is a global religion
ಬಸವ ಧರ್ಮ ಜಾಗತಿಕ ಧರ್ಮ


ಜಿಲ್ಲೆಯ ಕೂಡಲಸಂಗಮದಲ್ಲಿ ಶನಿವಾರ ಬಸವ ಧರ್ಮ ಪೀಠದ ಜಗದ್ಗುರು ಮಾತೆ ಮಹಾದೇವಿಯವರ ಶೃದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. 'ಲಿಂಗಾಯತ ಧರ್ಮಕ್ಕಾಗಿ ನಡೆದಿರುವ ಆಂದೋಲನ ಸತ್ಯ ಹಾಗೂ ಅಸತ್ಯದ ಮಧ್ಯದ ಹೋರಾಟವಾಗಿದೆ. ಪೈಗಂಬರ್‌, ಏಸು ಹಾಗೂ ಬಸವಣ್ಣನವರನ್ನೂ ವಿರೋಧಗಳು ಬಿಟ್ಟಿಲ್ಲ. ಮಾತಾಜಿಯವರ ಆಶಯದಂತೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಯಲಿದೆ. ಬಸವಣ್ಣನವರ ಆದರ್ಶದಲ್ಲಿ ಲಿಂಗಾನಂದ ಶ್ರೀಗಳ ನೇತೃತ್ವದಲ್ಲಿ ಮಾತೆ ಮಹಾದೇವಿ 12ನೇ ಶತಮಾನದ ಕ್ರಾಂತಿಯನ್ನು ಮರುಕಳಿಸಿದರು. ಜಾತಿ ಇರಲಾರದ ವ್ಯವಸ್ಥೆಯ ಲಿಂಗಾಯತ ಧರ್ಮ ವಿಶ್ವದಲ್ಲೇ ಶ್ರೇಷ್ಠವಾಗಿದೆ. ಬಸವ ತತ್ತ್ವ ಪ್ರಸಾರ ಕೈಗೊಂಡ ಮಾತಾಜಿ ಬರೆದ ಪುಸ್ತಕ ಕಾಲೇಜಿಗೆ ಪಠ್ಯವಾಗಿದ್ದು ಅವರ ಸಾಹಿತ್ಯದ ವಿಶೇಷತೆಗೆ ಸಾಕ್ಷಿಯಾಗಿದೆ' ಎಂದು ಬಣ್ಣಿಸಿದರು.

ಎಲ್ಲರೂ ಒಂದಾಗಿ

ನಿವೃತ್ತ ಐಎಎಸ್‌ ಅಧಿಕಾರಿ ಡಾ.ಶಿವಾನಂದ ಜಾಮದಾರ್‌ 'ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ನಮ್ಮವರೇ ಅಪ ಪ್ರಚಾರ ನಡೆಸಿದರು. ಬಸವಣ್ಣನವರ ತತ್ತ್ವಗಳನ್ನು ಮರೆತವರೂ ನಮ್ಮಲ್ಲಿದ್ದಾರೆ. ಬಸವ ತತ್ತ್ವವನ್ನು ಪ್ರಶ್ನಿಸುವ ವಿರಕ್ತ ಮಠಗಳೂ ಇವೆ, ಬಸವ ತತ್ತ್ವ ಪ್ರಚಾರಕ್ಕಾಗಿ ಸ್ಥಾಪನೆಯಾಗಿರುವ ಮಠಗಳೆಲ್ಲ ಒಂದಾಗಬೇಕಿದೆ. ಜಾತಿಗೊಂದು ಮಠ, ಸ್ವಾಮೀಜಿಗಳಿರುವ ವ್ಯವಸ್ಥೆಯಲ್ಲಿ ಎಲ್ಲರೂ ಒಂದಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮುಂದುವರಿಸಬೇಕಿದೆ' ಎಂದು ವಿವರಿಸಿದರು.

ಮಾಜಿ ಸಚಿವ ವಿನಯ ಕುಲಕರ್ಣಿ 'ತಾವು ಕೈಗೊಂಡ ನಿರ್ಧಾರದಿಂದ ಒಮ್ಮೆಯೂ ಮಾತಾಜಿ ಹಿಂದೆ ಸರಿಯುತ್ತಿರಲಿಲ್ಲ. ಹಲವಾರು ಬಾರಿ ಬೇಡ ಎಂದು ಹೇಳಿದಾಗ ಅವರು ತಮ್ಮ ನಿರ್ಧಾರವನ್ನು ಬಿಡುತ್ತಿರಲಿಲ್ಲ. ಅವರು ದೈಹಿಕವಾಗಿ ಭಕ್ತರೊಂದಿಗೆ ಇಲ್ಲದಿದ್ದರೂ ಎಲ್ಲರ ಹೃದಯಗಳಲ್ಲಿ ಸದಾ ಇರಲಿದ್ದಾರೆ' ಎಂದರು.

ಮುಂಬೈನಲ್ಲಿ ಶೃದ್ಧಾಂಜಲಿ

ಮಹಾರಾಷ್ಟ್ರದ ಬಸವ ದಳದ ಮುಖಂಡ ಅವಿನಾಶ್‌ 'ಮುಂಬರುವ ಆಗಸ್ಟ್‌ ತಿಂಗಳಿನಲ್ಲಿ ಮುಂಬೈನ ಆಜಾದ್‌ ಮೈದಾನದಲ್ಲಿ ಬೃಹತ್‌ ರಾರ‍ಯಲಿ ನಡೆಸಿ ಮಾತಾಜಿಯವರಿಗೆ ಶೃದ್ಧಾಂಜಲಿ ಸಲ್ಲಿಸಲಾಗುತ್ತದೆ. ಲಿಂಗಾಯತರ ಪರವಾಗಿ ಮಾತಾಜಿ ನಡೆಸಿದ ಹೋರಾಟ ಅವಿಸ್ಮರಣೀಯವಾಗಿದೆ. ಮಹಾರಾಷ್ಟ್ರದ 1 ಕೋಟಿ ಲಿಂಗಾಯತರು ನಿಮ್ಮೊಂದಿಗಿದ್ದಾರೆ' ಎಂದು ಹೇಳಿದರು. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ 'ಕೂಡಲಸಂಗಮ ಅಂತಾರಾಷ್ಟ್ರೀಯ ಕೇಂದ್ರವಾಗಿ ಗುರುತಿಸಿಕೊಳ್ಳಲು ಮಾತಾಜಿ ಕಾರಣರಾಗಿದ್ದಾರೆ. ಅವರ ಹೋರಾಟದ ಫಲದಿಂದ ಇಂದು ಲಕ್ಷಾಂತರ ಭಕ್ತರು ಕೂಡಲಸಂಗಮಕ್ಕೆ ಆಗಮಿಸುತ್ತಿದ್ದಾರೆ' ಎಂದು ತಿಳಿಸಿದರು. ಸಂಸದ ಪಿ.ಸಿ.ಗದ್ದಿಗೌಡರ, ಲಕ್ಷ್ಮಿ ಹೆಬ್ಬಾಳಕರ್‌, ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಗಣ್ಯರು ಇದ್ದರು. ಮಾ.24 ರಂದು ಮಾತಾಜಿಯವರ ಲಿಂಗೈಕ್ಯ ಸಂಸ್ಮರಣಾ ದಿನಾಚರಣೆ ಆಯೋಜಿಸಲು ಸಭೆಯಲ್ಲಿ ನಿರ್ಧಾರ ಪ್ರಕಟಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ