ಆ್ಯಪ್ನಗರ

ಭಂಡಾರದಲ್ಲಿಮಿಂದೆದ್ದ ಭಕ್ತರ ಒಡೆಯ

ಸಾವಳಗಿ: ಪ್ರತಿಯೊಬ್ಬರ ಕೈಯಲ್ಲೂಭಂಡಾರ, ಪರಸ್ಪರ ಎರಚಾಟ ಕಳೆದ ನಾಲ್ಕು ದಿನದಿಂದ ಸಾವಳಗಿಯಲ್ಲಿನಡಿಯುತ್ತ ಬಂದಿರುವ ಭರಮದೇವರ ಮತ್ತು ಮಾಳಿಂಗೇಶ್ವರ ದೇವಸ್ಥಾನದ 6 ನೇ ವರ್ಷದ ಬೌತಕಾರಿಯ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ಜರುಗಿತು.

Vijaya Karnataka 2 Dec 2019, 5:00 am
ಸಾವಳಗಿ: ಪ್ರತಿಯೊಬ್ಬರ ಕೈಯಲ್ಲೂಭಂಡಾರ, ಪರಸ್ಪರ ಎರಚಾಟ ಕಳೆದ ನಾಲ್ಕು ದಿನದಿಂದ ಸಾವಳಗಿಯಲ್ಲಿನಡಿಯುತ್ತ ಬಂದಿರುವ ಭರಮದೇವರ ಮತ್ತು ಮಾಳಿಂಗೇಶ್ವರ ದೇವಸ್ಥಾನದ 6 ನೇ ವರ್ಷದ ಬೌತಕಾರಿಯ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ಜರುಗಿತು.
Vijaya Karnataka Web believers in the repository
ಭಂಡಾರದಲ್ಲಿಮಿಂದೆದ್ದ ಭಕ್ತರ ಒಡೆಯ


ಜಾತ್ರೆಯಲ್ಲಿಪಲ್ಲಕ್ಕಿಗಳ ಭೇಟಿ ಸುತ್ತಮುತ್ತ ಹಳ್ಳಿಗಳ ಸಾವಿರಾರು ಜನರ ಸಮ್ಮುಖದಲ್ಲಿನಡೆದ ಮೆರವಣಿಗೆ ಬಸ್‌ ನಿಲ್ದಾಣ, ಶಿವಾಜಿ ಸರ್ಕಲ್‌, ಬಸವೇಶ್ವರ ದೇವಸ್ಥಾನ, ಗ್ರಾಮ ಪಂಚಾಯಿತಿ, ಕಲ್ಯಾಣಕಟ್ಟಿ ಹೀಗೆ ಪ್ರಮುಖ ಬೀದಿಗಳಲ್ಲಿಕುಂಭಹೊತ್ತ ಮುತ್ತೈದೆಯರು, ಡೊಳ್ಳಿನ ವಾಲಗ, ಬ್ಯಾಂಜ್ಯೋ ಹಾಡುಗಳು, ಸಕಲ ವಾದ್ಯ ವೈಭವಗಳೊಂದಿಗೆ ಪರಸ್ಥಳದಿಂದ ಬಂದ 51ಊರಿನ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ನಡೆಯಿತು.

ಪಲ್ಲಕ್ಕಿಗಳ ಮುಂಭಾಗ ಪೂಜಾರಿ (ಗೂಳಿ) ಹೊಟ್ಟೆಗೆ ಕತ್ತಿ (ಅಲಗ) ಬಡಿದುಕೊಂಡರು, ಇನ್ನು ಕೆಲವರು ಬೆನ್ನಿಗೆ ಸರಪಳಿ (ರೂಮಚೂರ)ಬಡಿದುಕೊಂಡರು, ಯುವಕ, ಯುವತಿಯರು ಪರಸರ ಭಂಡಾರ ಎರಚಿಕೊಂಡು ಸಂಭ್ರಮದಿಂದ ಜಾತ್ರೆಯಲ್ಲಿಪಾಲ್ಗೊಂಡಿದ್ದರು.

ಭಂಡಾರ:

ಪಲ್ಲಕ್ಕಿಗಳ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ಹಣೆಗೆ ಹಚ್ಚಲು ಪೂಜಾರಿಗಳಿಗೆ ಭಂಡಾರ ಎಂದು ದೇವಸ್ಥಾನದ ಕಮೀಟಿ 85 ಚೀಲ ಬಂಡಾರ ತಂದಿದ್ದರೆ, ವ್ಯಾಪಾರಸ್ಥರು ನಾವು ಕಮ್ಮಿ ಇಲ್ಲಾಎಂದು ಒತ್ತು ಗಾಡಿಯಲ್ಲಿ, ಬುಟ್ಟಿಯಲ್ಲಿತಲೆ ಮೇಲೆ ಹೊತ್ತು ತಿರುಗಾಡಿ ಭಂಡಾರ ಖಾಲಿ ಮಾಡುತ್ತಿರುವುದು ಕಂಡು ಬಂತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ