ಆ್ಯಪ್ನಗರ

ಬಾದಾಮಿಯಲ್ಲಿ ಕಮಲದ್ದೇ ಗೆಲುವು

ಬಾದಾಮಿ : ಬಾದಾಮಿ ಮತಕ್ಷೇತ್ರದಲ್ಲಿ ಬೂತಮಟ್ಟದಿಂದ ಎಲ್ಲ ಕಾರ್ಯಕರ್ತರು ಸಕ್ರಿಯವಾಗಿ ಶ್ರಮಿಸುತ್ತಿದ್ದು, ಬಿಜೆಪಿ ಆಡಳಿತ ಚುಕ್ಕಾಣೆ ಹಿಡಿದು, ಕರ್ನಾಟಕ ರಾಜ್ಯವೂ ಕಾಂಗ್ರೆಸ್‌ ಮುಕ್ತವಾಗಲಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಮುರಳೀಧರರಾವ್‌ ಹೇಳಿದರು.

Vijaya Karnataka 9 May 2018, 5:00 am
ಬಾದಾಮಿ : ಬಾದಾಮಿ ಮತಕ್ಷೇತ್ರದಲ್ಲಿ ಬೂತಮಟ್ಟದಿಂದ ಎಲ್ಲ ಕಾರ್ಯಕರ್ತರು ಸಕ್ರಿಯವಾಗಿ ಶ್ರಮಿಸುತ್ತಿದ್ದು, ಬಿಜೆಪಿ ಆಡಳಿತ ಚುಕ್ಕಾಣೆ ಹಿಡಿದು, ಕರ್ನಾಟಕ ರಾಜ್ಯವೂ ಕಾಂಗ್ರೆಸ್‌ ಮುಕ್ತವಾಗಲಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಮುರಳೀಧರರಾವ್‌ ಹೇಳಿದರು.
Vijaya Karnataka Web bjp is the win muralidhar rao
ಬಾದಾಮಿಯಲ್ಲಿ ಕಮಲದ್ದೇ ಗೆಲುವು


ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಐತಿಹಾಸಿಕ ಪ್ರವಾಸಿ ತಾಣ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದನ್ನು ಬಿಜೆಪಿ ಗಮನಿಸಿದೆ. ಈ ಚುನಾವಣೆಯಲ್ಲಿ ಶ್ರೀ ರಾಮುಲು ಆಯ್ಕೆ ಮಾಡಿದರೆ ಹಿಂದೆಂದೂ ಆಗದ ಅಭಿವೃದ್ಧಿ ಆಗಲಿದೆ ಎಂದು ಭರವಸೆ ನೀಡಿದರು.

ಕಳೆದ ವರ್ಷಗಳಿಂದ ಜನರ ಮನದಲ್ಲಿ ಕಾಂಗ್ರೆಸ್‌ನ್ನು ರಾಜ್ಯದಿಂದ ಹೊರಹಾಕಿ ಬಿಜೆಪಿ ಅಧಿಕಾರಕ್ಕೆ ತರುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಹಿಂದು ಮುಸ್ಲಿಂ ಜನರಲ್ಲಿ ಬಿರುಕು ಮೂಡುವಂತೆ ಹಾಗೂ ವೀರಶೈವ ಲಿಂಗಾಯತ ಸಮಾಜ ಅಗಲಿಸಿ ಧರ್ಮ ಒಡೆಯುವ ಕೆಲಸ ಮಾಡಿದವರನ್ನು ಕ್ಷೇತ್ರದ ಮತದಾರರು ಕಡೆಗಣಿಸಲಿದ್ದಾರೆ.

ಕಾಂಗ್ರೆಸ್‌ ಅವಧಿಯಲ್ಲಿ 3800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಸರಕಾರ ಬಂದಲ್ಲಿ ರೈತಪರ ಯೋಜನೆ ಜಾರಿಗೊಳಿಸಲಾಗುವುದು, ಲಕ್ಷ ದವರೆಗಿನ ಸಾಲ ಮನ್ನಾ ಮಾಡುವುದು ಸೇರಿದಂತೆ ನೀರಾವರಿ ಯೋಜನೆ, ಮಹದಾಯಿ ನದಿ ನೀರು ವಿವಾದ ಪರಿಹರಿಸಲಾಗುವುದು ಎಂದು ತಿಳಿಸಿದರು.

ಅಧಿಕಾರ ಪಡೆದ ಒಂದು ತಿಂಗಳಲ್ಲೇ ಗುಂಡಾಗಿರಿ ಮಾಡುವವರನ್ನು ಜೈಲಿಗಟ್ಟಲಾಗುವುದು. ಶ್ರೀರಾಮುಲು ನಿಷ್ಠಾವಂತ ಬಿಜೆಪಿ ವರಿಷ್ಠರಾಗಿದ್ದು, ಅವರ ನಡೆ ನುಡಿಗೆ ತಕ್ಕಂತೆ ಗೆಲ್ಲುವುದು ನಿಶ್ಚಿತ. ಸಿದ್ದರಾಮಯ್ಯ ಏನೇ ರಣತಂತ್ರ ಹೂಡಿ ಹಣದ ಹೊಳೆ ಹರಿಸಿದರೂ ಸೋಲು ಶತಸಿದ್ಧ ಎಂದರು.

ವಿಪ ಸದಸ್ಯ ಅರುಣ ಶಹಪೂರ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಶಾಂತಗೌಡ ಪಾಟೀಲ, ಮಹಾಂತೇಶ ಮಮದಾಪೂರ, ಕೆ.ಬಿ.ಜನಾಲಿ, ಆರ್‌.ವಿ.ಶೀಲವಂತರ, ಬಿ.ಪಿ.ಹಳ್ಳೂರ, ಎಂ.ವಿ.ಬನ್ನಿ, ಅಶೋಕ ಕಟ್ಟಿಮನಿ, ಈಶ್ವರಚಂದ್ರ ಹೊಸಮನಿ, ಸಿದ್ದಣ್ಣ ಶಿವನಗುತ್ತಿ ಸೇರಿದಂತೆ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ