ಆ್ಯಪ್ನಗರ

ಬಿಜೆಪಿ ಅಭ್ಯರ್ಥಿ ನಿರಾಣಿ ಭರ್ಜರಿ ರೋಡ್‌ ಶೋ

ಬೀಳಗಿ: ಬಹಿರಂಗ ಚುನಾವಣೆಗೆ ಕೊನೆಯ ದಿನವಾದ ಗುರುವಾರ ಪಟ್ಟಣದ ನಾನಾ ಬಡಾವಣೆ ಹಾಗೂ ಇದಕ್ಕೂ ಮೊದಲು ಸ್ಥಳೀಯ ಹಲವು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಬಿಡುವಿಲ್ಲದೆ ಭರ್ಜರಿ ರೋಡ್‌ ಶೋ ನಡೆಸುವ ಮೂಲಕ ಮತಯಾಚಣೆ ಮಾಡಿದರು.

Vijaya Karnataka 10 May 2018, 8:57 pm
ಬೀಳಗಿ: ಬಹಿರಂಗ ಪ್ರಚಾರದ ಕೊನೆಯ ದಿನವಾದ ಗುರುವಾರ ಪಟ್ಟಣದ ನಾನಾ ಬಡಾವಣೆ ಹಾಗೂ ಇದಕ್ಕೂ ಮೊದಲು ಸ್ಥಳೀಯ ಹಲವು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಬಿಡುವಿಲ್ಲದೆ ಭರ್ಜರಿ ರೋಡ್‌ ಶೋ ನಡೆಸುವ ಮೂಲಕ ಮತಯಾಚಣೆ ಮಾಡಿದರು.
Vijaya Karnataka Web bjp candidate nirani road show
ಬಿಜೆಪಿ ಅಭ್ಯರ್ಥಿ ನಿರಾಣಿ ಭರ್ಜರಿ ರೋಡ್‌ ಶೋ


ನೂರಾರು ಬೈಕ್‌ ರಾರ‍ಯಲಿಯೊಂದಿಗೆ ಕಿಕ್ಕಿರಿದು ಸೇರಿದ ಜನಸಾಗರದ ಮಧ್ಯೆ ಪಟ್ಟಣದ ಕಾಳಿಕಾಕಮಠೇಶ್ವರಿ ದೇವಸ್ಥಾನದಿಂದ ತೆರೆದ ವಾಹನದಲ್ಲಿ ರೋಡ್‌ ಶೋ ಆರಂಭಿಸಿದ ಅವರು ಪಟ್ಟಣದ ನಾನಾ ಬಡಾವಣೆಯಲ್ಲಿ ಸಂಚರಿಸಿ ಮತಯಾಚಿಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ ಬೈಕ್‌ ರಾರ‍ಯಲಿ, ಎಲ್ಲಿ ನೋಡಿದರಲ್ಲಿ ಬಿಜೆಪಿ ಬಾವುಟ ರಾರಾಜಿಸುತ್ತಿದ್ದವು ಇದರಿಂದ ಇಡೀ ನಗರ ಕೇಸರಿಮಯವಾಗಿತ್ತು. ನೂರಾರು ಕಾರ್ಯಕರ್ತರ ಜಯಘೋಷ ಅಬ್ಬರ ಪ್ರಚಾರಕ್ಕೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ನಿರಾಣಿ ಮಾತನಾಡಿ, ಸಮಗ್ರ ಅಭಿವೃದ್ಧಿ ಬಿಜೆಪಿ ಸರಕಾರದಿಂದ ಸಾಧ್ಯ. ಮರಳು ಸಿಗದೆ ತೀವ್ರ ಸಂಕಷ್ಟ ಎದುರಿಸುತ್ತಿರುವ ಸಾಮಾನ್ಯ ಜನರಿಗೆ ಸಮರ್ಪಕವಾಗಿ ಮತ್ತು ಯೋಗ್ಯ ಬೆಲೆಯಲ್ಲಿ ಮರಳು ಸಿಗುವಂತೆ ತಕ್ಷ ಣವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬರೀ ಸುಳ್ಳು ಹೇಳುವ ಮೂಲಕ ದುರಾಡಳಿತ ನಡೆಸಿದ ಶಾಸಕರಿಗೆ ಈ ಬಾರಿ ಮತದಾರರು ತಕ್ಕಪಾಠ ಕಲಿಸಬೇಕು. ಬಿಜೆಪಿ ಬೆಂಬಲಿಸುವ ಬಹುಮತದಿಂದ ತಮ್ಮನ್ನು ಆಯ್ಕೆ ಮಾಡಿ ಸೇವೆಗೆ ಅನುವುಮಾಡಿಕೊಡಬೇಕೆಂದು ಮನವಿ ಮಾಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಸಂಗಪ್ಪ ಕಟಗೇರಿ, ಮಹಾಂತೇಶ ಕೋಲಕಾರ, ರಾಮನಗೌಡ ಬಸರಡ್ಡಿ, ಶಿವಾನಂದ ಕಣವಿ, ಈರಣ್ಣ ಗಿಡ್ಡಪ್ಪಗೋಳ, ಬರಮಪ್ಪ ಗುಳಬಾಳ, ಸುನಂದಾ ಪಾಟೀಲ, ವಿಜಯಲಕ್ಷ್ಮೀ ಪಾಟೀಲ, ದಾಕ್ಷಾಯಿಣಿ ಜಂಬಗಿ, ಪ್ರಮಿಳಾ ಘೊರ್ಪಡೆ ರವಿ ಜಂಬಗಿ, ಹಣಮಂತ ಮೆಳ್ಳಿಗೇರಿ, ಶಿವು ಮೆಳ್ಳಿಗೇರಿ, ಪರಸುರಾಮ ಬಾಗೇವಾಡಿ, ನಾರಾಯಣ ಶೀಕಲವಾಡಿ, ಭೀಮಶಿ ಜಲಗೇರಿ, ಸಿದ್ದು ಬಗಲಿ, ಸಿದ್ದು ಮೆಳ್ಳಿಗೇರಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ