ಆ್ಯಪ್ನಗರ

ಕಾಂಗ್ರೆಸ್‌ ಅಧಿಕಾರಕ್ಕೇರಿಸಲು ಸಿದ್ಧರಾಗಿ: ದಿನೇಶ ಗುಂಡೂರಾವ್‌

ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ ಮುಖಂಡರ ಕೊಡುಗೆ ಅಪಾರ, ಸಾಮಾಜಿಕ ನ್ಯಾಯ ಕೊಡುವವಲ್ಲಿ ಕಾಂಗ್ರೆಸ್‌ ಪಕ್ಷ ದ ಪಾತ್ರ ಮುಖ್ಯ ಎಂದರು

Vijaya Karnataka 4 Mar 2019, 10:17 am
ಬೀಳಗಿ(ಬಾಗಲಕೋಟ): ಬೂತಮಟ್ಟ ಶಕ್ತಿ ಶಾಲಿಯಾಗಿದ್ದರೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತ ಕಾಂಗ್ರೆಸ್‌ ಪಕ್ಷ ವನ್ನು ಸಂಘಟಿಸಿ, ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಲು ಸಿದ್ಧರಾಗ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್‌ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕರೆ ನೀಡಿದರು.
Vijaya Karnataka Web dinesh


ಪಟ್ಟಣದ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ನಡೆದ 2019 ಲೋಕ ಸಭೆ ಚುನಾವಣೆ ಸಿದ್ಧತಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ ಮುಖಂಡರ ಕೊಡುಗೆ ಅಪಾರ, ಸಾಮಾಜಿಕ ನ್ಯಾಯ ಕೊಡುವವಲ್ಲಿ ಕಾಂಗ್ರೆಸ್‌ ಪಕ್ಷ ದ ಪಾತ್ರ ಮುಖ್ಯ ಎಂದರು.

ಧರ್ಮ ಮತ್ತು ಭಾವನೆಗಳನ್ನು ಕೆರಳಿಸುವುದೇ ಬಿಜೆಪಿಯ ಸಿದ್ಧಾಂತ, ಇಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳಕ್ಕೆ ಬಿಜೆಪಿಯೇ ಕಾರಣ ಎಂದು ದೂರಿದರು. ವರ್ಷದಲ್ಲಿ ಅಚ್ಚೇದಿನ್‌ ಬರುತ್ತೆ ಎಂದು ಹೇಳಿರುವ ಬಿಜೆಪಿಯವರು 5 ವರ್ಷ ಗತಿಸಿದರೂ ಯಾವ ಅಚ್ಚೇದ್ದಿನ್‌ ಬರಲಿಲ್ಲ ಎಂದು ವ್ಯಂಗ್ಯವಾಡಿದ ದಿನೇಶ, ವಿದೇಶದಿಂದ ಕಪ್ಪು ಹಣ ತರುವುದಾಗಿ ಹೇಳಿರುವ ಬಿಜೆಪಿ ಯವರು ವಿದೇಶದಿಂದ ಎಷ್ಟು ಕಪ್ಪು ಹಣ ತಂದರು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಭೀಕರ ಬರಗಾಲದಲ್ಲಿ ಕೇಂದ್ರ ಸರಕಾರ ಮಹಾರಾಷ್ಟ್ರಕ್ಕೆ ಹೆಚ್ಚು ಹಣ ಕೊಟ್ಟು ರಾಜ್ಯಕ್ಕೆ ಕೇವಲ 8ನೂರು ಕೋಟಿ ಮಾತ್ರ ನೀಡಿ ಮಲತಾಯಿ ಧೋರಣೆ ಅನುಸರಿಸಿತು ಎಂದು ದೂರಿದರು. ರಾಜ್ಯದಲ್ಲಿ ಪ್ರಮುಖವಾಗಿರುವ ಮಹದಾಯಿ ಯೋಜನೆಗೂ ಸ್ಪಂದಿಸಲಿಲ್ಲ, ಕೇಂದ್ರ ಬಿಜೆಪಿ ಸರಕಾರ 5 ವರ್ಷದ ಅಧಿಕಾರದಲ್ಲಿ ರೈತರಿಗೆ ಉತ್ತಮ ಯೋಜನೆ ನೀಡಲಿಲ್ಲ ಎಂದು ಆರೋಪಿಸಿದರು.

ಗೃಹ ಸಚಿವ ಎಂ.ಬಿ.ಪಾಟೀಲ ಮಾತನಾಡಿ ಬೀಳಗಿ ಮತಕ್ಷೇತ್ರದಲ್ಲಿ ಹಿಂದಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಮಾಜಿ ಶಾಸಕ ಜೆ.ಟಿ ಪಾಟೀಲ ನೀರಾವರಿ, ಶುದ್ಧ ಕುಡಿಯುವ ನೀರಿನ ಘಟಕಗಳು, ರಸ್ತೆಗಳು, ಗಲಗಲಿ, ಕೊರ್ತಿ ಬ್ಯಾರೇಜ್‌ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಗಮನಹರಿಸಿದ್ದಾರೆ. ಅಭಿವೃದ್ಧಿ ಹಾಗೂ ಪಕ್ಷ ದ ತತ್ವ ಸಿದ್ಧಾಂತಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಬೂತ ಮಟ್ಟದಿಂದ ನಡೆಯಬೇಕು. ಪಕ್ಷ ಬಲಪಡಿಸಲು ಮುಂದಾಗಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಯು.ಆರ್‌. ಸಭಾಪತಿ ಮಾತನಾಡಿ, ಚುನಾವಣೆಗಳು ಬಂದಾಗ ಮಾತ್ರ ಬಿಜೆಪಿ ಯವರಿಗೆ ರಾಮಮಂದಿರದ ನೆನೆಪು, ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ ಉತ್ತರ ಪ್ರದೇಶದಲ್ಲಿಯೂ ಇದೆ. ಹಾಗಾದರೆ ಯಾಕೆ ರಾಮಮಂದಿರ ಕಟ್ಟುತ್ತಿಲ್ಲ ಎಂದು ಪ್ರಶ್ನಿಸಿದರು,

ಮಾಜಿ ಶಾಸಕ ಜೆ.ಟಿ. ಪಾಟೀಲ ಸಮಾರಂಭವನ್ನು ಉದ್ಘಾಟಿಸಿದರು. ಸಂಗಮೇಶ ಬಬಲೇಶ್ವರ, ಎಂ.ಬಿ ಸೌದಾಗರ, ಬಸವಪ್ರಭು ಸರನಾಡಗೌಡ, ಎಂ.ಎನ್‌.ಪಾಟೀಲ, ಶ್ರೀಶೈಲ ಅಂಟೀನ, ಜಿಲ್ಲಾ ಪಂಚಾಯತಿ ಸದಸ್ಯ ಹನಮಂತ ಕಾಖಂಡಕಿ, ಬಸವರಾಜ ಖೋತ, ಕಸ್ತೂರಿ ಲಿಂಗಣ್ಣವರ, ಶಶಿಕಲಾ ಯಡಹಳ್ಳಿ, ಶಿವಾನಂದ ನಿಂಗನೂರ, ಗೋವಿಂದಗೌಡ ಪಾಟೀಲ, ಸಂಗಣ್ಣ ಮುಧೋಳ, ಬಸು ಕಲಕುಟಿ, ಬಸವರಾಜ ಮೆಳ್ಳಿಗೇರಿ, ರಮೇಶ ಬಗಲಿ, ಮಹಾದೇವ ಹಾದಿಮನಿ, ಹನಮಂತ ಕಟ್ಟೆಪ್ಪನವರ, ರಮೇಶ ಭೀಮಪ್ಪ ನಾಯ್ಕರ, ಅಜ್ಜು ನಿಂಬಾಳಕರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ