ಆ್ಯಪ್ನಗರ

ಸಾರಾಯಿ ಅಂಗಡಿ ತೆರೆಯುವುದು ಬಿಜೆಪಿ ನೀತಿಯಲ್ಲ: ಎಚ್‌ಡಿಕೆಗೆ ಕಾರಜೋಳ ಟಾಂಗ್‌

ಡಿಸಿಎಂ ಗೋವಿಂದ ಕಾರಜೋಳ ಅವರು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಟಾಂಗ್‌ ನೀಡಿದ್ದಾರೆ. ಬಿಜೆಪಿ ಸರಕಾರ ಹಾಗೂ ಸಂಘದ ಹಿನ್ನೆಲೆಯಿರುವ ನಮ್ಮ ಪ್ರತಿನಿಧಿಗಳು ಎಂದಿಗೂ ಮದ್ಯದಂಗಡಿ ತೆರೆಯಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Vijaya Karnataka Web 8 Aug 2020, 5:46 pm
ಬಾಗಲಕೋಟೆ: ಡಿಸಿಎಂ ಗೋವಿಂದ ಕಾರಜೋಳ ಅವರು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಟಾಂಗ್‌ ನೀಡಿದ್ದಾರೆ.
Vijaya Karnataka Web govind karjol new


ಮುಧೋಳದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಸರಕಾರ ಹಾಗೂ ಸಂಘದ ಹಿನ್ನೆಲೆಯಿರುವ ನಮ್ಮ ಪ್ರತಿನಿಧಿಗಳು ಮದ್ಯದಂಗಡಿ ತೆರೆಯಲು ಬಯಸುವುದಿಲ್ಲ. ಆರ್‌ಎಸ್‌ಎಸ್‌ ಹಿನ್ನೆಲೆ ಇರುವ ಪಕ್ಷದ ಮುಖಂಡರು, ಕಾರ್ಯಕರ್ತರು ಕೂಡ ಇದಕ್ಕೆ ಬದ್ಧರಾಗಿದ್ದಾರೆ. ಬಿಜೆಪಿ ನೀತಿ, ಸಾರಾಯಿ ಅಂಗಡಿ ತೆಗೆಯುವದಲ್ಲ ಎಂದು ಎಚ್‌ಡಿಕೆ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮನೆಬಾಗಿಲಿಗೆ ಮದ್ಯ ಪೂರೈಸುವ ಮನೆಹಾಳು ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು. ಹಳ್ಳಿಯಲ್ಲೂ ಎಂಎಸ್ಐಎಲ್ ತೆರೆಯುತ್ತಿದ್ದಾರೆ ಎನ್ನುವ ಮೂಲಕ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದರು.

‘ಮನೆಬಾಗಿಲಿಗೆ ಮದ್ಯ ಪೂರೈಸುವ ಮನೆಹಾಳು ನಿರ್ಧಾರವನ್ನು ಹಿಂಪಡೆಯಿರಿ’: ಹೆಚ್‌ಡಿಕೆ

ಹಿಂದೆಲ್ಲ ಪಾಕೇಟ್ ಸಾರಾಯಿಯನ್ನು ಹಳ್ಳಿ, ಹರಿಜನ ಕೇರಿಯಲ್ಲಿ ಮಾರಾಟ ಮಾಡುತ್ತಿದ್ದರು. ಅದನ್ನು ಬಂದ್ ಮಾಡಿದ್ವಿ. ನಮ್ಮ ನೀತಿ ಹೊಸ ಸಾರಾಯಿ ಅಂಗಡಿ ತೆರೆಯೋದಲ್ಲ. ಯಾವುದೇ ಹೊಸ ಮದ್ಯದಂಗಡಿ ಪ್ರಾರಂಭ ಮಾಡೋದಿಲ್ಲ. ಹೆಚ್ಚು ಮದ್ಯದಂಗಡಿ ತೆರೆಯುವ ಯಾವುದೇ ಆದೇಶ ಮಾಡಿಲ್ಲ. ಅದು ಸತ್ಯಕ್ಕೆ ದೂರವಾದ ಸಂಗತಿ. ಅದಕ್ಕೆ ಹೆಚ್ಚು ವ್ಯಾಖ್ಯಾನ ಮಾಡುವ ಅವಶ್ಯಕತೆಯಿಲ್ಲ. ಯಾವುದೇ ಹಳ್ಳಿಯಲ್ಲಿ ಮದ್ಯದಂಗಡಿ ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ