ಆ್ಯಪ್ನಗರ

ಮೀಸಲಾತಿ ನೀಡದಿದ್ದರೆ ಬೊಮ್ಮಾಯಿ ಅಧಿಕಾರ ಕಳೆದುಕೊಳ್ತಾರೆ: ವಿಜಯಾನಂದ ಕಾಶಪ್ಪನವರ

ಮೀಸಲಾತಿ ನೀಡದ್ದಕ್ಕೆ ಬಿಎಸ್‌ ಯಡಿಯೂರಪ್ಪ ಅಂದು ಅಧಿಕಾರ ಕಳೆದುಕೊಂಡರು. ಈಗ ಮೀಸಲಾತಿ ನೀಡದೇ ಹೋದರೆ ಬಸವರಾಜ ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ವಿಜಯಾನಂದ ಕಾಶಪ್ಪನವರ ಭವಿಷ್ಯ ನುಡಿದರು.

Vijaya Karnataka Web 17 Nov 2021, 6:53 pm
ಬಾಗಲಕೋಟೆ: ಪಂಚಮಸಾಲಿ ಸಮುದಾಯದ ಮೀಸಲಾತಿ ಮತ್ತೆ ದನಿ ಎತ್ತಿದೆ. ಈ ಬಾರಿ ವಿಜಯಾನಂದ ಕಾಶಪ್ಪನವರ ಮೀಸಲಾತಿ ಪರವಾಗಿ ಗುಡುಗಿದ್ದಾರೆ.
Vijaya Karnataka Web ವಿಜಯಾನಂದ ಕಾಶಪ್ಪನವರ್
ವಿಜಯಾನಂದ ಕಾಶಪ್ಪನವರ್


ಬಾಗಲಕೋಟೆ ಜಿಲ್ಲೆಯ ಕಳ್ಳಿಗುಡ್ಡ ಗ್ರಾಮದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದಾರೆ.

ಮೀಸಲಾತಿ ನೀಡದ್ದಕ್ಕೆ ಬಿಎಸ್‌ ಯಡಿಯೂರಪ್ಪ ಅಂದು ಅಧಿಕಾರ ಕಳೆದುಕೊಂಡರು. ಈಗ ಮೀಸಲಾತಿ ನೀಡದೇ ಹೋದರೆ ಬಸವರಾಜ ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ವಿಜಯಾನಂದ ಕಾಶಪ್ಪನವರ ಭವಿಷ್ಯ ನುಡಿದರು.

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡದಿರುವುದು ಯಡಿಯೂರಪ್ಪ ಅವರಿಗೆ ಮುಳುವಾಯಿತು. ಇದರಿಂದ ಬಸವರಾಜ್ ಬೊಮ್ಮಾಯಿ ಪಾಠ ಕಲಿಯಲಿ ಎಂದು ತಿಳಿಸಿದರು.

ಬೂಟ್ ಪಾಲಿಶ್‌ ಜೊತೆಗೆ ಬೀದಿ ವ್ಯಾಪಾರಸ್ಥರಿಗೆ ಸನ್ಮಾನ; ಶಾಸಕ ಚರಂತಿಮಠ ವ್ಯಂಗ್ಯಕ್ಕೆ ಕರವೇ ತಿರುಗೇಟು

ಸಮಾಜವನ್ನು ಕೆಲವರು ತಮ್ಮ ಅಧಿಕಾರಕ್ಕಾಗಿ ಲಾಭ ಪಡೆದುಕೊಂಡರು. ‌ಹೋರಾಟಕ್ಕೆ ಹಿಂದೇಟು ಹಾಕಿದರು ಎಂದು ಅವರು ಆರೋಪಿಸಿದರು.

ಸ್ವಾಮೀಜಿಯವರ ನೇತೃತ್ವದ ನಮ್ಮ ಹೋರಾಟ ಒಂದು ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಸಿಎಂ ಬೊಮ್ಮಾಯಿ 3 ತಿಂಗಳ ಗಡುವು ನೀಡಿದ್ದಾರೆ. ಈಗಾಗಲೇ ಒಂದು ತಿಂಗಳು ಕಳೆದಿದೆ. ನೋಡೋಣ ಏನು ಮಾಡುತ್ತಾರೋ ಎಂದು ವಿಜಯಾನಂದ ಕಾಶಪ್ಪನವರ ತಿಳಿಸಿದರು.

ಸಿಎಂ ಆ ಇಬ್ಬರು ಪ್ರಭಾವಿಗಳ ಹೆಸರು ಹೇಳಲಿ: ಸಿದ್ದರಾಮಯ್ಯ ಸವಾಲು!

ಬಿಎಸ್‌ ಯಡಿಯೂರಪ್ಪ ಈ ಹಿಂದೆ ಕೊಟ್ಟ ಅವಧಿಯಲ್ಲಿ ಮೀಸಲಾತಿ ನೀಡದೇ ಇದ್ದದ್ದಕ್ಕೆ ಶಾಪ ತಟ್ಟಿ ಅಧಿಕಾರ ಕಳೆದುಕೊಂಡರು. ಯಡಿಯೂರಪ್ಪನವರ ಸ್ಥಿತಿಯೇ ಬೊಮ್ಮಾಯಿ ಅವರಿಗೆ ಬರಬಾರದು ಎಂದು ಕಾಶಪ್ಪನವರ ನುಡಿದರು.

ನಮಗೆ ರಕ್ಷಣೆ ನೀಡಿ

ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಗೆ ಪೊಲೀಸ್‌ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಕಾರ್ಖಾನೆಯ ಕಬ್ಬು ಬೆಳೆಗಾರರ ಸಂಘದಿಂದ ಡಿಸಿಗೆ ಮನವಿ ಸಲ್ಲಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ