ಆ್ಯಪ್ನಗರ

ರಿವರ್ಸ್‌ ಆಪರೇಷನ್‌, ವಿಶ್ವಾಸಮತಯಾಚನೆ ವೇಳೆ ಬಿಜೆಪಿಯವರಿಂದ ಬೆಂಬಲ: ರಾಯರೆಡ್ಡಿ ಹೊಸ ಬಾಂಬ್‌

ಅತೃಪ್ತ ಶಾಸಕರ ರಾಜೀನಾಮೆಗೆ ಸಂಬಂಧಿಸಿದಿಂತೆ ಸುಪ್ರೀಂ ಕೋರ್ಟ್ ತೀರ್ಪು ಮೈತ್ರಿ ಸರಕಾರ ಹಿನ್ನಡೆ ಅಲ್ಲ. ವಿಪ್ ಕೊಡೋದು ಸಂವಿಧಾನಾತ್ಮಕ ಹಕ್ಕು. ಕಲಾಪಕ್ಕೆ ಭಾಗಿಯಾಗುವ ವಿಚಾರ ಶಾಸಕರಿಗೆ ಬಿಟ್ಟಿದ್ದು.

Vijaya Karnataka Web 17 Jul 2019, 6:04 pm
ಬಾಗಲಕೋಟೆ: ಕರ್ನಾಟಕ ರಾಜಕೀಯ ಕ್ರಿಪ್ರಕ್ರಾಂತಿಯಲ್ಲಿ ಮತ್ತೊಂದು ಮಿನಿ ಕ್ರಾಂತಿ ನಡೆಯುತ್ತಿದೆಯೇ?
Vijaya Karnataka Web ಬಸವರಾಜ ರಾಯರೆಡ್ಡಿ
ಬಸವರಾಜ ರಾಯರೆಡ್ಡಿ


ಈ ರೀತಿಯ ಹೊಸ ಬಾಂಬ್‌ ಹಾಕಿರುವುದುದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ.

ಗುರುವಾರ ನಡೆಯಲಿರುವ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಬಿಜೆಪಿಯವರು ನಾಲ್ಕೈದು ಜನ ಬಂದು ನಮಗೆ ಬೆಂಬಲಿಸಬಹುದು ಎಂದಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ರಿವರ್ಸ್‌ ಆಪರೇಷನ್ ಮಾಡಿದ್ದೀವಿ ಎಂದಿದ್ದಾರೆ. ಬಿಜೆಪಿಯವರೇ ಬಂದು ನಮ್ಮ ಪರ ಕೈ ಎತ್ತಿ ವೋಟ್ ಹಾಕಬಹುದು. ಸಿಎಂ ಇದನ್ನು ಉಲ್ಲೇಖಿಸಿಯೇ ವಿಶ್ವಾಸ ಮತ ಯಾಚನೆಗೆ ಮುಂದಾಗಿರಬಹುದು ಎಂದು ರಾಯರೆಡ್ಡಿ ತಿಳಿಸಿದ್ದಾರೆ.

ಈ ಕುರಿತು ಸಿಎಂ ಕುಮಾರಸ್ವಾಮಿ ಸಹ ಪ್ರಯತ್ನ ಮಾಡಿರಬಹುದು. ವಿಶ್ವಾಸ ಮತ ಯಾಚನೆ ವೇಳೆ ಏನು ಬೇಕಾದ್ರೂ ಆಗಬಹುದು. ಬಿಜೆಪಿ ಬೆಂಬಲ ಸಿಗಬಹುದು ಇಲ್ಲವೇ ನಮ್ಮವರೇ ಬಂದು ಬೆಂಬಲವನ್ನೂ ನೀಡಬಹುದು. ವಿಶ್ವಾಸ ಮತಯಾಚನೆ ವೇಳೆ ಏನಾಗಲಿದೆ ಅನ್ನೋದನ್ನ ಕಾದು ನೋಡಿ ಎನ್ನುವ ಮೂಲಕ ರಾಯರೆಡ್ಡಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಮೈತ್ರಿ ಸರಕಾರ ಹಿನ್ನಡೆ ಅಲ್ಲ. ವಿಪ್ ಕೊಡೋದು ಸಂವಿಧಾನಾತ್ಮಕ ಹಕ್ಕು. ಸುಪ್ರೀಂ ತೀರ್ಪು ಸರಿ ಇದೆ. ಕಲಾಪಕ್ಕೆ ಭಾಗಿಯಾಗುವ ವಿಚಾರ ಶಾಸಕರಿಗೆ ಬಿಟ್ಟಿದ್ದು. ಶಾಸಕರ ರಾಜೀನಾಮೆ ಅಂಗೀಕಾರ, ತಿರಸ್ಕಾರ ಸ್ಪೀಕರ್ ಗೆ ಬಿಟ್ಟಿದ್ದು. ಈ ಬಗ್ಗೆ ಸ್ಪೀಕರ್ ನಿರ್ಧಾರ ಕೈಗೊಳ್ಳಬಹುದು ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ