ಬಾಗಲಕೋಟೆ: ಬಿಜೆಪಿ ಮುಖಂಡರ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಕಾನೂನು ಘಟಕದ ಸಂಚಾಲಕ, ನ್ಯಾಯವಾದಿ ಈರಣ್ಣ ಯಂಡಿಗೇರಿ ಸೈಬರ್ ಠಾಣೆಯಲ್ಲಿದೂರು ಸಲ್ಲಿಸಿದ್ದಾರೆ.
ಬಿಜೆಪಿ ಮುಖಂಡರ ತೇಜೋವಧೆ ಮಾಡುತ್ತಿರುವ ಬಗ್ಗೆ ಎಸ್ಪಿಯವರಿಗೆ ಅವರು ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಲಕ್ಷಿತ್ರ್ಮೕಪುರ ಗ್ರಾಮದ ಚರಣಗೌಡ, ಮಂಜುನಾಥ ನಗರದ ಸಿದ್ದಗೌಡ ಹಾಗೂ ಚಿಕ್ಕ ಬಾಣಾವರದ ರಮೇಶ್ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರುಗಳು, ಸಿಎಂ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆಯವರ ಕುರಿತು ಅವಹೇಳನಕಾರಿ ಫೋಟೊ, ಸಂದೇಶಗಳನ್ನು ಫೇಸ್ಬುಕ್ನಲ್ಲಿಪ್ರಕಟಿಸಿದ್ದಾರೆ. ಇವುಗಳನ್ನು ವಾಟ್ಸ್ ಆ್ಯಪ್ ಮೂಲಕ ಪ್ರಸರಣಗೊಳಿಸಲಾಗುತ್ತಿದೆ. ''ಜಾಗೃತ ಮತದಾರರ ವೇದಿಕೆ', ''ಎಚ್ಡಿಕೆ ಗಜಪಡೆ' ಗ್ರೂಪ್ಗಳ ಮೂಲಕ ಹೇಳಿಕೆ ಪ್ರಕಟಿಸಲಾಗಿದೆ ಎಂದು ದೂರಿನಲ್ಲಿವಿವರಿಸಲಾಗಿದೆ. ದೇಶದ ಭದ್ರತೆಗೆ ಧಕ್ಕೆಯಾಗುವ ರೀತಿಯಲ್ಲಿಸಂದೇಶಗಳನ್ನು ಪ್ರಕಟಿಸಿರುವವರ ವಿರುದ್ಧ ದೂರು ದಾಖಲಿಸಬೇಕು, ತಕ್ಷಣ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಎಸ್ಪಿಯವರಿಗೆ ದೂರು ನೀಡುವ ಸಂದರ್ಭದಲ್ಲಿಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ, ಸಂತೋಷ ಜೋಷಿ, ಶಿವಾನಂದ ಟವಳಿ, ಶೈಲಾ ಅಂಕಲಗಿ ಇದ್ದರು.
ಬಿಜೆಪಿ ಮುಖಂಡರ ತೇಜೋವಧೆ ಮಾಡುತ್ತಿರುವ ಬಗ್ಗೆ ಎಸ್ಪಿಯವರಿಗೆ ಅವರು ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಲಕ್ಷಿತ್ರ್ಮೕಪುರ ಗ್ರಾಮದ ಚರಣಗೌಡ, ಮಂಜುನಾಥ ನಗರದ ಸಿದ್ದಗೌಡ ಹಾಗೂ ಚಿಕ್ಕ ಬಾಣಾವರದ ರಮೇಶ್ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರುಗಳು, ಸಿಎಂ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆಯವರ ಕುರಿತು ಅವಹೇಳನಕಾರಿ ಫೋಟೊ, ಸಂದೇಶಗಳನ್ನು ಫೇಸ್ಬುಕ್ನಲ್ಲಿಪ್ರಕಟಿಸಿದ್ದಾರೆ. ಇವುಗಳನ್ನು ವಾಟ್ಸ್ ಆ್ಯಪ್ ಮೂಲಕ ಪ್ರಸರಣಗೊಳಿಸಲಾಗುತ್ತಿದೆ. ''ಜಾಗೃತ ಮತದಾರರ ವೇದಿಕೆ', ''ಎಚ್ಡಿಕೆ ಗಜಪಡೆ' ಗ್ರೂಪ್ಗಳ ಮೂಲಕ ಹೇಳಿಕೆ ಪ್ರಕಟಿಸಲಾಗಿದೆ ಎಂದು ದೂರಿನಲ್ಲಿವಿವರಿಸಲಾಗಿದೆ. ದೇಶದ ಭದ್ರತೆಗೆ ಧಕ್ಕೆಯಾಗುವ ರೀತಿಯಲ್ಲಿಸಂದೇಶಗಳನ್ನು ಪ್ರಕಟಿಸಿರುವವರ ವಿರುದ್ಧ ದೂರು ದಾಖಲಿಸಬೇಕು, ತಕ್ಷಣ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಎಸ್ಪಿಯವರಿಗೆ ದೂರು ನೀಡುವ ಸಂದರ್ಭದಲ್ಲಿಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ, ಸಂತೋಷ ಜೋಷಿ, ಶಿವಾನಂದ ಟವಳಿ, ಶೈಲಾ ಅಂಕಲಗಿ ಇದ್ದರು.